No Result
View All Result
Marriott Bonvoy Expands ICC Partnership to Include Women’s T20 World Cup 2026
English Articles

Marriott Bonvoy Expands ICC Partnership to Include Women’s T20 World Cup 2026

by ಕಲ್ಪ ನ್ಯೂಸ್
May 19, 2026
0

Kalpa Media House  |  Special Article | Marriott Bonvoy, the global travel platform by Marriott International, has announced the expansion...

Read moreDetails
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
Ashwini Vaishnaw Flags Off Bengaluru–Mumbai Express; Announces Vande Bharat Sleeper Soon

Ashwini Vaishnaw Flags Off Bengaluru–Mumbai Express; Announces Vande Bharat Sleeper Soon

May 18, 2026
Amazon India to deploy 1,000 Eicher electric trucks for Amazon Now operations

Amazon India to deploy 1,000 Eicher electric trucks for Amazon Now operations

May 18, 2026
South Western Railway, Mysuru Division Hosts Inter Department Drama Competition

South Western Railway, Mysuru Division Hosts Inter Department Drama Competition

May 16, 2026
  • Advertise With Us
  • Grievances
  • About Us
  • Contact Us
Tuesday, May 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಬೃಂದಾವನದ ಒಳಗಿನಿಂದಲೇ ಪೇಜಾವರ ಶ್ರೀಗಳು ನಡೆಸಿದ ಪವಾಡವೇನು? ಭಕ್ತನಿಗೆ ಒಲಿದ ಗುರು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 9, 2020
in Small Bytes, Special Articles
0
ಬೃಂದಾವನದ ಒಳಗಿನಿಂದಲೇ ಪೇಜಾವರ ಶ್ರೀಗಳು ನಡೆಸಿದ ಪವಾಡವೇನು? ಭಕ್ತನಿಗೆ ಒಲಿದ ಗುರು
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಇಡಿಯ ವಿಶ್ವದಲ್ಲೇ ಅಪರೂಪದಲ್ಲಿ ಅಪರೂಪದ ಸನ್ಯಾಸಿಗಳಾಗಿ, ಸಮಾಜವನ್ನು ತಿದ್ದಿತೀಡುವ ಗುರುವಾಗಿ, ಮಧ್ವಮತವನ್ನು ದೇಶದಾದ್ಯಂತ ಪಸರಿಸಿ ಅನನ್ಯವಾಗಿ 80 ವರ್ಷಗಳ ಕಾಲ ಶ್ರೀಕೃಷ್ಣದ ಸೇವೆ ಸಲ್ಲಿಸಿದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಕೋಟ್ಯಂತರ ಭಕ್ತರಿಗೆ ಕಣ್ಣಿಗೆ ಕಾಣುವ ದೇವರಾಗಿದ್ದರು.

ಇಂತಹ ಗುರುಗಳ ವಯೋಸಹಜ ಅಸ್ವಸ್ಥತೆಯಿಂದ ಇತ್ತೀಚೆಗಷ್ಟೇ ಹರಿಪಾದ ಸೇರಿದ್ದು, ಬೆಂಗಳೂರಿನಲ್ಲಿರುವ ವಿದ್ಯಾಪೀಠದಲ್ಲಿ ಅವರ ಬೃಂದಾವನ ಮಾಡಲಾಗಿದೆ. ಪ್ರತಿನಿತ್ಯ ಸಾವಿರಾರು ಮಂದಿ ಸನ್ನಿಧಾನಕ್ಕೆ ಭೇಟಿ ನೀಡಿ ಗುರುಗಳ ದರ್ಶನ ಪಡೆಯುತ್ತಿದ್ದಾರೆ. ಭಕ್ತರ ಪಾಲಿಗೆ ಪ್ರೀತಿ ಕರುಣೆ ತುಂಬಿದ ತಾಯಿಯಾಗಿ, ತಪ್ಪು ತಿದ್ದುವ ತಂದೆಯಾಗಿ, ದಾರಿ ತೋರುವ ಗುರುವಾಗಿದ್ದ ಶ್ರೀಗಳು ಬೃಂದಾವನದೊಳಗಿನಿಂದಲೇ ಎಲ್ಲರನ್ನೂ ಅನುಗ್ರಹಿಸುತ್ತಿದ್ದಾರೆ.

