ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮಹತ್ವದ ಬೆಳವಣಿಗೆಯೊಂದರಲ್ಲಿ ವಂದೇ ಮಾತರಂ #VandeMataram ಗೀತೆಗೆ ಇನ್ಮುಂದೆ ಪ್ರತಿಯೊಬ್ಬರೂ ಎದ್ದು ನಿಂತು ಗೌರವ ನೀಡುವುದು ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ.
ವಂದೇ ಮಾತರಂಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಗೃಹ ಇಲಾಖೆ ಆದೇಶ ಹೊರಡಿಸಿದೆ.
ಈವರೆಗೂ ದೇಶದಲ್ಲಿ ರಾಷ್ಟ್ರಗೀತೆಗೆ #NationalAnthem ಪ್ರತಿಯೊಬ್ಬರೂ ಎದ್ದುನಿಂತು ಗೌರವ ನೀಡುವುದು ಕಡ್ಡಾಯವಾಗಿತ್ತು. ಇನ್ನು ಮುಂದೆ ವಂದೇ ಮಾತರಂಗೂ ಸಹ ಇದೇ ರೀತಿಯಲ್ಲಿ ಗೌರವ ನೀಡುವುದು ಕಡ್ಡಾಯವಾಗಿದೆ.
ಅಲ್ಲದೇ, ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ತೆಗೆದುಹಾಕಿದ್ದ 4 ಚರಣಗಳನ್ನು ವಂದೇ ಮಾತರಂಗೆ ಮರು ಸೇರ್ಪಡೆಯ ನಿರ್ಧಾರವನ್ನು ಸಹ ಕೇಂದ್ರ ತೆಗೆದುಕೊಂಡಿದ್ದು, ಒಟ್ಟು 3 ನಿಮಿಷ 10 ಸೆಕೆಂಡ್’ಗಳ ಕಾಲ ಇದೆ.
ವಂದೇ ಮಾತರಂಗೆ ರಾಷ್ಟ್ರಗೀತೆಯ ಗೌರವದ ಸ್ಥಾನಮಾನವನ್ನು ನೀಡಲಾಗಿದ್ದು, ಆರೂ ಚರಣಗಳನ್ನು ಹಾಡುವುದು ಹಾಗೂ ಎದ್ದು ನಿಂತು ಗೌರವ ನೀಡುವುದು ಕಡ್ಡಾಯವಾಗಿದೆ.
ಎಲ್ಲ ರೀತಿಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದ ಆಗಮನ ಹಾಗೂ ನಿರ್ಗಮನದಲ್ಲಿ ವಂದೇ ಮಾತರಂ ಹಾಡುವುದನ್ನೂ ಸಹ ಕಡ್ಡಾಯ ಮಾಡಲಾಗಿದೆ.
ಇದೇ ವೇಳೆ ಚಿತ್ರಮಂದಿರಗಳಲ್ಲಿ ಚಿತ್ರ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಕುವುದು ಕಡ್ಡಾಯವಾಗಿದೆ. ಆದರೆ, ವಂದೇ ಮಾತರಂ ಹಾಕುವುದು ಕಡ್ಡಾಯವಲ್ಲ ಎಂದು ಕೇಂದ್ರ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















