No Result
View All Result
RPF team Seized 40.495 Kgs Ganja at Ballari Railway station
English Articles

RPF team Seized 40.495 Kgs Ganja at Ballari Railway station

by ಕಲ್ಪ ನ್ಯೂಸ್
April 7, 2026
0

Kalpa Media House  |  Ballari  | On 06.04.2026,  RPF team conducted checking in Train No. 18047 (Ex: SHM–VSKP Express) at...

Read moreDetails
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
SWR Mysuru Division Excels with Record Passenger Revenue and Strong Commercial Growth

SWR Mysuru Division Excels with Record Passenger Revenue and Strong Commercial Growth

April 2, 2026
  • Advertise With Us
  • Grievances
  • About Us
  • Contact Us
Thursday, April 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸ್ತ್ರೀಯರ ಯೋಗಕ್ಷೇಮಕ್ಕಾಗಿ ಸದ್ಗುರು ಫೌಂಡೇಶನ್ ಆಯೋಜಿಸಿದ್ದ ಆನ್’ಲೈನ್ ಸಪ್ತಾಹ ಯಶಸ್ವಿ

ಕುಟುಂಬದ ಆಧಾರ ಸ್ಥಂಭ ಮಹಿಳೆಯ ಆರೋಗ್ಯವೇ ಭಾಗ್ಯ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 26, 2020
in Special Articles
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಸದ್ಗುರು ಫೌಂಡೇಷನ್, ಸದ್ಗುರು ಚಿಕಿತ್ಸಾಲಯದ ಸಹಯೋಗದೊಂದಿಗೆ ಸತತ ಮೂರು ವರ್ಷಗಳಿಂದ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈ ಸರ್ಕಾರೇತರ ಸಂಸ್ಥೆಯಾಗಿದ್ದು ಉಚಿತ ಹೆಲ್ತ್ ಚೆಕಪ್ ಕ್ಯಾಂಪ್, ಆಯುರ್ವೇದದಿಂದ ಆರೋಗ್ಯ ಎಂಬ ವಿಷಯವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಜನ ಸಂಖ್ಯಾ ದಿನ ಪರಿಸರ ದಿನ ಯೋಗ ದಿನ ಹೀಗೆ ವಿಶೇಷ ದಿನಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ಈ ಕೊರೋನಾ ಸಂಕಷ್ಟದಲ್ಲೂ ಕೂಡ ಸಾರ್ವಜನಿಕರು ಅದರಲ್ಲೂ ಸ್ತ್ರೀಯರು ಮನೆಯಲ್ಲೇ ಕುಳಿತು ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಲು ಪ್ರೇರಪಣೆ ನೀಡಿದೆ.

ಸದ್ಗುರು ಫೌಂಡೇಷನ್’ನ ಮ್ಯಾನೇಜಿಂಗ್ ಡೈರೆಕ್ಟರ್ ಆದ ಮತ್ತು ಆಯುರ್ವೇದ ತಜ್ಞರಾದ ಶ್ರೀಮತಿ ಚಿತ್ರಲೇಖಾ ವೆಂಕಟಕೃಷ್ಣ ಶಿವಮೊಗ್ಗದಲ್ಲಿ ಚಿರಪರಿಚಿತ ಹೆಸರು. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಇವರು ತಮ್ಮಂತಯೇ ಅಭಿರುಚಿ ಹೊಂದಿರುವ ಶಿವಮೊಗ್ಗದ ಆರು ಜನ ಮಹಿಳಾ ಆಯುರ್ವೇದ ತಜ್ಞರ ಜೊತೆಗೂಡಿ ಸ್ತ್ರೀತ್ವ 2020 ಎಂಬ ಸ್ತ್ರೀಯರ ಸಂಪೂರ್ಣ ಆರೋಗ್ಯ ಕುರಿತಾದಂತಹ ವಿಶಿಷ್ಟ ಕಾರ್ಯಕ್ರಮ ವನ್ನು ಫೇಸ್’ಬುಕ್ ಲೈವ್’ನಲ್ಲಿ ಜೂನ್ 15 ರಿಂದ ಜೂನ್ 21 ರವರೆಗೆ ಪ್ರತಿದಿನ ಸಂಜೆ 5 ರಿಂದ 6 ಗಂಟೆಯವರೆಗೆ ನೆಡಿಸಿ ಕೊಟ್ಟರು. ನಿಜಕ್ಕೂ ಇದು ಸ್ತ್ರೀಯರಿಗೆ ತುಂಬ ಉಪಯುಕ್ತ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವ ಕಾರ್ಯಕ್ರಮವಾಗಿತ್ತು.

