No Result
View All Result
PESITM hosts Mock CET 2026 to Strengthen KCET Preparation
English Articles

PESITM hosts Mock CET 2026 to Strengthen KCET Preparation

by ಕಲ್ಪ ನ್ಯೂಸ್
March 31, 2026
0

Kalpa Media House  |  Shivamogga  | PES Institute of Technology and Management #PESITM conducted Mock CET 2026 on March 30...

Read moreDetails
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

March 30, 2026
SWR to run special trains for Good Friday, Easter rush

SWR to run special trains for Good Friday, Easter rush

March 30, 2026
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಪಿಆರ್‌ಓ ಪ್ರವೀಣ್ ಅಧಿಕಾರ ಸ್ವೀಕಾರ

South Western Railway | Praveen Takes Charge as Hubballi Divisional Public Relations Officer

March 28, 2026
26 ವರ್ಷದ ಯುವಕನಿಗೆ ಮರುಜೀವ ಕೊಟ್ಟ ಮೆಡಿಕವರ್ ಆಸ್ಪತ್ರೆ | ಏನಾಗಿತ್ತು ಯುವಕನಿಗೆ?

Critical Condition Turned Around with Timely Medical Intervention

March 27, 2026
  • Advertise With Us
  • Grievances
  • About Us
  • Contact Us
Wednesday, April 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಹಠದಿಂದ ಐಪಿಎಸ್ ಅಧಿಕಾರಿಯಾದ ಮಹಾನ್ ಸಾಧಕಿಯ ಯಶೋಗಾಥೆ…

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 31, 2021
in Special Articles
0
ಹಠದಿಂದ ಐಪಿಎಸ್ ಅಧಿಕಾರಿಯಾದ ಮಹಾನ್ ಸಾಧಕಿಯ ಯಶೋಗಾಥೆ…
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

14 ವರ್ಷಕ್ಕೆ ಮದುವೆಯಾಗಿ, 18 ವರ್ಷಕ್ಕೆ ಎರಡು ಮಕ್ಕಳ ತಾಯಿಯಾಗಿ, ನಂತರ ಹಠದಿಂದ IPS ಅಧಿಕಾರಿಯಾದ ಮಹಾನ್ ಸಾಧಕಿಯೊಬ್ಬಳ ಯಶೋಗಾಥೆಯಿದು.

ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ

ಹೆಸರು ‘ಎನ್ ಅಂಬಿಕಾ’. ಹತ್ತನೇ ತರಗತಿ ಕೂಡಾ ಪಾಸಾಗದ ಆಕೆಯನ್ನು ಬಡತನದ ಕಾರಣದಿಂದ 14 ವಯಸ್ಸಿಗೆ ತಮಿಳುನಾಡಿನ ದಿಂಡಿಗಲ್ ನಲ್ಲಿ ಕಾನ್ಸ್ಟೇಬಲ್ ಒಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು. ಹದಿನೆಂಟು ತುಂಬುವುದರೊಳಗೆ ಐಗನ್ ಮತ್ತು ನಿಹಾರಿಕಾ ಎಂಬ ಎರಡು ಮಕ್ಕಳ ತಾಯಿಯಾಗಿದ್ದಳಾಕೆ.

ಒಮ್ಮೆ ಗಣರಾಜ್ಯೋತ್ಸವ ಪರೇಡನಲ್ಲಿ ಗಂಡನೊಂದಿಗೆ ತಾನೂ ಭಾಗವಹಿಸಿದ್ದಳು. ಅದು ಆಕೆಯ ಜೀವನಕ್ಕೆ ತಿರುವು ನೀಡಿದ ಮಹತ್ವದ ಘಟನೆಯಾಗಿ ಹೋಯಿತು. ಅಲ್ಲಿ ಗಂಡ ಭಾಗವಹಿಸಿದ್ದ ಪ್ರತಿಯೊಬ್ಬ ಹಿರಿಯ ಅಧಿಕಾರಿಗೂ ಸೆಲ್ಯೂಟ್ ಮಾಡುತ್ತಿದ್ದ. ಅದು ಆಕೆಯಲ್ಲಿ ಒಂದು ದೊಡ್ಡ ಸಂಗ್ರಾಮವನ್ನೆ ಹುಟ್ಟು ಹಾಕಿತು.


