Tuesday, July 29, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ನರಕ ಚತುರ್ಥಿಗೆ ತೈಲಾಭ್ಯಾಂಗ ಸ್ನಾನ ಮಾಡಿದರೆ ಯಮ ಭಾದೆ ದೂರ

November 5, 2018
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 3 minutes

ಹದಿನಾರು ಸಾವಿರ ಮುಗ್ದ ಯುವರಾಜ ಕುಮಾರಿಯರನ್ನು ನರಕಾಸುರ ಬಂಧಿಸಿ, ತನ್ನ ಸಹಚರರ ಸುಖ ಭೋಗಕ್ಕೆ ಬಳಸಿ, ಸಜ್ಜನರ, ಋಷಿಮುನಿಗಳ ಹಿಂಸೆಗಿಳಿದ. ಇದು ಆಗಿನ ಕಥೆ. ಈಗಲೂ ನಡೆಯುತ್ತಿರುವುದು ಇದುವೆ. ಭಗವಂತ ಆಗಾಗ ಅವತರಿಸುತ್ತಲೇ ಇರುತ್ತಾನೆ ಈ ದುಷ್ಟರ ನಾಶಕ್ಕಾಗಿ.
|ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|
ಎಂಬಂತೆ ಶಸ್ತ್ರಾಸ್ತ್ರ ಹಿಡಿದೂ ಅವತರಿಸುತ್ತಾನೆ, ಧರ್ಮ ಭೋದನೆ ಮಾಡಿಯೂ ಅವತರಿಸುತ್ತಾನೆ. ರಾಮ ಕೃಷ್ಣಾದಿ ಶಸ್ತ್ರ ಹಿಡಿದ ರೂಪದಲ್ಲಿ, ಬಸವಾದಿ ಶರಣರ ರೂಪದಲ್ಲಿ, ಮಧ್ವಾದಿ ಆಚಾರ್ಯತ್ರಯರ ರೂಪದಲ್ಲಿ, ಕನಕಾದಿ ದಾಸರ ರೂಪದಲ್ಲಿ ಭಗವಂತನ ದಶಾವತಾರ(ದಶ ಎಂದರೆ ಹತ್ತು ಮಾತ್ರವಲ್ಲ, ಪೂರ್ಣ ಎಂದೂ ಅರ್ಥವಿದೆ).