ಇಂತಹ ಗುರುಗಳು ಶಶಿಧರ ರಾವ್ ಎಂಬ ಭಕ್ತರೊಬ್ಬರಿಗೆ ಬೃಂದಾವನದ ಒಳಗಿನಿಂದಲೇ ಅನುಗ್ರಹಿಸಿದ್ದು, ಇದನ್ನು ಅತ್ಯಂತ ಭಕ್ತಿ, ಭಾವಪರವಶರಾಗಿ ತಮ್ಮ ಫೇಸ್’ಬುಕ್’ನಲ್ಲಿ ಹಂಚಿಕೊಂಡಿದ್ದಾರೆ. ಇದರಂತೆ, ಇಲ್ಲಿ ಗುರುಗಳ ಪವಾಡವೇ ನಡೆದಿದೆ. ತಮ್ಮ ಅನುಭವವನ್ನು ಶಶಿಧರ್ ರಾವ್ ಅವರ ಅಕ್ಷರಗಳಲ್ಲೇ ಓದಿ…

ಬೃಂದಾವನದೊಳಗಿನಿಂದಲೇ ಪ್ರೇರಣೆ ಕೊಟ್ಟು ಫಲ ಪ್ರಸಾದ ಕೊಡಿಸಿದ ಪ್ರಾತಃಸ್ಮರಣೀಯ ಶ್ರೀಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು

ನಿನ್ನೆ ರಾತ್ರಿ 9:30 ಸುಮಾರಿಗೆ (ಅಂದರೆ 30 ನೇ ಡಿಸೆಂಬರ್ 2019) ಶ್ರೀ ವಿಶ್ವೇಶತೀರ್ಥರ ವೃಂದಾವನ ದರ್ಶನ ಮಾಡಬೇಕೆಂದೆನಿಸಿತು.

ಯಥಾಪ್ರಕಾರ ಬೆಂಗಳೂರು ಮಹಾನಗರಿಯ ಟ್ರಾಫಿಕ್….. 10:30 ಸುಮಾರಿಗೆ ಶ್ರೀಪೂರ್ಣಪ್ರಜ್ಞ ವಿದ್ಯಾಪೀಠ ತಲುಪಿದೆ.

ನಾನು ಸ್ವಭಾವತಃ ಅತ್ಯಂತ ಭಾವುಕ ವ್ಯಕ್ತಿ. ಆದರೆ ನನ್ನ ಆತ್ಮೀಯರಿಗಷ್ಟೇ ನನ್ನ ಅತ್ಯಂತ ಭಾವುಕ ವ್ಯಕ್ತಿತ್ವದ ಪರಿಚಯವಿದೆ.

ಭಾವನಾತ್ಮಕವಾಗಿ ಎಷ್ಟೇ ಏರಿಳಿತಗಳಿದ್ದರೂ ಅದನ್ನು ಎಲ್ಲಿಯೂ ನೇರವಾಗಿ ತೋರ್ಪಡಿಸಿಕೊಳ್ಳದೆ, ತಾಳ್ಮೆಯಿಂದ ಮಾಡಬೇಕಾದ ಕರ್ತವ್ಯಗಳನ್ನು ಮಾಡುವುದು ಸಾಮಾನ್ಯವಾಗಿ ಒಬ್ಬ ಮ್ಯಾನೇಜ್ಮೆಂಟ್ ವ್ಯಕ್ತಿಗಿರಬೇಕಾದ ಗುಣ.

ಹಾಗಿರುವಾಗ, ಬಹುತೇಕ ಸಂದರ್ಭಗಳಲ್ಲಿ ನನ್ನ ಆತ್ಮೀಯರು ಹೊರತುಪಡಿಸಿದರೆ ಬೇರೆಯವರು ನಾನು ಭಾವುಕನಾದದ್ದನ್ನು ಸಾಮಾನ್ಯವಾಗಿ ಗಮನಿಸುವ ಸಂದರ್ಭ ಕಡಿಮೆ.

ಹೀಗಿರುವಾಗ, ಶ್ರೀ ವಿಶ್ವೇಶ ತೀರ್ಥರ ವೃಂದಾವನದ ಎದುರು ನಿಂತು ಕೈ ಮುಗಿಯುತ್ತಿದ್ದಂತೆ ನನಗರಿವಿಲ್ಲದೆ ಕಣ್ಣಾಲಿಗಳು ತುಂಬಿ ಬಂದವು.

ತಕ್ಷಣ ಮನಸಿಗೆ ಒಂದು ವಿಚಾರ ನೆನಪಿಗೆ ಬಂದಿತು.

ಸ್ವಾಮಿಗಳು ಭೌತಿಕ ಶರೀರದೊಂದಿಗಿದ್ದಾಗ ಮಂತ್ರಾಕ್ಷತೆ -ಫಲ ಕೊಟ್ಟು ಆಶೀರ್ವದಿಸುತ್ತಿದ್ದರು.

