ಕಲ್ಪ ಮೀಡಿಯಾ ಹೌಸ್ | ಉಡುಪಿ |
ಪೇಜಾವರ ಅದೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಪಾದಂಗಳ Shri Vishwaprasanna Shripadamgalu ಪೂರ್ಣಾಶ್ರಮದ ತಂದೆ ಅಂಗಡಿಮಾರ್ ಕೃಷ್ಣಭಟ್ (102) ಅವರು ವಿಧಿವಶರಾಗಿದ್ದಾರೆ.
ಹಳೆಯಂಗಡಿ ಸಮೀಪದ ಪಕ್ಷಿಕೆರೆ ಎಂಬಲ್ಲಿರುವ ಪುತ್ರ ವಿಶ್ವೇಶ್ವರ ಭಟ್ ಅವರ ಸ್ವಗೃಹದಲ್ಲಿ ಹರಿಪಾದ ಸೇರಿದ್ದಾರೆ. ವೈದಿಕ ವಿಧ್ವಾಂಸರು ತುಳು ಲಿಪಿಕಾರರು, ಪಂಚಾಂಗ ಕತೃಗಳು, ತುಳು ಭಜನೆ, ಪ್ರಾರ್ಥನೆ, ಶ್ಲೋಕಗಳನ್ನು ರಚಿಸುವ ಮೂಲಕ ಸಾರಸ್ವತ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದ ಇವರು, ಸಾಂಪ್ರದಾಯಿಕ ಕೃಷಿಕರು ಆಗಿದ್ದರು.
ಐದು ವೇದಗಳನ್ನು ಅಧ್ಯಯನ ಮಾಡಿದ ಪ್ರಖಾಂಡ ಪಂಡಿತರಾಗಿದ್ದ ಇವರು, ಇಷ್ಟಕರವಾದ ಸಂಹಿತಾ ಯಾಗ ಸೇರಿ ಹಲವು ಯಾಗಗಳನ್ನು ರಚಿಸಿ ಅಪರೂಪದ ಸಾಧಕರಾಗಿದ್ದರು. ತಮ್ಮ ಜೀವಮಾನದ ಸಾಧನೆಗಾಗಿ ಕೃಷ್ಣಾನುಗ್ರಹ ಪ್ರಶಸ್ತಿ, ಪೇಜಾವರ ಶ್ರೀ ಜೀವಮಾನದ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ ಹಾಗೂ ಬಿರುದಾವಳಿಗಳು ಇವರನ್ನು ಅಲಂಕರಿಸಿವೆ.
Also read: ಸಿಬಿಎಸ್ಸಿ ಅಂತರ ಶಾಲೆಗಳ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ: ನ್ಯಾಷನಲ್ ಪಬ್ಲಿಕ್ ಶಾಲೆಗೆ ಬಹುಮಾನ
ಪೇಜಾವರ ಶ್ರೀಗಳು ಸೇರಿದಂತೆ ಐವರು ಪುತ್ರರು, ಏಳು ಪುತ್ರಿಯರನ್ನು ಇವರು ಅಗಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post