ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ತಾಲೂಕಿನ ಅರಳಸುರಳಿಯಲ್ಲಿ ಭೀಕರ ಅಗ್ನಿ ಅನಾಹುತ #FireAccident ಸಂಭವಿಸಿದ್ದು, ಘಟನೆಯಲ್ಲಿ ಅರ್ಚಕ ಕುಟುಂಬದ ಮೂವರು ಸಜೀವವಾಗಿ ದಹನಗೊಂಡಿದ್ದಾರೆ.
ಹೊಸನಗರ #Hosanagara ರಸ್ತೆ ಸಮೀಪವಿರುವ ಅರಳಸುರಳಿಯಲ್ಲಿ ಘಟನೆ ನಡೆದಿದ್ದು, ಕಲ್ಲೋಣಿಯ ರಾಘವೇಂದ್ರ ಕೆಕೋಡ ಎನ್ನುವವರ ಮನೆಯಲ್ಲಿ ಅಗ್ನಿ ಅನಾಹುತ ನಡೆದಿದೆ.
ದುರ್ಘಟನೆಯಲ್ಲಿ ರಾಘವೇಂದ್ರ ಕೆಕೋಡು, ನಾಗರತ್ನ ಹಾಗೂ ಶ್ರೀರಾಂ ಎನ್ನುವವರು ಸಜೀವವಾಗಿ ದಹನಗೊಂಡಿದ್ದು, #Brunt ದೃಶ್ಯ ಮನಕಲುಕುವಂತಿದೆ. ಇನ್ನೋರ್ವ ಭರತ್ ಎನ್ನುವವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ತನಿಖೆ ನಡೆಯುತ್ತಿದ್ದು, ಎಫ್’ಎಸ್’ಎಲ್ #FSL ಮತ್ತು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿದೆ.
ಶಾಸಕ ಆರಗ ಜ್ಞಾನೇಂದ್ರ ಭೇಟಿ
ಇನ್ನು, ಘಟನೆ ವಿಚಾರ ತಿಳಿದಾಕ್ಷಣ ಸ್ಥಳಕ್ಕೆ ದೌಡಾಯಿಸಿದ ಶಾಸಕ ಆರಗ ಜ್ಞಾನೇಂದ್ರ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಇನ್ನು, ಕೆಕೋಡು ಕುಟುಂಬದವರು ತಮಗೆ ತುಂಬಾ ಬೇಕಾದವರಾಗಿದ್ದು, ಆರ್ಥಿಕವಾಗಿ ಅನುಕೂಲವಾಗಿದ್ದರು. ಮೂವರು ಸುಟ್ಟು ಕರಕಲಾಗಿದ್ದು ಮೃತದೇಹದ ಗುರುತು ಸಿಗದ ಪರಿಸ್ಥಿತಿ ಇದೆ. ಇನ್ನೊಬ್ಬನ ದೇಹ ಶೇ.50ರಷ್ಟು ಸುಟ್ಟ ಗಾಯವಾಗಿದೆ. ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ ಎಂದರು.
ಸ್ಥಳಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.newsnews
Discussion about this post