ಡಾ.ಶ್ರೀಲಕ್ಷ್ಮೀ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಇವರು ವುಮೆನ್ಸ್‌ ವೆಲ್’ನೆಸ್ ಎಂಬ ಮಹಿಳೆಯರ ಸಂಪೂರ್ಣ ಆರೋಗ್ಯ ಕುರಿತಾದ ಕಾರ್ಯಕ್ರಮವನ್ನು ಮಹಿಳೆ ಈ ಆಧುನಿಕ ಮತ್ತು ಧಾವಂತದ ಬದುಕಿನಲ್ಲಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೂಲಕ ಮನೆಯವರ ಯೋಗಕ್ಷೇಮವನ್ನೂ ನೋಡಿಕೊಂಡು ತನಗೆ ಎದುರಾಗುವ ಆರೋಗ್ಯದ ಸವಾಲುಗಳನ್ನು ಹೇಗೆ ನಿಭಾಯಿಸಿಕೊಳ್ಳಬಹುದು ಎಂದು ತುಂಬಾ ಮನಮುಟ್ಟುವಂತೆ ವಿವರಿಸಿದರು.

ಮೈಸೂರು ಆಯುರ್ವೇದ ಚಿಕಿತ್ಸಾಲಯದ ಡಾ.ಪ್ರಕೃತಿ ಮಂಚಾಲೆ ಮಾತನಾಡಿ, ಋತುಚಕ್ರ ಮತ್ತು ಮನೋ ದೈಹಿಕ ಸ್ವಾಸ್ಥ್ಯ ಎಂಬ ವಿಷಯವನ್ನು ತೆಗೆದುಕೊಂಡು ಋತುಚಕ್ರ ಶುರುವಾದಾಗಿನಿಂದ ಮೆನೋಪಾಸ್ ಹಂತದವರೆಗೆ ಮಹಿಳೆ ಎದುರಿಸಬೇಕಾದ ಸವಾಲುಗಳು ಅದಕ್ಕೆ ಹಲವಾರು ಪರಿಹಾರೋಪಾಯಗಳು ಆ ಸಮಯದಲ್ಲಿ ಮಹಿಳೆಯರು ತಮ್ಮ ದೇಹದ ಜೊತೆ ಮನಸ್ಸಿನ ಆರೋಗ್ಯ ಕೂಡ ಹೇಗೆ ಕಾಪಾಡಿಕೊಳ್ಳಬೇಕು ಎಂದರು.
ಧವಳ ಪೆಂಟಾಕೇರ್ ಆಯುರ್ವೇದಿಕ್ ಟ್ರೀಟ್’ಮೆಂಟ್ ಸೆಂಟರ್’ನ ಡಾ.ರೋಹಿಣಿ ಗುರುರಾಜ ಮಾತನಾಡಿ, ಮಧ್ಯ ವಯಸ್ಸು ದಾಟಿದ ನಂತರ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಋತುಬಂಧ ಮತ್ತು ಹಾರ್ಮೋನುಗಳ ಏರುಪೇರಿನಿಂದ ಆಗುವ ಬದಲಾವಣೆಗಳು ಅದನ್ನು ನಿಭಾಯಿಸುವ ಬಗೆ ಇದರ ಬಗ್ಗೆ ಉಪಯುಕ್ತ ಮಾಹಿತಿ ಒದಗಿಸಿದರು.

ಆಯುರ್ವೇದ ತಜ್ಞರಾದ ಡಾ.ಚೈತ್ರಾ ಜೀವನ್ ಮಾತನಾಡಿ, ಮಾನಸ ರೋಗದಲ್ಲಿ ವಿಶೇಷ ಪರಿಣಿತಿಯನ್ನು ಪಡೆದಿರುವ ಇವರು ಮಹಿಳೆಯರಲ್ಲಿ ಉಂಟಾಗುವ ಖಿನ್ನತೆ ಅದಕ್ಕೆ ಕಾರಣ ಮತ್ತು ಪರಿಹಾರ ಎಂಬ ವಿಷಯವಾಗಿ ಉಪಯುಕ್ತ ಮಾಹಿತಿ ಒದಗಿಸಿದರು.

