Tuesday, June 24, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಆನಂದ ಕಂದ

ಮರೆಯಲಾಗದ ಉದ್ಯಮ ರತ್ನ `ರತನ್ ಟಾಟಾ’

November 7, 2024
in ಆನಂದ ಕಂದ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-12  |
ಭಾರತೀಯರಿಗೂ ಹಾಗೂ ಆ ಹೆಸರಿಗೂ ಒಂದು ರೀತಿಯ ಅವಿನಾಭಾವ ಸಂಬಂಧ ಯಾವುದಾದರೂ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ. ಯಾಕೆಂದರೆ ಆ ಹೆಸರಿನ ಮೌಲ್ಯವೇ ಅಂತಹುದ್ದು… ಅದೇ ಟಾಟಾ… ಅಂದರೆ ಹೆಮ್ಮೆಯ ರತನ್ ಟಾಟಾ.

ಹೌದು… ದೇಶದ ಎಲ್ಲರ ಮನೆಯಲ್ಲೂ ಕೂಡ ಒಂದಾದರು ಟಾಟಾ ಉತ್ಪನ್ನ ಇದ್ದೇ ಇರುತ್ತದೆ. ಕಾರಣ ಈ ಸಂಸ್ಥೆಯ ಸೇವೆಯೇ ಅಂತಹುದ್ದು.

ಮೂಲತಃವಾಗಿ ಟಾಟಾ ಸಂಸ್ಥೆಯನ್ನು ಅಷ್ಟು ಉನ್ನತ ಮಟ್ಟಕ್ಕೆ ಕರೆದೊಯ್ದವರು ರತನ್ ನೇವಲ್ ಟಾಟಾ. ಇವರು ಭಾರತದ ಅತ್ಯಂತ ಗೌರವಾನ್ವಿತ ದೂರದೃಷ್ಟಿಯ ವ್ಯಾಪಾರ ನಾಯಕರಲ್ಲಿ ಓರ್ವರು.

ಪ್ರತಿಷ್ಠಿತ ಟಾಟಾ ಕುಟುಂಬದಲ್ಲಿ ಡಿಸೆಂಬರ್ 28, 1937 ರಂದು ಜನಿಸಿದ ಇವರು ಟಾಟಾ ಸಮೂಹವನ್ನು ಸಂಘಟಿತ ಸಂಸ್ಥೆಯನ್ನಾಗಿ ಮಾಡಲು ಪ್ರಮುಖ ಪಾತ್ರ ವಹಿಸಿದರು. ಇವರ ಮಾರ್ಗದರ್ಶನದಲ್ಲಿ ಟಾಟಾ ಸಂಸ್ಥೆಯ ವಾಹನ, ಉಕ್ಕು, ತಂತ್ರಜ್ಞಾನ ಮತ್ತು ತಂಡ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗಳನ್ನು ಮಾಡಿದೆ. ರತನ್ ಟಾಟಾ ಅವರ ತಂದೆ ನೇವಲ್ ಟಾಟಾ ಭಾರತದ ವಾಯುಯಾನ ಉದ್ಯಮದ ಸಂಸ್ಥಾಪಕ ಜೆಆರ್’ಡಿ ಟಾಟಾ ಅವರ ಕಿರಿಯ ಸಹೋದರ.
ರತನ್ ಟಾಟಾ ಅವರು ತಮ್ಮ ಶಾಲಾ ಶಿಕ್ಷಣವನ್ನು ಮುಂಬೈನ ಕ್ಯಾಂಪಿಯನ್ ಶಾಲೆಯಲ್ಲಿ 8ನೇ ತರಗತಿಯವರೆಗೆ ಪೂರ್ಣಗೊಳಿಸಿದರು. ನಂತರ ಅವರು ಮುಂಬೈನ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆ, ಬಪ್ ಕಾಟನ್ ಶಾಲೆ ಮತ್ತು ನ್ಯೂಯಾರ್ಕ್ ನಗರದ ರಿವರ್ಡೇಲ್ ಕಂಟ್ರಿ ಸ್ಕೂಲಿನಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು. ತರುವಾಯ, ಅವರು ಯುನೈಟೆಡ್ ಸ್ಟೇಟ್ ಕಾರ್ವೆಲ್ ವಿಶ್ವವಿದ್ಯಾನಿಲಯದಲ್ಲ ತಮ್ಮ ಪದವಿ ಪೂರ್ವ ಅಧ್ಯಯನವನ್ನು ಮುಂದುವರೆಸಿದರು.

ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು 1961ರಲ್ಲಿ ಟಾಟಾ ಗ್ರೂಪ್ ಸೇರಿದರು. 2008ರಲ್ಲಿ ಫೋರ್ಡ್ ಮೋಟಾರ್ ಕಂಪೆನಿಯಿಂದ ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಸ್ವಾಧೀನಪಡಿಸಿಕೊಂಡಿದ್ದು ರತನ್ ಟಾಟಾ ಅವರ ಅತ್ಯಂತ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ.

