ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಟೀಲು ಪುಣ್ಯ ಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಪುರಾಣದಿಂದ ಮಹತ್ವ ಹಾಗೂ ಪ್ರಸಿದ್ಧಿಯನ್ನು ಹೊಂದಿದೆ. ನಂದಿನಿ ನದಿಯ ದಂಡೆಯ ಮೇಲಿರುವ ದುರ್ಗಾಪರಮೇಶ್ವರಿ ದೇವಾಲಯವು ಅಸಂಖ್ಯಾತ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.
ಹಾಗೆಯೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಬಾಲಪ್ರತಿಭೆ ಸಿಂಚನ ನೋಡಲು ಕುಳ್ಳಗೆ ಆಗಿ ಕಂಡರೂ ತನ್ನ ಅಗಾಧ ಪ್ರತಿಭೆಯಿಂದ ಪಂಚಭಾಷಾ ನಟಿ ಲಕ್ಷ್ಮೀ ಅವರಿಂದ ಮಿಣ್ಕ್ ಸಿಂಚನ ಬಿರುದು ಪಡೆದು ಕರ್ನಾಟಕ ಜನತೆಯ ಮನಗೆದ್ದಳು.
ಮಕ್ಕಳನ್ನು ದೇವರಿಗೆ ಸಮಾನ ಸಂಪ್ರದಾಯ ಹಿಂದೂ ಧರ್ಮದಲ್ಲಿದೆ. ಆ ಕಾರಣಕ್ಕಾಗಿ ಮಿಣ್ಕ್ ಸಿಂಚನಳನ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಹೋಲಿಕೆ ಮಾಡಲಾಗಿದೆ.
ಸಾಧನೆಗೆ ಗುರುವೆ ಬೇಕೆಂದಿಲ್ಲ ಗುರಿಯೊಂದಿದ್ದರೆ ಸಾಕು. ಹೌದು ತಾನೇನಾದರು ಮಾಡುತ್ತೇನೆ ಅಂದು ಕೊಂಡಾಗ ನನ್ನ ಜೊತೆ ಯಾರು ಇಲ್ಲ ಅಂದುಕೊಳ್ಳಬಾರದು. ಬದಲು ತಾನು ಇಟ್ಟ ಗುರಿಯತ್ತ ಗಮನ ಹರಿಸಿದಾಗ ಸಾಧನೆಯ ಶಿಖರವೇರಲು ಸಾಧ್ಯ. ಗೆದ್ದ ಎತ್ತಿನ ಬಾಲ ಹಿಡಿಯುವ ಹಾಗೆ ತನ್ನವರು ತಮ್ಮವರು ಎಲ್ಲರೂ ಓಡೋಡಿ ಬರುವರು.
ಮಿಣ್ಕ್ ಸಿಂಚನ ಉದಯ ಮತ್ತು ಸವಿತಾರವರ ಮುದ್ದಿನ ಮಗಳಾಗಿ 9 ವರ್ಷದ ಕುಂದಾಪುರದ ಕೋಟೇಶ್ವರ ಈಶ್ವರ ದೇವರ ಪುಣ್ಯ ಸನ್ನಿಧಾನದಲ್ಲಿ ಜನಿಸಿದಳು. ಪ್ರಸುತ ಯುಬಿಎಮ್’ಸಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರದಲ್ಲಿ ನಾಲ್ಕನೆಯ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
ನೃತ್ಯ, ಗಾಯನ, ನಟನೆ, ಚಿತ್ರಕಲೆ, ಯಕ್ಷಗಾನ ಕಲೆಯಲ್ಲಿ ಪರಿಣಿತಳಾದ ಈಕೆ ಆಕಾರ ಚಿಕ್ಕದಾದರೂ ಕೂಡ ಇವಳಲ್ಲಿ ನೆಲೆಯಾಗಿರುವ ಕಲೆ ಅಸಾಮಾನ್ಯವಾಗಿದೆ.
ತನ್ನ ಅತಿ ಕಿರಿಯ ವಯಸ್ಸಿನಲ್ಲಿ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮವಾಗಿ ತನ್ನ ಕಲೆಯ ಪ್ರದರ್ಶಿಸಿದವಳು. ಗುರುವಿನ ಸಹಾಯವಿಲ್ಲದೆ ಏಕಲವ್ಯನಂತೆ ಕಲಾ ಸರಸ್ವತಿಯನ್ನು ಒಲಿಸಿಕೊಂಡು, ತನಗೇನು ಬರುವುದೋ ಅದನ್ನು ಅಚ್ಚುಕಟ್ಟಾಗಿ ಜನರ ಮುಂದೆ ಕಲಾ ಪ್ರದರ್ಶನ ನೀಡುತ್ತಾಳೆ. ತನ್ನಲ್ಲಿರುವ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಂಡ ಮಿಣ್ಕ್ ಸಿಂಚನಳಿಗೆ ಜೀ ಕನ್ನಡದ ಡ್ರಾಮ ಜೂನಿಯರ್’ನಲ್ಲಿ ದೊಡ್ಡ ವೇದಿಕೆಯಾಗಿ ದೊರಕಿತು. ಅಲ್ಲಿ ಜನ ಮನ ಗೆದ್ದು ಫೈನಲಿಸ್ಟ್ ಆಗಿ ಹೊರ ಹೊಮ್ಮಿದಳು.
ಕುಂದ ಕನ್ನಡ ಭಾಷೆಯ ಕೀರ್ತಿಯನ್ನು ರಾಜ್ಯದೆಲ್ಲೆಡೆ ಪಸರಿಸಿದ ಕೀರ್ತಿ ಇವಳಿಗಿದೆ. ಇಂತಹ ಪ್ರತಿಭೆಗಳಿಗೆ ಇನ್ನಷ್ಟು ವೇದಿಕೆಗಳು ಸಿಗಬೇಕು. ಇವರಲ್ಲಿರುವ ಕಲೆಗೆ ನ್ಯಾಯ ದೊರಕಬೇಕು. ಕಲಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಪ್ರೋತ್ಸಾಹ ನೀಡಬೇಕು. ಮುಂದಿನ ದಿನಗಳಲ್ಲಿ ಬೆಳೆದು ಎಲ್ಲರಿಗೂ ಬೆಳಕಾಗಲಿ ಎಂಬುದೇ ನಮ್ಮ ಆಶಯ.
ಲೇಖನ ಮತ್ತು ಚಿತ್ರ: ಶಶಿಧರ್ ಗುಜ್ಜಾಡಿ
Discussion about this post