ಬಂದ ಮೇಲೆ ಗಂಡನನ್ನು ಕೇಳಿ ವಿಷದವಾಗಿ ಎಲ್ಲವನ್ನೂ ತಿಳಿದುಕೊಂಡಳು. ಅವರು IPS ಪಾಸು ಮಾಡಿದ ದೊಡ್ಡ ಅಧಿಕಾರಿಗಳೆಂದೂ, ಉಳಿದವರೂ ತನ್ನ ಮೇಲಾಧಿಕಾರಿಗಳೆಂದೂ, ಉನ್ನತ ಶಿಕ್ಷಣ ಪಡೆದು, ಪರೀಕ್ಷೆಗಳನ್ನು ಬರೆದು ಪಾಸಾದವರೆಂದೂ ಅವರಿಗೆ ಗೌರವ ಪೂರ್ವಕವಾಗಿ ಸೆಲ್ಯೂಟ್ ಮಾಡುವುದು ತನ್ನ ಕರ್ತವ್ಯವೆಂದೂ ತಿಳಿಸಿದ. ಆ ಕ್ಷಣವೇ ಆಕೆಯಲ್ಲೊಂದು ಆಸೆ ಹುಟ್ಟಿತು, ಬೆಳೆಯಿತು, ಹಠವಾಗಿ ಪರಿಣಮಿಸಿತು. ನೆನಪಿಡಿ ಆಗ ಆಕೆ ಹತ್ತನೆ ತರಗತಿ ಕೂಡಾ ಪಾಸಾಗಿರಲಿಲ್ಲ.

ತಾನೂ ಪೋಲಿಸ್ ಉನ್ನತಾಧಿಕಾರಿಯಾಗಬೇಕೆಂಬ ಮನದಿಂಗಿತವನ್ನು ತನ್ನ ಗಂಡನೊಂದಿಗೆ ಹೇಳಿಕೊಂಡಳು, ಸಾದ್ಯತೆಗಳನ್ನೆಲ್ಲ ಪರಿಶೀಲಿಸಿ ಆತ ಒಪ್ಪಿಗೆ ನೀಡಿದ. ಮೊದಲು ಖಾಸಗಿಯಾಗಿ ತರಬೇತಿ ಪಡೆದು ಹತ್ತನೇ ತರಗತಿ ಪರೀಕ್ಷೆಗೆ ಸಿದ್ಧಗೊಂಡಳು. ಅದು ಆಕೆಯ ಜೀವನದ ಕನಸು, ಹಠವಾದ್ದರಿಂದ ಓದಿ ಉನ್ನತ ಶ್ರೇಣಿಯಲ್ಲಿ ಪಾಸಾದಳು. ಪಟ್ಟು ಬಿಡದೇ ದೂರ ಶಿಕ್ಷಣದಿಂದ ಪದವಿಯನ್ನೂ ಪಡೆದಳು.


ಮುಂದೆ? UPSC ತರಬೇತಿಯೆಂದರೆ ಸಾಮಾನ್ಯವೆ? ಅದಾಗಲೆ ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಾರೆ. ಆದರೆ ಗಂಡ ತನ್ನ ಕೆಲಸದ ಜೊತೆ ಮನೆ, ಮಕ್ಕಳ ಜವಾಬ್ದಾರಿ ಹೊತ್ತು ಆಕೆಯ ಕನಸಿಗೆ ಬೆಂಗಾವಲಾಗಿ ನಿಂತ. ತರಬೇತಿಗಾಗಿ ಚೆನ್ನೈ ನಲ್ಲಿ ಆಕೆಗೆ ಬೇಕಾದ ಎಲ್ಲ ಅನುಕೂಲಗಳನ್ನು ಮಾಡಿಕೊಟ್ಟ.

ದೂರಶಿಕ್ಷಣದಲ್ಲಿಯೇ ವಿದ್ಯಾಬ್ಯಾಸ ಮುಗಿಸಿದ್ದ ಆಕೆಗೆ UPSC ಯ ಪರೀಕ್ಷೆ ಕಠಿಣವಾಯಿತು. ಮೂರು ಬಾರಿ ಪರೀಕ್ಷೆ ಕಟ್ಟಿದಳು, ಯಶಸ್ಸು ಸಿಗಲಿಲ್ಲ. ಗಂಡ, ಮಕ್ಕಳಿಂದ ದೂರವಿದ್ದು ಪಟ್ಟ ಶ್ರಮ ವ್ಯರ್ಥವಾದದ್ದಕ್ಕೆ ತುಂಬ ಬೇಸರವೂ ಆಯಿತು. ಗಂಡ ಇನ್ನು ಸಾಕು ಮನೆಗೆ ಬಂದು ಬಿಡು ಎಂದ. ಇನ್ನೊಂದು ಬಾರಿ ಪ್ರಯತ್ನಿಸಿ ಬಿಡೋಣ ಸಾದ್ಯವಾಗದಿದ್ದರೆ ಯಾವುದಾದರೂ ಶಾಲೆಯಲ್ಲಿ ಟೀಚರ್ ಆಗಿಬಿಡುವುದೆಂದೂ ನಿರ್ಧರಿಸಿದ್ದಳು.


ಆದರೆ ಕೊನೆಗೂ ಆ ದೇವರು ತಪಸ್ಸಿನಂತಹ ಆಕೆಯ ಶ್ರಮ ಮತ್ತು ಹಠಕ್ಕೆ ವರ ನೀಡಿಯೇ ಬಿಟ್ಟ. ನಾಲ್ಕನೆಯ ಪ್ರಯತ್ನದಲ್ಲಿ ಪ್ರಿಲಿಮ್ಸ್, ಮೇನ್ಸ್, ಇಂಟರ್ವ್ಯೂ ನಲ್ಲೂ ಆಕೆ ಪಾಸಾದಳು. “ಎನ್ ಅಂಬಿಕಾ IPS” ಆದಳು.