ಇದರೊಂದಿಗೆ ಟೆಟ್ಲಿ ಟೀ ಮತ್ತು ಕೋರಸ್ ಆಂಗ್ಲೋ ಡಚ್ ಕಂಪೆನಿಯನ್ನು ಟಾಟಾ ಸ್ಟೀಲ್ ಸ್ವಾಧೀನಪಡಿಸಿಕೊಂಡಿದ್ದ ಮತ್ತೊಂದು ಪ್ರಮುಖ ಸಾಧನೆ. ಇದು ಟಾಟಾ ಗ್ರೂಪ್ ಅನ್ನು ಜಾಗತಿಕ ನಕ್ಷೆಯಲ್ಲಿ ಇರಿಸಿತು.

ಮಧ್ಯಮ ವರ್ಗದವರು ಮೂರ್ನಾಲ್ಕು ಜನ ಒಂದೇ ಬೈಕ್’ನಲ್ಲೇ ಹೋಗುತ್ತಿದ್ದನ್ನು ನೋಡಿದ ರತನ್ ಟಾಟಾ ಅವರು ಜನಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ನ್ಯಾನೋ ಮತ್ತು ಇಂಡಿಕಾ ಕಾರುಗಳನ್ನು ನಿರ್ಮಿಸಿದರು. ಇದು ನವೀನ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಗೆ ಅವರ ಬದ್ಧತೆಗೆ ಉದಾಹರಣೆಯಾಗಿದೆ.
ಅವರ ವ್ಯಾಪಾರ ಸಾಧನೆಗಳ ಹೊರತಾಗಿ, ರತನ್ ಟಾಟಾ ಅವರು ತಮ್ಮ ಸರಳ ವ್ಯಕ್ತಿತ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಹತ್ತಿರ ಎಷ್ಟೇ ಕೋಟಿ ಕೋಟಿ ಸಂಪತ್ತಿದ್ದರೂ ಸರಳತೆಯಿಂದ ಜೀವಿಸುತ್ತಿದ್ದರು. ಸಾಮಾನ್ಯ ಒಂದು ಅಪಾಟ್ಮೆಂಟ್’ನಲ್ಲಿ ಒಂಟಿಯಾಗಿ ತಮ್ಮ ಎರಡು ಜರ್ಮನ್ ಶೆಫರ್ಡ್ ನಾಯಿಗಳ ಜೊತೆ ಜೀವಿಸುತ್ತಿದ್ದರು. ಅವರ ಜೀವನ ಶೈಲಿ ತುಂಬಾ ಸರಳವಾಗಿತ್ತು. ಅವರು ಯಾವಾಗಲೂ ವೈಯಕ್ತಿಕ ಲಾಭಕ್ಕಿಂತ ಹೆಚ್ಚಾಗಿ ಇತರರ ಕಲ್ಯಾಣವನ್ನು ಬಯಸುತ್ತಿದ್ದರು.

ಮುಂಬೈನ ತಾಜ್ ಹೋಟೆಲ್ ಭಯೋತ್ಪಾದಕರ ದಾಳಿಗೆ ತುತ್ತಾದಾಗ ಹೊಟೇಲಿನ ನೌಕರರಿಗೆ ಅವರೇ ಕುತ್ತಾಗಿ ನೌಕರರ ಸಂಬಳವನ್ನು ಕೊಟ್ಟಿದ್ದರು. ಅಲ್ಲದೇ, ಅಲ್ಲಿಯೇ ಅಕ್ಕಪಕ್ಕ ತಿಂಡಿ ತಿನಿಸುಗಳನ್ನು ಮತ್ತು ಇತ್ಯಾದಿಗಳನ್ನು ಮಾರುತ್ತಿದ್ದವರಿಗೂ ಕೂಡ ಧನ ಸಹಾಯ ಮಾಡಿದ್ದರು. ಇದರಿಂದ ಅವರು ಎಷ್ಟು ಕರುಣಾಶಾಲಿ ಮನುಷ್ಯ ಎಂದು ತಿಳಿಯುತ್ತದೆ. ಹೀಗೆ ಅವರು ಪ್ರಪಂಚದಾದ್ಯಂತ ಜನರ ಗೌರವ ಮತ್ತು ಮೆಚ್ಚುಗೆಯನ್ನು ಗಳಿಸಿದ್ದಾರೆ.
ಭಾರತೀಯ ಉದ್ಯಮ ಮತ್ತು ಸಮಾಜಕ್ಕೆ ರತನ್ ಟಾಟಾ ಅವರ ಕೊಡುಗೆಗಳನ್ನು ವ್ಯಾಪಕ ಗುರುತಿಸಲಾಗಿದೆ. ಇವರ ಇಂತಹ ಸಾಧನೆಗಳನ್ನು ಗುರುತಿಸಿ ಹಲವಾರು ಪುರಸ್ಕಾರಗಳು ಇವರನ್ನು ಅಲಂಕರಿಸಿವೆ. ಕೆಲವು ಪ್ರತಿಷ್ಠಿತ ಪಶಸ್ತಿಗಳು 2000ರಲ್ಲಿ ಪದ್ಮಭೂಷಣ, 2008ರಲ್ಲಿ ಪದ್ಮವಿಭೂಷಣ, ಸೇರಿ ಭಾರತದ ಅತ್ಯುನ್ನತ ನಾರಿಕ ಗೌರವಗಳು ಸಂದಿವೆ. 2012ರಲ್ಲಿ ಟಾಟಾ ಗ್ರೂಪ್ ಅಧ್ಯಕ್ಷ ಪದವಿಯಿಂದ ನಿವೃತ್ತರಾದ ನಂತರ ರತನ್ ಟಾಟಾ ಅವರು ಯುವ ಉದ್ಯಮಿಗಳಿಗೆ ಮಾರ್ಗದರ್ಶನ ಮಾಡುವುದು ಮುಂತಾದ ಲೋಕೋಪಕಾರಿ ಕೆಲಸಗಳನ್ನು ಮಾಡುತ್ತಿದ್ದರು.

