ಶ್ರೀನಗರ: ಒಂದೆಡೆ ಪುಲ್ವಾಮಾ ದಾಳಿಗೆ ಭಾರತೀಯ ಪಡೆಗಳು ಎಲ್’ಒಸಿಯಲ್ಲಿ ದಾಳಿ ನಡೆಸುವ ಮೂಲಕ ಸೇಡು ತೀರಿಸಿಕೊಂಡಿದ್ದರೆ, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲೂ ಸಹ ಪ್ರತ್ಯೇಕತಾವಾದಿಗಳ ಮೇಲೂ ಸಹ ಇಂದು ಮುಂಜಾನೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ.
ಗಡಿಯಲ್ಲಿ ನುಗ್ಗಿದ ಭಾರತೀಯ ವಾಯುಪಡೆಗಳು ಉಗ್ರರ ನೆಲೆಗಳನ್ನು ನಾಶ ಮಾಡಿದ್ದರೆ, ಪ್ರತ್ಯೇಕತಾವಾದದ ಹೆಸರಿನಲ್ಲಿ ಉಗ್ರರಿಗೆ ಪರೋಕ್ಷವಾಗಿ ಬೆಂಬಲ ನೀಡುವವರಿಗೆ ಸೇನೆ ಬಿಸಿ ಮುಟ್ಟಿಸಿದೆ.
Srinagar: Visuals from outside the residence of JKLF chief Yasin Malik where NIA is conducting a raid. #JammuAndKashmir pic.twitter.com/Ui3oIJKiI3
— ANI (@ANI) February 26, 2019
ಶ್ರೀನಗರದಲ್ಲಿರುವ ಜೆಕೆಎಲ್’ಎಫ್ ಮುಖಂಡ ಯಾಸ್ಮಿನ್ ಮಲ್ಲಿಕ್ ನಿವಾಸದ ಮೇಲೆ ಎನ್”ಐಎ ಹಾಗೂ ಭಾರತೀಯ ಸೇನೆ ದಾಳಿ ನಡೆಸಿದ್ದು, ಇವನ ನಿವಾಸ ಮಾತ್ರವಲ್ಲದೇ ಇಡಿಯ ಪ್ರದೇಶವನ್ನೆ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ಈ ರೀತಿ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಹಿಂದಿನ ಕಾರಣಗಳೇನು ಎಂಬುದು ನಿಖರವಾಗಿ ತಿಳಿದುಬಂದಿಲ್ಲವಾದರೂ, ವಾಯುಸೇನೆಯ ದಾಳಿ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.
ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
Discussion about this post