ಹಾಗೆಯೇ, ನರಕಾದಿ ದುಷ್ಟದಾನವ ರೂಪದಲ್ಲಿ ಹುಟ್ಟುತ್ತಲೇ ಇರುತ್ತಾರೆ. ಈಗ ಭಗವದ್ಗೀತೆಯನ್ನು ದ್ವೇಷಿಸುವ ಗಂಜೀ ಸಾಹಿತಿಗಳು, ಪರಪೀಡಕ ಸಾಹಿತಿಗಳು, ಪರಗತಿ ವಿಚಾರವಂತರು, ಪರಪೀಡಕ ಭಕ್ತರ ಹಿಂಡು ಇರುವ ಮಠಗಳ ಸ್ವಾಮೀಜಿಗಳು, ಅನ್ಯಧರ್ಮದ ಕೆಲ ನೀಚ ಭಯೋತ್ಪಾದಕ ಕುಲಗಳು, ಗೋಭಕ್ಷಣಾ ಪ್ರಿಯರು ಧರ್ಮ ನಿಂದನೆ ಮಾಡುತ್ತಿರುತ್ತಾರೆ. ಇವರನ್ನು ಇವರಂತಹ ಸರಕಾರಗಳೂ ಬೆಂಬಲಿಸುತ್ತದೆ.
ಉದಾಹರಣೆಗೆ ಕರ್ನಾಟಕದ ಸಿದ್ಧರಾಮಯ್ಯ ಸರಕಾರ, ಕೇರಳದ ಪೀಣರಾಯಿ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರನ್ನು ತೆಗೆದುಕೊಂಡಾಗ ಅರ್ಥವಾಗಬಹುದು. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ನ್ಯಾಯಾಲಯಗಳ ತೀರ್ಮಾನವೂ ಇದಕ್ಕೆ ಬೆಂಬಲವಾಗುತ್ತದೆ. ಆದರೆ ನಾನು ನ್ಯಾಯಾಲಯಗಳ ತಪ್ಪು ಎನ್ನಲ್ಲ. ಅವರಿಗೆ ತಲುಪುವ ದಾಖಲೆಗಳು ತಮಗೆ ಬೇಕಾದಂತೆ ತಿರುಚಿದ್ದರೆ ಅದಕ್ಕೆ ತಕ್ಕಂತೆ ತೀರ್ಮಾನ ನೀಡಬೇಕಾದದ್ದು ನ್ಯಾಯಾಲಯಗಳ ಧರ್ಮ. ತಪ್ಪು ನ್ಯಾಯಾಲಯದಲ್ಲ, ತಪ್ಪು ಶಾಸನ ಮಾಡಿದವರದ್ದೇ ಆಗಿರುತ್ತದೆ.
ಇರಲಿ ಒಂದೊಂದು ಉದಾಹರಣೆ ನೀಡಲು ನೂರಾರು ಪುಟಗಳೇ ಬೇಕಾದೀತು. ಈ ವಿಚಾರ ಇಲ್ಲೇ ನಿಲ್ಲಿಸುವ. ಅಂದು ಈ ನರಕಾಸುರನ ವಿಚಾರ ಹೇಗಾಗಿತ್ತು ಎಂದು ನೋಡೋಣ.
ದರ್ಪ ದಬ್ಬಾಳಿಕೆಯ ನರಕನು ಸ್ವರ್ಗವನ್ನೇ ಸ್ವಾಧೀನ ಮಾಡಿಕೊಂಡು, ದೇವತೆಗಳನ್ನು ಓಡಿಸುತ್ತಾನೆ. ಅವನ ಹೆಸರು ಭೌಮಾಸುರ ಎಂದು, ಮಹಾಶೂರನೀತ. ರಾಜ್ಯಗಳನ್ನು ಜೈಸಿ ಅಲ್ಲಿದ್ದ ಗೋಪಿಕಾ ಸ್ತ್ರೀಯರನ್ನು ಮೊದಲಾಗಿ ಬಂಧಿಸಿ ಇವನ ಬಂಟರಿಗೆ ಭೋಗಕ್ಕಾಗಿ ಮೀಸಲಿಡುತ್ತಾನೆ. ಸಜ್ಜನ ಸ್ತ್ರೀಯ ಮಾನ ಒಮ್ಮೆ ಹೋಗಿಬಿಟ್ಟರೆ ಅವರಿಗೆ ಸಮಾಜದಲ್ಲಿ ಸ್ಥಾನ ಮಾನಗಳಿಲ್ಲ. ಇದು ಸನಾತನ ಧರ್ಮ ಪರಂಪರೆ. ಇದನ್ನು ಮೀರಿ ನಡೆಯುವ ಸಾಮರ್ಥ್ಯ ಇದ್ದರೆ ಭಗವಂತನಿಗೆ ಮಾತ್ರ. ಅಂತಹ ಲೀಲಾಮಾನುಷ ವಿಗ್ರಹವೊಂದು ದೇವಕಿಯ ಎಂಟನೇ ಗರ್ಭದಲ್ಲಿ ಭಗವಾನ್ ವಾಸುದೇವನಾಗಿ, ಮುಂದೆ ಶ್ರೀ ಕೃಷ್ಣನಾಗಿ ಜನಿಸಿ, ಮೊದಲು ವಧೆ ಮಾಡಿದ್ದೇ ತನ್ನ ಸೋದರ ಮಾವ ದುಷ್ಟ ಕಂಸನನ್ನು..  ಅಲ್ಲಿಂದ ಶ್ರೀಕೃಷ್ಣನ ದುಷ್ಟಸಂಹಾರ ಕಾರ್ಯ ಶುರುವಾಗುತ್ತದೆ. ಅಶ್ವಿಜ ಚತುರ್ದಶಿಯನ್ನು ನರಕ ಚತುರ್ದಶಿಯಾಗಿ ಆಚರಿಸುವ ಪದ್ಧತಿಯು ಕೃಷ್ಣನ ಜನನಕ್ಕಿಂತ ಲಕ್ಷಾಂತರ ವರ್ಷಗಳ ಹಿಂದಿನಿಂದಲೇ ಬಂದಿತ್ತು. ಈ ಚತುರ್ದಶಿಯ ಚಂದ್ರೋದಯ ಕಾಲದಲ್ಲಿ ತೈಲಾಭ್ಯಾಂಗ ಸ್ನಾನ ಮಾಡಿದರೆ ಯಮಭಾದೆ ತಪ್ಪುತ್ತದೆ ಎಂಬುದು ಶಾಸ್ತ್ರ ವಚನ. ಇದನ್ನು ನಿರ್ಣಯ ಸಿಂಧು ಮುಂತಾದ ಧರ್ಮಗ್ರಂಥಗಳಲ್ಲಿ ವಿವರಿಸಿದೆ.