ರತನ್ ಟಾಟಾ ಕೇವಲ ಉದ್ಯಮಿಯಾಗಿರಲಿಲ್ಲ, ಅವರು ನೈತಿಕ ನಾಯಕತ್ವ ಮತ್ತು ಸಾಮಾಜಿಕ ಜವಾಬ್ದಾರಿಗೆ ಮಾದರಿಯಾಗಿದ್ದರು. ಅವರ ದೃಷ್ಟಿ, ಸಮಗ್ರತೆ ಮತ್ತು ನಮ್ರತೆಯಿಂದ ಕೂಡಿದ ವ್ಯಕ್ತಿತ್ವ ಎಲ್ಲರಿಗೂ ಕೂಡ ಉದಾಹರಣೆಯಾಗಿದೆ. ಪ್ರಾಮಾಣಿಕತೆ ಮತ್ತು ಸಹಾನುಭೂತಿಯ ಮೌಲ್ಯಗಳಿಗೆ ನಿಷ್ಠರಾಗಿ ಟಾಟಾ ಗ್ರೂಪ್ ಅವರ ನಾಯಕತ್ವ ಮತ್ತು ಸಾಮಾಜಿಕ ಕಾರಣಗಳಿಗಾಗಿ ಅವರ ಬದ್ಧತೆ ಎಂದೆದಿಗೂ ಮರೆಯಲಾಗದಂತದ್ದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

http://kalpa.news/wp-content/uploads/2024/04/VID-20240426-WA0008.mp4

Kalahamsa Infotech private limited

Tags: AnandakandaJRD TataKannada News WebsiteLatest News KannadaRatan TataTata Steelಆನಂದಕಂದಉದ್ಯಮ ರತ್ನಜೆಆರ್'ಡಿ ಟಾಟಾಟಾಟಾ ಸ್ಟೀಲ್ಟೆಟ್ಲಿ ಟೀರತನ್ ನೇವಲ್ ಟಾಟಾ
Previous Post

ಶಿವಮೊಗ್ಗ | ಎಚ್ಚರ ನಾಗರಿಕರೇ, ಮೊಬೈಲ್ ಲಿಂಕ್ ಮಾಡಿದ ವ್ಯಕ್ತಿ ಕಳೆದುಕೊಂಡಿದ್ದು ಎಷ್ಟು ಹಣ?

Next Post

ಸೊರಬ | ಸಾಮಾಜಿಕ ಸಮತೋಲನಕ್ಕೆ ನೆರವಾಗಿ ನಿಲ್ಲುವ ಅಂಟಿಗೆ ಪಂಟಿಗೆ ಹೇಗಿತ್ತು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸೊರಬ | ಸಾಮಾಜಿಕ ಸಮತೋಲನಕ್ಕೆ ನೆರವಾಗಿ ನಿಲ್ಲುವ ಅಂಟಿಗೆ ಪಂಟಿಗೆ ಹೇಗಿತ್ತು?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಕುರಿತಾಗಿ ಮಹತ್ವದ ಮಾಹಿತಿ ಇಲ್ಲಿದೆ

June 24, 2025

ಯೋಗವು ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ ಅಂಗ: ಶ್ರೀ ಮ ನಿ ಪ್ರ ಮಹಾಂತ ಸ್ವಾಮೀಜಿ

June 24, 2025

ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಂಡು ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಬಲ ನೀಡಿ

June 24, 2025

ಜುಲೈ 6ರಂದು ವಿಪ್ರ ಯುವ ಮಹೋತ್ಸವ: ಅಭಿನವ ವಿದ್ಯಾಶಂಕರ ಭಾರತೀ ಶ್ರೀಗಳಿಂದ ಕಾರ್ಯಕ್ರಮಕ್ಕೆ ಚಾಲನೆ

June 24, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಕುರಿತಾಗಿ ಮಹತ್ವದ ಮಾಹಿತಿ ಇಲ್ಲಿದೆ

June 24, 2025

ಯೋಗವು ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ ಅಂಗ: ಶ್ರೀ ಮ ನಿ ಪ್ರ ಮಹಾಂತ ಸ್ವಾಮೀಜಿ

June 24, 2025

ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಂಡು ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಬಲ ನೀಡಿ

June 24, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!