ಈಗ ಸ್ವಾಮಿಗಳು ವೃಂದಾವನಸ್ಥರಾದ ಮೇಲೆ ಅವರ ಆಶೀರ್ವಾದದ ರೂಪದಲ್ಲಿ ಏನನ್ನು ಪಡೆದು ಬರುವುದು ಎಂಬ ಚಿಂತೆ ಮನಸಿಗೆ ಬಂದು ಕೆಲ ಕ್ಷಣಗಳಾಗಿತ್ತಷ್ಟೇ.. ಆಗಲೇ ಘಟಿಸಿದ್ದು ವಿಶೇಷ.

ಅತ್ಯಂತ ಆಶ್ಚರ್ಯಕಾರಿಯಾಗಿ ನನ್ನ ಮನಸಿನಲ್ಲಿದ್ದ ಆಲೋಚನೆಯನ್ನು ಸ್ವಾಮಿಗಳು ವೃಂದಾವನದಿಂದಲೇ ಗಮನಿಸಿ ಆಶೀರ್ವದಿಸಿದರೋ ಎಂಬಂತೆ ಸ್ವಾಮಿಗಳ ಶಿಷ್ಯವರ್ಗದ ವಿದ್ಯಾಪೀಠದವರೊಬ್ಬರು ವೃಂದಾವನದ ಸಮೀಪದಲ್ಲೇ ಇರಿಸಿದ್ದ ಹೂವು ಹಾಗೂ ಹಣ್ಣಿನ ಫಲ ಪ್ರಸಾದವನ್ನು ತೆಗೆದು ನನಗೆ ಕೊಟ್ಟರು.

ಅದೂ ರಾತ್ರಿ 10:30 ರ ಸುಮಾರಿಗೆ.. (ಸ್ವಾಮಿಗಳು ಅವರ ಪರವಾಗಿ ಫಲವನ್ನು ಕೊಟ್ಟು ಅವರ ಆಶೀರ್ವಾದ ದೊರೆಯುವಂತೆ ಮಾಡಲು ಪ್ರೇರೇಪಿಸಿದ್ದಾರೆಂಬಂತೆ).

ಆ ಫಲವು ಶ್ರೀ ವಿಶ್ವೇಶ ತೀರ್ಥರ ವೃಂದಾವನಕ್ಕೆ ಕೆಲವೇ ಅಡಿಗಳಷ್ಟು ಸಮೀಪದಲ್ಲಿ ಇರಿಸಲಾಗಿದ್ದ ಅವರ ಚಿತ್ರದ ಮೂಲಕ ಅವರಿಗೆ ಸಮರ್ಪಣೆ ಮಾಡಲಾಗಿದ್ದ ಅವರ ಪ್ರಸಾದ ರೂಪದ ಫಲವೇ.

ಶ್ರೀಗಳು ವೃಂದಾವನಸ್ಥರಾದ ಮೇಲೆ ಅವರ ಮೇಲೆ ಅನೇಕ ಜ್ಞಾನಿಗಳು ಶ್ಲೋಕಗಳನ್ನು ರಚಿಸಿದ್ದಾರೆ, ರಚಿಸುತ್ತಿದ್ದಾರೆ.

ಅನೇಕ ಅಂತಹ ಶ್ಲೋಕಗಳಲ್ಲಿ ಶ್ರೀಗಳನ್ನು ಅಭೀಷ್ಟಪ್ರದರೆಂದು ಕರೆದಿದ್ದಾರೆ. ಅದು ಮೇಲಿನ ಘಟನೆಯಲ್ಲೊಮ್ಮೆ ಮತ್ತೊಮ್ಮೆ ನಿರೂಪಿತವಾಯಿತು.

ಮಹಾತ್ಮರು ಶರೀರದೊಂದಿಗೆ ಇದ್ದಾಗ ಎಷ್ಟು ಶಕ್ತಿ – ಮಹಿಮೆಗಳನ್ನು ಪ್ರಕಟಪಡಿಸುತ್ತಾರೆಯೋ, ಅದಕ್ಕಿಂತಲೂ ಅನೇಕ ಪಟ್ಟು ಹೆಚ್ಚಿನ ಶಕ್ತಿ – ಮಹಿಮೆಗಳು ಅವರು ಶರೀರ ತ್ಯಾಗ ಮಾಡಿದ ಮೇಲೆ ಅವರಿಂದ ಪ್ರಕಟವಾಗುತ್ತದೆ ಎಂಬುದನ್ನು ಅನೇಕ ಜ್ಞಾನಿಗಳು ನಮ್ಮ ನಿಮ್ಮೆಲ್ಲರಿಗೂ ತಿಳಿಸಿ ಕೊಟ್ಟಿದ್ದಾರೆ.

