ಕಲ್ಪ ಮೀಡಿಯಾ ಹೌಸ್ | ಸೊರಬ |
ಯೋಗ ಒಂದೇ ನಮ್ಮ ಶರೀರವನ್ನು ಸ್ವಾಸ್ಥ ರೀತಿಯಲ್ಲಿ ಇಟ್ಟುಕೊಳ್ಳಲು ಸಹಕಾರಿಯಾದ ವಿಧಾನವಾಗಿದೆ. ಯೋಗದ ಮೂಲಕ ಶಾರೀರಿಕ ನಿಯಂತ್ರಣವನ್ನು ಸಾಧಿಸಲು ಸಾಧ್ಯ ಎಂದು ಜಡೆ ಹಿರೇಮಠದ ಶ್ರೀ ಷ. ಬ್ರಹ್ಮ ಘನ ಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಚಾಮರಾಜಪೇಟೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಯುವಾ ಬ್ರಿಗೇಡ್ ಇವರ ಸಂಯುಕ್ತ ಆಶ್ರಯದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿ, ಯೋಗದ ಕೆಲವು ಆಸನಗಳನ್ನು ಮಾಡಿ ತೋರಿಸಿದರು.
ಮನುಷ್ಯ ಇಂದು ತಾನು ಸೇವಿಸುವ ಆಹಾರ ಪದ್ಧತಿಯಿಂದಾಗಿ ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಇದರಿಂದ ಸಮಾಜದಲ್ಲಿ ಆರೋಗ್ಯವಂತ ವ್ಯಕ್ತಿಗಳನ್ನು ನೋಡಲು ಆಗುವುದಿಲ್ಲ. ಜೀರ್ಣಕ್ರಿಯೆ ಮನುಷ್ಯನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾರು ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಾರೋ ಅವರಿಗೆ ಉತ್ತಮವಾದ ಆರೋಗ್ಯ ಇರುತ್ತದೆ ಎಂದರು.
Also read: ವಿಶ್ವ ಯೋಗ ದಿನ: ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ
ರಾಜಯೋಗಿ ಬ್ರಹ್ಮಕುಮಾರ ವಿಶ್ವೇಶ್ವರ ಹಳ್ಳಿಮನೆ ಗೇರುಸೊಪ್ಪ ಇವರು ಮಾತನಾಡಿ, ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ್ದು ಭಾರತ. ಆದರೆ ಇಂದು ಅದನ್ನು ಅತಿ ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿರುವುದು ಇತರೆ ದೇಶಗಳು. ಪ್ರಧಾನಮಂತ್ರಿ ಮೋದಿಜಿಯವರು ಯೋಗದ ಮಹತ್ವವನ್ನರಿತು ಜೂನ್ 21ನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆ ಎಂದು ಘೋಷಿಸಿ ಅದನ್ನು ಪ್ರತಿವರ್ಷ ಅತ್ಯಂತ ಪರಿಣಾಮಕಾರಿಯಾಗಿ ನಡೆಸುವಂತೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಇದರಿಂದ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕುಮಾರಿ ಶಾರದಾ ಹೆಗಡೆ ಪತಂಜಲಿ ಯೋಗ ಸಮಿತಿ ಶಿರಸಿ – ಭಾರತ ಸ್ವಾಭಿಮಾನ ಟ್ರಸ್ಟ್ ಹರಿದ್ವಾರ, ಈಶ್ವರಿ ವಿಶ್ವವಿದ್ಯಾನಿಲಯದ ಕುಮಾರಿ ಚೇತನ ಅಕ್ಕ , ರಾಜಯೋಗಿನಿ ಬಿ.ಕೆ ಮಾದೇವಿ ಆನವಟ್ಟಿ ,ನಾಗರಾಜ ಗುತ್ತಿ ಯುವಾ ಬ್ರಿಗೇಡ್ ನ ತಾಲೂಕು ಸಂಚಾಲಕ ಮಹೇಶ್ ಖಾರ್ವಿ , ರಂಗನಾಥ ಮೊಗವೀರ, ಲೋಕೇಶ್ , ಅನಿಲ್ ಮಾಳವಾದೇ, ಸಿ.ಪಿ. ಈರೇಶಗೌಡ , ಕೃಷ್ಣ ಮೊಗವೀರ್, ವಿನೋದ್ ವಾಲ್ಮೀಕಿ, ವಿದ್ಯಾರ್ಥಿನಿಲಯದ ಮೇಲ್ವಿಚಾರಕರಾದ ಸರಸ್ವತಿ, ಪ್ರಮುಖರಾದ ಪ್ರಕಾಶ ತಲಕಾಲಕೊಪ್ಪ, ಡಾ. ಜ್ಞಾನೇಶ್, ಶ್ರೀಧರಮೂರ್ತಿ, ಲಕ್ಷ್ಮಿ ಮುರುಳಿಧರ್, ರೇಣುಕಮ್ಮ ಗೌಳಿ, ಸರಸ್ವತಿ ನಾವಡ, ಗೋಪಾಲಪ್ಪ , ಸಾವಿತ್ರಿ ನಾಗರಾಜ್ ಗುತ್ತಿ, ಜಯದೇವ್ ಶಿವರಾಮ್, ಶಾರದಕ್ಕ, ವಿದ್ಯಾರ್ಥಿನಿಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post