ಆಯುರ್ವೇದ ತಜ್ಞರಾದ ಡಾ.ಮೈಥಿಲಿ ಪೂರ್ಣಚಂದ್ರ ಮಾತನಾಡಿ, ಋತುಚಕ್ರದಲ್ಲಿ ದೈಹಿಕ ಸ್ವಚ್ಛತೆ ಮತ್ತು ಪರ್ಯಾವರಣ ಶುಚಿತ್ವ ಎಂಬ ವಿಷಯವಾಗಿ ಸ್ತ್ರೀಯರಿಗೇ ಗೊತ್ತಿಲ್ಲದ ಅನೇಕ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.

ಸದ್ಗುರು ಫೌಂಡೇಷನ್’ನ ಪ್ರೋಕ್ಟೋಲಾಜಿಸ್ಟ್‌ ಹಾಗೂ ಟ್ರಸ್ಟಿ ಡಾ. ರಂಜಿನಿ ಬಿದರಳ್ಳಿ ಮಾತನಾಡಿ, ಮಹಿಳೆಯರ ಆರೋಗ್ಯ ಮತ್ತು ಮೂಲವ್ಯಾಧಿ ಎಂಬ ವಿಷಯವಾಗಿ ಅನೇಕ ಉಪಯುಕ್ತ ಮಾಹಿತಿಯನ್ನು ಒದಗಿಸಿದರು.

ಸದ್ಗುರು ಚಿಕಿತ್ಸಾಲಯ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಡಾ.ಚಿತ್ರಲೇಖಾ ವಿ. ಕೃಷ್ಣ ಮಾತನಾಡಿ, ಹೆಣ್ಣಿನ ಜೀವನದಲ್ಲಿ ಬಹುಮುಖ್ಯವಾದಂತಹ ರಸಜ್ವಲಾ ಚರ್ಯೆ ಎಂಬ ವಿಷಯವನ್ನು ತೆಗೆದುಕೊಂಡು ಆ ಸಮಯದಲ್ಲಿ ಹೆಣ್ಣಿನ ಮನಃಸ್ಥಿತಿ, ದೈಹಿಕ ಸ್ಥಿತಿ ಅದನ್ನು ನಿಭಾಯಿಸುವ ರೀತಿ. ಅನುಸರಿಸಬೇಕಾದ ಕೆಲವು ವಿಷಯಗಳು ಇದರ ಬಗ್ಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.

ಸಪ್ತ ದಿನಗಳು ಸಪ್ತಮಾತೆಯರು ತಮ್ಮ ಸಮಯವನ್ನು ಇದಕ್ಕಾಗಿ ಮೀಸಲಿಟ್ಟು ಅನೇಕ ಮಾಹಿತಿಗಳನ್ನು ಕಲೆಹಾಕಿ ಸ್ತ್ರೀಯರಿಗೆ ಬಹಳವೇ ಉಪಯುಕ್ತವಾದಂತಹ ಈ ಕಾರ್ಯಕ್ರಮವನ್ನು ಈ ಲಾಕ್ ಡೌನ್ ಸಮಯದಲ್ಲಿ ಸ್ತ್ರೀಯರು ಮನೆಯಲ್ಲೇ ಕುಳಿತು ಲೈವ್ ಕಾರ್ಯಕ್ರಮ ವೀಕ್ಷಿಸಲು ಅನುಕೂಲ ಮಾಡಿಕೊಟ್ಟರು. ಸದ್ಗುರು ಫೌಂಡೇಷನ್ ನೆಡೆಸಿಕೊಟ್ಟ ಈ ವಿಶಿಷ್ಟ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಈ ಎಲ್ಲಾ ಮಹಿಳಾ ಡಾಕ್ಟರ್’ಗಳಿಂದ ಇನ್ನಷ್ಟು ಇಂತಹ ಉತ್ತಮ ಕಾರ್ಯಕ್ರಮಗಳು ಮೂಡಿಬರಲಿ. ಅವರ ಈ ಕಾರ್ಯದಲ್ಲಿ ಕೈ ಜೋಡಿಸಿದ ಸದ್ಗುರು ಫೌಂಡೇಶನ್ ಅಧ್ಯಕ್ಷರಾದ ಎಚ್.ಜಿ. ನಾಗರಾಜ್ ಅವರಿಗೂ ಅಭಿನಂದನೆಗಳು. ಫೇಸ್’ಬುಕ್’ನ ಸದ್ಗುರು ಫೌಂಡೇಷನ್ ಎಂಬ ಅವರದೇ ವೆಬ್’ಸೈಟ್’ನಲ್ಲಿ ಈ ಕಾರ್ಯಕ್ರಮದ ಅಷ್ಟೂ ವಿಡಿಯೋಗಳು ಸಾರ್ವಜನಿಕರಿಗೆ ಲಭ್ಯವಿದೆ. ವೀಕ್ಷಿಸಿ ಉಪಯೋಗ ಪಡೆದುಕೊಳ್ಳಬಹುದು.