ಈ ನರಕಾಸುರನು ತನ್ನ ಭೋಗ ವಿಲಾಸಗಳಿಂದಾಗಿ ಇಂತಹ ಸತ್ಕರ್ಮಗಳನ್ನು ನಾಶಮಾಡಿ, ಅದಕ್ಕೆ ವಿರುದ್ಧವಾಗಿ ನಡೆದುಕೊಂಡದ್ದರಿಂದಲೇ ಅದೇ ಚತುರ್ದಶಿಯು ನರಕನಿಗೆ ಮರಣ ಚತುರ್ದಶಿಯಾಯ್ತು. ಶ್ರೀ ಕೃಷ್ಣನ ಸುದರ್ಶನವು ಅವನನ್ನು ಆಹುತಿ ತೆಗೆದುಕೊಂಡಿತು. ನರಕನ ಕರಾಳ ಮುಷ್ಟಿಯೊಳಗಿದ್ದ ಲಕ್ಷಾಂತರ ಧರ್ಮಗ್ಲಾನಿಗಳು, ಸತ್ಪ್ರಜೆಗಳು ನಿರಾಳವಾದರು. ಆದರೆ ನರಕನ ಬಂಧನದಲ್ಲಿದ್ದ ಹದಿನಾರು ಸಾವಿರ ಗೋಪಿಕಾ ಸ್ತ್ರೀಯರು ಬಂಧನ ಬಿಡುಗಡೆಯಾಗಿಯೂ ದುಃಖಿಗಳೇ ಆಗುತ್ತಾರೆ. ಅವರೆಲ್ಲ ಓಡಿಬಂದು ಕೃಷ್ಣನ ಪಾದಕ್ಕೆರಗಿ ‘ಭಗವಂತಾ ನಮ್ಮನ್ನೂ ನರಕನ ಜತೆಗೇ ನಿನ್ನ ಸುದರ್ಶನದ ಮೂಲಕ ಕಳುಹಿಸಿ ಬಿಡು. ಯಾವ ಸ್ತ್ರೀಯು ಕಳಂಕಿತಳಾದರೆ ಅವಳಿಗೆ ಸಮಾಜದಲ್ಲಿ ಇರುವುದಕ್ಕೆ ಸಾಧ್ಯವೇ. ದುರುಳರ ವಕ್ರ ದೃಷ್ಟಿಯಲ್ಲಿ ಮತ್ತೆ ನಾವು ಸಾಯುವ ವರೆಗೆ ಜೀವಿಸಬೇಕು. ಸಜ್ಜನರ ನಿಂದನೆ, ಅಸ್ಪಶ್ಯತೆಯಲ್ಲೇ ನಾವು ಜೀವಿಸಬೇಕು. ಅದಕ್ಕಿಂತ ಸಾಯುವುದೇ ಲೇಸು. ಇಲ್ಲವೇ ನಾವೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಎಲ್ಲವೂ ನಿನ್ನ ಆಜ್ಞೆಯಲ್ಲಿದೆ’ ಎಂದು ಕಣ್ಣೀರು ಸುರಿಸುತ್ತಾರೆ.

ಆಗ ಭಗವಂತ ನಗುತ್ತಾ,’ ಹೇ ಗೋಪಿಕೆಯರೇ, ಎಲ್ಲರೂ ಒಂದಲ್ಲ ಒಂದು ದಿನ ನನ್ನನ್ನೇ ಸೇರುತ್ತಾರೆ. ಅದರಲ್ಲಿ ನೀವೂ ಹೊರಗಿಲ್ಲ. ಎಷ್ಟೆಷ್ಟು ದಿನ ನೀವಿರಬೇಕು ಎಂಬುದೂ ನನ್ನದೇ ನಿರ್ಧಾರ. ಇಲ್ಲಿಯವರೆಗೆ ದುಷ್ಟನ ಬಂಧನದಿಂದ ಘಾಸಿಗೊಂಡಿರುವಿರಿ. ಮುಂದೆ ಸಮಾಜ ನಿಂದನೆಯಲ್ಲಿ ಘಾಸಿಗೊಳ್ಳುವೆವು ಎಂಬ ಭಯ ನಿಮ್ಮಲ್ಲಿದೆ. ಅದಕ್ಕೂ ಪರಿಹಾರ ತೋರಿಸುತ್ತೇನೆ. ಇದೋ ಇದೋ, ನೀವು ಈಗಿಂದೀಗಲೇ ಒಂದೊಂದು ಮಂಗಳಸೂತ್ರವನ್ನು ನನ್ನ ಹೆಸರಿನಲ್ಲಿ ಪ್ರಮಾಣ ಮಾಡಿ ಕಟ್ಟಿಕೊಳ್ಳಿರಿ. ಇಂದಿನಿಂದೇ ನಾನು ನಿಮಗೆಲ್ಲರಿಗೂ ಪತಿ. ಗಂಡನೆಂಬವನೊಬ್ಬನಿದ್ದರೆ ಹೆಂಗಸಿಗೆ ಭಯವಿಲ್ಲ. ನಾನೇ ನಿಮ್ಮ ಮಾನಸಿಕವಾದ ಗಂಡ ಎಂದು ಘೋಷಿಸುತ್ತೇನೆ. ಗಂಡಸಾಗಿದ್ದವ ನಿಮ್ಮನ್ನೇನಾದರೂ ಮುಟ್ಟಿದರೆ, ನಿಂದಿಸಿದರೆ ನನ್ನ ಸುದರ್ಶನ ಜ್ವಾಲೆಗೆ ಸುಟ್ಟು ಭಸ್ಮವಾಗಲಿ’ ಎಂದು ಭಗವಂತನು ಅಭಯನೀಡುತ್ತಾನೆ.

