ಕಲ್ಪ ಮೀಡಿಯಾ ಹೌಸ್ | ಸೊರಬ |
ಉತ್ತಮ ಆರೋಗ್ಯ ಒಂದು ಸಂಪತ್ತು. ಒಳ್ಳೆಯ ಆರೋಗ್ಯಕ್ಕಿಂತ ಮತ್ತೊಂದು ಭಾಗ್ಯವಿಲ್ಲ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವೈದ್ಯ ಸಾಹಿತಿ ಡಾ. ಎಂ.ಕೆ. ಭಟ್ ಹೇಳಿದರು.
ದೇಶದ ಸಮೃದ್ಧಿಯಲ್ಲಿ ಪರಿಸರದ ಕೊಡುಗೆ ಅಪಾರವಾದುದು. ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಸರ್ವರನ್ನು ಸಮಾನತೆಯಿಂದ ಕಾಣುವ ದೇಶ ಭಾರತ. ಪ್ರತಿಯೊಬ್ಬರಿಗೂ ಇಲ್ಲಿ ಉಜ್ವಲ ಭವಿಷ್ಯವಿದೆ. ಇಷ್ಟೊಂದು ಭವ್ಯ ಭವಿಷ್ಯತ್ತನ್ನು ಹೊಂದಿದ ದೇಶದಲ್ಲಿ ಜೀವಿಸುತ್ತಿರುವ ನಾವೇ ಧನ್ಯರು ಎಂದರು.
ಗ್ರಾಮೀಣ ಜನರಿಗೆ ಆರೋಗ್ಯದ ಅರಿವು ಅಗತ್ಯವಿದೆ. ಅಪಾಯಕಾರಿ ಸನ್ನಿವೇಶದಲ್ಲಿ ಪ್ರಾಣಪಾಯದಿಂದ ಪಾರಾಗಲು ಪ್ರಥಮ ಚಿಕಿತ್ಸೆಯ ವಿಧಾನಗಳನ್ನು ತಿಳಿದಿರಬೇಕು . ನಾಯಿ ಕಚ್ಚಿದರೆ ಮತ್ತು ನಾಗರ ಹಾವಿನಂತಹ ವಿಷ ಜಂತುಗಳು ಕಚ್ಚಿದರೆ ಪ್ರಥಮ ಚಿಕಿತ್ಸೆಯಾಗಿ ನಿರ್ವಹಿಸುವ ತಂತ್ರಗಾರಿಕೆಯನ್ನು ವಿವರಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post