Read - 2 minutesಕಲ್ಪ ಮೀಡಿಯಾ ಹೌಸ್ | ಸೊರಬ |
ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಓಂಕಾರ ನಾಯಕ್ ಅವರಿಗೆ ಇಲಾಖೆಯ ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರ ಸಂಘದ ವತಿಯಿಂದ ಲೋಕೋಪಯೋಗಿ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ವಯೋನಿವೃತ್ತಿ ಹೊಂದಿದ ಸಹಾಯಕ ಇಂಜಿನಿಯರ್ ಓಂಕಾರ ನಾಯಕ್ ಮಾತನಾಡಿ, ಕಷ್ಟದಿಂದಲೇ ವಿದ್ಯಾಭ್ಯಾಸ ಮಾಡಿ ಸಹೋದರನ ಸಹಾಯದಿಂದ ಸರ್ಕಾರಿ ಕೆಲಸ ಪಡೆಯಲು ಸಾಧ್ಯವಾಯಿತು. ಇದಕ್ಕೂ ಮೊದಲು ರಾಜಕಾರಣ ಪ್ರವೇಶಿಸಿ, ನಂತರ ಗುತ್ತಿಗೆದಾರನಾಗಿ ಕೆಲಸ ಮಾಡಿ 40ನೇ ವರ್ಷಕ್ಕೆ ಸರ್ಕಾರಿ ಕೆಲಸ ಪಡೆದು ಮೊದಲು ಹಿರೇಕೆರೂರುನಲ್ಲಿ ಸೇವೆ ಸಲ್ಲಿಸಿ, ಕುಷ್ಠಗಿ ಹಾಗೂ ಸೊರಬದಲ್ಲಿ ಅತಿ ಹೆಚ್ಚು ಅವಧಿ ಸೇವೆ ಸಲ್ಲಿಸಿದ ತೃಪ್ತಿ ತಂದಿದೆ. ನಾವು ಮಾಡುವ ಕಾರ್ಯದಲ್ಲಿ ಪ್ರಾಮಾಣಿಕತೆ ಇರಬೇಕು. ಆಗ ಮಾತ್ರ ನಮ್ಮ ಸೇವೆಗೆ ಗೌರವ ದೊರೆಯುತ್ತದೆ ಎಂದು ಹೇಳಿ ಬಾವುಕರದರು.
ಇಲಾಖೆಯ ಮುಖ್ಯ ಇಂಜಿನಿಯರ್ ಉಮಾನಾಯ್ಕ ಮಾತನಾಡಿ, ಓಂಕಾರ್ ನಾಯಕ್ ಅವರ ಸೇವೆ ಹಾಗೂ ಅವರ ಅನುಭವವನ್ನು ಇಲಾಖೆಗೆ ಇನ್ನಷ್ಟು ಅಗತ್ಯವಿತ್ತು ಎಂದರು.
ಈ ಸಂದರ್ಭದಲ್ಲಿ ಗುತ್ತಿಗೆ ದಾರ ಸಂಘದ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷ ಗಣಪತಿ, ಬಂಗಾರಪ್ಪ, ನಿವೃತ್ತ ಮುಖ್ಯ ಇಂಜಿನಿಯರ್ ಶೇಷಪ್ಪ, ಸಹಾಯಕ ಇಂಜಿನಿಯರ್ ಗಳಾದ ಚಂದ್ರಪ್ಪ, ಕಿರಣ್ ಕುಮಾರ್, ಬಿಂದು ನಾಗರಾಜ್, ಗಂಗಾಧರ, ಸಂಕೇಶ್, ಗುತ್ತಿಗೆದಾರರಾದ ಓಂಕಾರ್ ತವನಂದಿ, ಜಗದೀಶ್,ನಾಗರಾಜ್, ಬಂಗಾರಪ್ಪ, ರಘು ಭಂಡಾರಿ, ರವಿ ಬರಗಿ ಮೊದಲಾದವರಿದ್ದರು.
ವರದಿ: ಮಧುರಾಮ್, ಸೊರಬ
Discussion about this post