ಅಲ್ಲಿಯವರೆಗೆ ನಿಂತುಹೋಗಿದ್ದ ಚತುರ್ದಶಿಯ ಚಂದ್ರೋದಯ ಕಾಲದ ತೈಲಾಭ್ಯಾಂಗ ಸ್ನಾನವು ಅಲ್ಲಿಂದಲೇ ಪ್ರಾರಂಭವಾಯ್ತು. ನರಕಾಸುರನ ಮಗ ಭಗದತ್ತನಿಗೂ ರಾಜ್ಯಾಭಿಷೇಕವನ್ನು ಸ್ವತಃ ಕೃಷ್ಣನೇ ನೆರವೇರಿಸಿ ಸನ್ಮಂಗಳ ಮಾಡಿದ ಆ ಲೀಲಾಮಾನುಷ ವಿಗ್ರಹನಾದ ಪ್ರಭು ಶ್ರೀಕೃಷ್ಣ.
(6 ನವೆಂಬರ್ ಚಂದ್ರೋದಯಕ್ಕೆ ತೈಲಾಭ್ಯಾಂಗ ಸ್ನಾನ. ನರಕ ಚತುರ್ದಶಿ)
–ಪ್ರಕಾಶ್ ಅಮ್ಮಣ್ಣಾಯ

Tags: DeepawaliKannada ArticleKannadaNewsLord KrishnaNaraka ChaturthiPrakash Ammannayaದೀಪಾವಳಿನರಕ ಚತುರ್ದಶಿನರಕಾಸುರಶ್ರೀ ಕೃಷ್ಣ
Previous Post

ಮೋದಿ ಮನಸ್ಸು ಮಾಡಿದರೆ ಅವರ ತಾಕತ್ತು ಎಂತಹುದ್ದು ಗೊತ್ತಾ?

Next Post

ದೀಪಾವಳಿ ಮಹತ್ವ ಎಂತಹದ್ದು? ಮೂರು ದಿನ ಆಚರಣೆ ಹೇಗೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ದೀಪಾವಳಿ ಮಹತ್ವ ಎಂತಹದ್ದು? ಮೂರು ದಿನ ಆಚರಣೆ ಹೇಗೆ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Strings of Spring-A grand musicalevening at Brussels by Amruthavarshini collaborating with Indian Embassy

July 29, 2025

ಶಿವಮೊಗ್ಗ | ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಚಂದ್ರಗುತ್ತಿ ಬೆಟ್ಟದ ಪ್ರಾಕೃತಿಕ ಸೌಂದರ್ಯ

July 29, 2025

ನಮ್ಮ ಮೇಲೆ ಯಾರದ್ದೇ ಅಣುಬಾಂಬ್ ದಾಳಿ ಬ್ಲಾಕ್’ಮೇಲ್ ನಡೆಯಲ್ಲ: ಮೋದಿ ಗುಡುಗು

July 29, 2025

ಶಟಲ್ ಬ್ಯಾಡ್ಮಿಂಟನ್‌ | ಕ್ರೈಸ್ಟ್‌ಕಿಂಗ್  ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

July 29, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Strings of Spring-A grand musicalevening at Brussels by Amruthavarshini collaborating with Indian Embassy

July 29, 2025

ಶಿವಮೊಗ್ಗ | ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಚಂದ್ರಗುತ್ತಿ ಬೆಟ್ಟದ ಪ್ರಾಕೃತಿಕ ಸೌಂದರ್ಯ

July 29, 2025

ನಮ್ಮ ಮೇಲೆ ಯಾರದ್ದೇ ಅಣುಬಾಂಬ್ ದಾಳಿ ಬ್ಲಾಕ್’ಮೇಲ್ ನಡೆಯಲ್ಲ: ಮೋದಿ ಗುಡುಗು

July 29, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!