ಏಕೆಂದರೆ, ಶರೀರದೊಂದಿಗಿದ್ದಾಗ ಆ ಶಕ್ತಿಯ ವ್ಯಾಪ್ತಿ ಅದರದ್ದೇ ಆದಂತಹ ರೀತಿಯಲ್ಲಿ ಸೀಮಿತವಾಗಿರುತ್ತವೆ.

ಮಹಾತ್ಮರು ದೇಹತ್ಯಾಗ ಮಾಡಿದ ಮೇಲೆ, ಅವರ ದಿವಾತ್ಮದ ಶಕ್ತಿಗೆ ತಲುಪಬಹುದಾದ ವ್ಯಾಪ್ತಿಯ ಸೀಮೆ ಜಗದ್ವ್ಯಾಪಿಯಾಗಿಬಿಡುತ್ತದೆ.

ನಾಹಂ ಕರ್ತಾ, ಹರಿಃ ಕರ್ತಾ

 ಕೃಪೆ: ಶಶಿಧರ್ ರಾವ್

Get in Touch With Us info@kalpa.news Whatsapp: 9481252093

Tags: BrindavanaMiraclePejawar_seerPejawara Sri BrindavanaPejawara Sri MiracleSaintಪವಾಡಪೇಜಾವರ ಶ್ರೀಬೃಂದಾವನಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರುಸನ್ಯಾಸಿ
Share237Tweet123Send
Previous Post

ಅವರಿಗೆ ಪೇಜಾವರ ಶ್ರೀಗಳದ್ದೇ ನಡೆ, ನುಡಿ: ಒಂದೇ ವರ್ಷದಲ್ಲಿ ಹರಿಪಾದ ಸೇರಿದ ಬಾಲ್ಯ ಸ್ನೇಹಿತರು

Next Post

ಅಪಾಯಕಾರಿ ಟ್ರಂಪ್ ಕೆರೆಳಿದರೆ ವಿಶ್ವ ಭೂಪಟದಿಂದ ಇರಾನ್ ಅಳಿಸಿಹೋದೀತು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಅಪಾಯಕಾರಿ ಟ್ರಂಪ್ ಕೆರೆಳಿದರೆ ವಿಶ್ವ ಭೂಪಟದಿಂದ ಇರಾನ್ ಅಳಿಸಿಹೋದೀತು

ಅಪಾಯಕಾರಿ ಟ್ರಂಪ್ ಕೆರೆಳಿದರೆ ವಿಶ್ವ ಭೂಪಟದಿಂದ ಇರಾನ್ ಅಳಿಸಿಹೋದೀತು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮೈಸೂರು | ಅಧಿಕ ಮಾಸೋತ್ಸವ | ಮೇ 20ರಂದು ಕೌಸಲ್ಯಾ – ಅಪ್ರಮೇಯ ಗಾಯನ

ಮೈಸೂರು | ಅಧಿಕ ಮಾಸೋತ್ಸವ | ಮೇ 20ರಂದು ಕೌಸಲ್ಯಾ – ಅಪ್ರಮೇಯ ಗಾಯನ

May 19, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
ಭಾರತದ ಮೊಟ್ಟ ಮೊದಲ ಬುಲೆಟ್ ಟ್ರೈನ್ ಫಸ್ಟ್ ಲುಕ್ ಹೇಗಿದೆ ನೋಡಿ | ಎಲ್ಲಿಂದ ಎಲ್ಲಿಗೆ?

ಬೆಂಗಳೂರಿಗೆ ಬರಲಿದೆ ಬುಲೆಟ್ ಟ್ರೈನ್ | ಎಲ್ಲೆಲ್ಲಿಗೆ? ಬಿಡುಗಡೆಯಾಯ್ತು ನಕ್ಷೆ

May 19, 2026
33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ!, ಏನಿದು ಕೇಸ್?

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ರಸಾಯನಶಾಸ್ತ್ರ ತರಗತಿ ಸಂಸ್ಥಾಪಕ ಶಿವರಾಜ್ ಸಿಬಿಐನಿಂದ ಬಂಧನ

May 19, 2026
ದೇಶದ 18 ಮಹಾನಗರಗಳಲ್ಲಿ ವಾಟರ್ ಮೆಟ್ರೋ ಆರಂಭಿಸಲು ಕೇಂದ್ರ ಮಾಸ್ಟರ್ ಪ್ಲಾನ್

ದೇಶದ 18 ಮಹಾನಗರಗಳಲ್ಲಿ ವಾಟರ್ ಮೆಟ್ರೋ ಆರಂಭಿಸಲು ಕೇಂದ್ರ ಮಾಸ್ಟರ್ ಪ್ಲಾನ್

May 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL