ಕಲ್ಪ ಮೀಡಿಯಾ ಹೌಸ್ | ಸೊರಬ |
ದಸರಾ ಉತ್ಸವ ಆಚರಣಾ ಸಮಿತಿಯಿಂದ ತಾಲೂಕು, ಹಾಗೂ ಪುರಸಭೆ ಸಹಕಾರದೊಂದಿಗೆ ಹಮ್ಮಿಕೊಂಡಿರುವ ಸಾರ್ವಜನಿಕ ದಸರಾ ಉತ್ಸವ ಅಂಗವಾಗಿ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ದುರ್ಗಾ ದೇವಿಯ ಪ್ರತಿಷ್ಠಾಪನೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ತಹಶೀಲ್ದಾರ್ ಶಿವಾನಂದ ಪಿ. ಠಾಣೆ ದಸರಾ ಉತ್ಸವಕ್ಕೆ ಚಾಲನೆ ನೀಡಿದರು.
ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ಸಮಿತಿಯು ತೀರ್ಮಾನಿಸಿದ್ದು, ಈ ಭಾರಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ ಎಳೆಯಲಾಗಿದೆ. ಉಳಿದಂತೆ ಧಾರ್ಮಿಕ ಆಚರಣೆಗಳು ಎಂದಿನಂತೆ ನಡೆಯಲಿವೆ. ಒಂಬತ್ತು ದಿನಗಳ ಕಾಲ ಪೂಜಾ ವಿಧಿವಿಧಾನಗಳು ನಡೆಯಲಿವೆ.
ಕಲಾವಿದ ಕೆ.ಎನ್. ರಾಘು ನಿರ್ಮಾಣ ಮಾಡಿದ ಶ್ರೀ ದೇವಿಯ ಮೂರ್ತಿಯನ್ನು ಇಲ್ಲಿನ ಶಿರಾಳಕೊಪ್ಪ ರಸ್ತೆಯಿಂದ ರಾಜಬೀದಿ ಮಾರ್ಗವಾಗಿ ಪ್ರತಿಷ್ಠಾಪನಾ ಸ್ಥಳದವರೆಗೂ ಕರೆತರಲಾಯಿತು. ಹೊಡಭಟ್ಟೆ ಸುಬ್ಬರಾಯಭಟ್ಟರು, ಸತ್ಯನಾರಾಯಣರಾವ್ ಹಾಗೂ ವೆಂಕಟಗಿರಿ ಭಟ್ ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಎನ್. ಷಣ್ಮುಖಾಚಾರ್, ಪ್ರಧಾನ ಕಾರ್ಯದರ್ಶಿ ಎಚ್.ಎಂ. ಪ್ರಶಾಂತ್ ಹುಣವಳ್ಳಿ, ಖಜಾಂಚಿ ಸತೀಶ್ ಬೈಂದೂರು, ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್, ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಸದಸ್ಯರಾದ ವೀರೇಶ್ ಮೇಸ್ತ್ರಿ, ಯು. ನಟರಾಜ್, ಪ್ರಭು, ಆಫ್ರೀನ್, ಜಯಲಕ್ಷ್ಮಿ, ಆಶ್ರಯ ಸಮಿತಿ ಸದಸ್ಯರಾದ ಪ್ರಭು, ಶಿವು, ವಿಹಿಂಪ ತಾಲೂಕು ಅಧ್ಯಕ್ಷ ಎಂ.ಎಸ್. ಕಾಳಿಂಗರಾಜ್, ಬಜರಂಗದಳ ತಾಲೂಕು ಸಂಚಾಲಕ ರಂಗನಾಥ ಮೊಗವೀರ್, ಪ್ರಮುಖರಾದ ಎಚ್.ಎಸ್. ಮಂಜಪ್ಪ, ಎಂ.ಎನ್. ಗುರುಮೂರ್ತಿ, ಪ್ರಭಾಕರ ರಾಯ್ಕರ್, ಪಾಣಿರಾಜಪ್ಪ, ದಿವಾಕರ ಭಾವೆ, ಎಚ್. ಗುರುಮೂರ್ತಿ, ಸುಧೀರ್ ಪೈ, ಎ. ವೀರಭದ್ರಪ್ಪ ಇಂಡುವಳ್ಳಿ, ದೀಪಕ್ ದೋಂಗಡೇಕರ್, ಸರಸ್ವತಿ ನಾವುಡಾ, ಆರ್.ಎಚ್. ಮಾಲತೇಶ್ ಮಾಸ್ತರ್, ಟಿ.ಆರ್. ಸುರೇಶ್, ಡಿ.ಎಸ್. ಶಂಕರ್ ಶೇಟ್, ಅಶೋಕ್ ಶೇಟ್, ಯುವಾ ಬ್ರಿಗೇಡ್ನ ಮಹೇಶ್ ಖಾರ್ವಿ, ಶ್ರೀ ರಂಗನಾಥ ವಿವಿದ್ಧೋದ್ಧೇಶ ಸಹಕಾರ ಸಂಘದ ನಿರ್ದೇಶಕ ನೆಮ್ಮದಿ ಶ್ರೀಧರ್, ನೆಮ್ಮದಿ ಸುಬ್ಬು ಸೇರಿದಂತೆ ಇತರರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post