ಅಂಬಿಕಾ ಈಗ ಮುಂಬಯಿ ನಾರ್ಥ 4 ಜೋನ್ ನಲ್ಲಿ ಡಿಸಿಪಿ. ಹಲವಾರು ಕ್ಲಿಷ್ಟ ಕೇಸುಗಳನ್ನು ಸುಲಭವಾಗಿ ಪರಿಹರಿಸಿದ್ದರಿಂದ ಆಕೆಗೆ 2019 ರಲ್ಲಿ ‘ಲೋಕಮತ್’ (ಲೋಕಮತ್ ಮಹಾರಾಷ್ಟ್ರೀಯನ್ ಆಫ್ ದಿ ಇಯರ್) ಗೌರವ ನೀಡಲಾಯಿತು. ಈಗಾಕೆ ಲೇಡಿ ಸಿಂಗಮ್ ಎಂದು ಡಿಪಾರ್ಟ್ಮೆಂಟ್ ನಲ್ಲಿ ಖ್ಯಾತಳಾಗಿದ್ದಾಳೆ.

ನೆನಪಿನಲ್ಲಿರಲಿ,
ಯಶಸ್ಸು ಸಾಧಕರ ಸ್ವತ್ತೆ ಹೊರತು,
ಹೇಡಿಗಳು, ಸೋಮಾರಿಗಳದಲ್ಲ.

-ಅಮರೇಶ ದೇಸಾಯಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Ambika IPSKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSpecial Articleಅಂಬಿಕಾ IPS
Share198Tweet123Send
Previous Post

ಎಸ್‌ಸಿಎಸ್‌ಟಿ ಮೇಲಿನ ದೌರ್ಜನ್ಯ: ಬಾಕಿ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಕ್ರಮ ವಹಿಸಲು ಸಿಎಂ ಸೂಚನೆ

Next Post

ಭರದಿಂದ ಸಾಗುತ್ತಿದೆ ವಿಭಿನ್ನ ಕಥಾಹಂದರದ ಬ್ಯಾಂಕ್ ಲೋನ್ ಸಿನಿಮಾ ಚಿತ್ರೀಕರಣ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭರದಿಂದ ಸಾಗುತ್ತಿದೆ ವಿಭಿನ್ನ ಕಥಾಹಂದರದ ಬ್ಯಾಂಕ್ ಲೋನ್ ಸಿನಿಮಾ ಚಿತ್ರೀಕರಣ

ಭರದಿಂದ ಸಾಗುತ್ತಿದೆ ವಿಭಿನ್ನ ಕಥಾಹಂದರದ ಬ್ಯಾಂಕ್ ಲೋನ್ ಸಿನಿಮಾ ಚಿತ್ರೀಕರಣ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಸೇರಿದ ವಿಶ್ವಕಪ್ ವಿಜೇತ ನಾಯಕಿ ನಿಕಿ ಪ್ರಸಾದ್!

ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಸೇರಿದ ವಿಶ್ವಕಪ್ ವಿಜೇತ ನಾಯಕಿ ನಿಕಿ ಪ್ರಸಾದ್!

April 1, 2026
ಬೆಂಗಳೂರು ಎಫ್‌ಸಿ ತಂಡಕ್ಕೆ ಸಾವಿಯೊ ಮೆಡೈರಾ ಸೇರ್ಪಡೆ

ಬೆಂಗಳೂರು ಎಫ್‌ಸಿ ತಂಡಕ್ಕೆ ಸಾವಿಯೊ ಮೆಡೈರಾ ಸೇರ್ಪಡೆ

April 1, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಬೆಂಗಳೂರು-ಹುಬ್ಬಳ್ಳಿ, ಬೀದರ್, ಮುಂಬೈ ಸೇರಿ 28 ರೈಲುಗಳ ಸಂಚಾರದಲ್ಲಿ ವ್ಯತ್ಯಯ

April 1, 2026
ಕೋಟಕ್ ಮಹೀಂದ್ರಾ ಬ್ಯಾಂಕ್ ನಾಯಕತ್ವ ಬದಲಾವಣೆ | ಸಿಇಓ ಆಗಿ ಸೂರಜ್ ರಾಜಪ್ಪನ್ ನೇಮಕ

ಕೋಟಕ್ ಮಹೀಂದ್ರಾ ಬ್ಯಾಂಕ್ ನಾಯಕತ್ವ ಬದಲಾವಣೆ | ಸಿಇಓ ಆಗಿ ಸೂರಜ್ ರಾಜಪ್ಪನ್ ನೇಮಕ

April 1, 2026
SWR to run special trains for Good Friday, Easter rush

ತಿರುಚ್ಚಿರಾಪಳ್ಳಿ-ಬೆಂಗಳೂರು ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು | ಇಲ್ಲಿದೆ ಡೀಟೇಲ್ಸ್

April 1, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL