ಕಲ್ಪ ಮೀಡಿಯಾ ಹೌಸ್ | ಸೊರಬ |
ವಾಹನ ಚಾಲಕರ ಸಂಘ 33ನೇ ವರ್ಷದ ಗಣೇಶೋತ್ಸವನ್ನು Ganeshothsava ಸಮಿತಿ ವತಿಯಿಂದ ಪ್ರತಿಷ್ಟಾಪಿಸಿದ ಗಣಪತಿಗೆ ಬುಧವಾರ ವಿಶೇಷ ಪೂಜೆ, ಗಣಹೋಮ-ಹವನಗಳು ಜರುಗಿತು.
ಮಹಾಬಲೇಶ್ವರ ಭಟ್ ಅವರ ನೇತೃತ್ವದಲ್ಲಿ ಸತ್ಯನಾರಾಯಣ ಪೂಜೆ, ಶನಿಕಥೆ, ಗಣಹೋಮ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆದವು. ಪೂಜೆಯ ನೇತೃತ್ವವನ್ನು ವಾಸುದೇವ ಬೆನ್ನುರು (ಲಕ್ಷ್ಮಣ ಶೋರೂಂ)ಅವರ ಕುಟುಂಬಸ್ಥರು ವಹಿಸಿದ್ದರು. ವಿಶೇಷವಾಗಿ ಮಹಾಗಣಪತಿಗೆ ಪುಷ್ಪಲಂಕಾರ ಮಾಡಲಾಗಿತ್ತು. ಬಂದಂತಹ ಎಲ್ಲಾ ಸಾರ್ವಜನಿಕರಿಗೂ ಹಾಗೂ ಭಕ್ತಾದಿಗಳಿಗೆ ಗಣೇಶೋತ್ಸವ ಸಮಿತಿ ವತಿಯಿಂದ ಅನ್ನದಾಸೋಹ ಸೇವೆ ನಡೆಯಿತು.
33ನೇ ವರ್ಷದ ಗಣಪತಿ ವಿಸರ್ಜನಾ ಮೆರವಣಿಗೆಯು ಗುರುವಾರ ಜಾನಪದ ಕಲಾ ತಂಡ ಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ವಿಸರ್ಜನಾ ಮೆರವಣಿಗೆಯನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ವಾಹನ ಚಾಲಕರ ಸಂಘ ಗಣೇಶೋತ್ಸವ ಸಮಿತಿಯವರು ತಿಳಿಸಿದ್ದಾರೆ.
Also read: 3000 ಕ್ಯೂಸೆಕ್ ನೀರು ಹರಿಸಲು ನಮ್ಮ ಬಳಿ ನೀರಿಲ್ಲ, ಆಕ್ಷೇಪಣೆ ಸಲ್ಲಿಸಲು ನಿರ್ಧಾರ: ಸಿಎಂ
ಗಣೇಶೋತ್ಸವ ಸಮಿತಿ ಅಧ್ಯಕ್ಷ , ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಮತ್ತು ಸಮಿತಿಯ ಸರ್ವ ಸದಸ್ಯರು ಸಾರ್ವಜನಿಕರೂ ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post