ಲೇಖನ: ಕೆ.ಎಚ್. ಸುಮರಾಣಿ, ಶಿವಮೊಗ್ಗ

Get In Touch With Us info@kalpa.news Whatsapp: 9481252093

Tags: ayurvedaKannada News WebsiteLatest News KannadaMenstrual cycleSadguru FoundationShimogaShivamoggaWomenಆಯುರ್ವೇದಋತುಚಕ್ರಡಾ. ರಂಜಿನಿ ಬಿದರಳ್ಳಿಸದ್ಗುರು ಫೌಂಡೇಷನ್ಸ್ತ್ರೀ
Share212Tweet123Send
Previous Post

ಜಿಲ್ಲೆಯಲ್ಲಿ ಸಾಧಾರಣ ಮಳೆ, ತೀರ್ಥಹಳ್ಳಿಯಲ್ಲಿ ವರುಣ ಕಣ್ಮರೆ

Next Post

ಎಂಎಡಿಬಿ ನೂತನ ಅಧ್ಯಕ್ಷ ಗುರುಮೂರ್ತಿಯವರಿಗೆ ಕಾಗೋಡು ತಿಮ್ಮಪ್ಪ ಬರೆದ ಪತ್ರದಲ್ಲೇನಿದೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಎಂಎಡಿಬಿ ನೂತನ ಅಧ್ಯಕ್ಷ ಗುರುಮೂರ್ತಿಯವರಿಗೆ ಕಾಗೋಡು ತಿಮ್ಮಪ್ಪ ಬರೆದ ಪತ್ರದಲ್ಲೇನಿದೆ?

ಎಂಎಡಿಬಿ ನೂತನ ಅಧ್ಯಕ್ಷ ಗುರುಮೂರ್ತಿಯವರಿಗೆ ಕಾಗೋಡು ತಿಮ್ಮಪ್ಪ ಬರೆದ ಪತ್ರದಲ್ಲೇನಿದೆ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಅಡಿಕೆ ತೋಟದಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದ ಕಾರ್ಮಿಕ ಸಾವು

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 6ನೇ ತರಗತಿ ಬಾಲಕಿ

April 9, 2026
ನೈಋತ್ಯ ರೈಲ್ವೆ ರಕ್ಷಣಾ ಪಡೆ ಕಾರ್ಯಾಚರಣೆ: ಶ್ಲಾಘನೀಯ ಸಾಧನೆ

ನೈಋತ್ಯ ರೈಲ್ವೆ ರಕ್ಷಣಾ ಪಡೆ ಕಾರ್ಯಾಚರಣೆ: ಶ್ಲಾಘನೀಯ ಸಾಧನೆ

April 8, 2026
ಬೇಸಿಗೆ ರಜೆ | ಬೆಂಗಳೂರಿನಿಂದ ಕಾನ್ಪುರ, ಚೆನ್ನೈ ನಗರಗಳಿಗೆ ವಿಶೇಷ ರೈಲು | ಇಲ್ಲಿದೆ ಡೀಟೇಲ್ಸ್

ಮುಂಬೈ – ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಸಮಯ ಪರಿಷ್ಕರಣೆ

April 8, 2026
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

ಬೆಂಗಳೂರು-ತಾಳಗುಪ್ಪ, ಮೈಸೂರು-ಬೆಳಗಾವಿ, ವಾಸ್ಕೋಡಗಾಮ–ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸೇವೆಗಳಲ್ಲಿ ಬದಲಾವಣೆ

April 8, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Diversion of KSR Bengaluru–Lalkua Weekly Express Special Train 

April 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL