ಶಿಕಾರಿಪುರ: ರಕ್ತದಾನ ಶ್ರೇಷ್ಠ, ಅದನ್ನು ಸೃಷ್ಠಿಸಲು ಆಗುವುದಿಲ್ಲ ದಾನದ ಮೂಲಕ ಸಂಗ್ರಹಿಸುವ ಕೆಲಸಕ್ಕೆ ಎಲ್ಲ ಯುವಕರೂ ಕೈಜೋಡಿಸಬೇಕು ಎಂದು ಮುರುಘರಾಜೇಂದ್ರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಹೇಳಿದರು.
ಜಗಜ್ಯೋತಿ ಬಸವೇಶ್ವರ ಯುವ ಬಳಗ, ಮುರುಘರಾಜೇಂದ್ರ ವಿರಕ್ತಮಠ, ರೆಡ್ಕ್ರಾಸ್ ಸಂಜೀವಿನಿ ರಕ್ತನಿಧಿ ಶಿವಮೊಗ್ಗ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಕ್ತದಾನದಂತ ಜನೋಪಯೋಗಿ ಕಾರ್ಯಕ್ರಮ ಕಳೆದ 9 ವರ್ಷದಿಂದ ನಡೆಸುತ್ತಿರುವ ಬಸವೇಶ್ವರ ಯುವ ಬಳಗಕ್ಕೆ ಭಗವಂತ ಇನ್ನಷ್ಟು ಸಮಾಜಮುಖಿ ಕೆಲಸ ಮಾಡುವ ಶಕ್ತಿ ನೀಡಲಿ, ರಕ್ತದಾನದಿಂದ ಆಗುವ ಅನುಕೂಲ, ರಕ್ತದಾನದ ಮಹತ್ವ ತಿಳಿಸುವ ಕೆಲಸಕ್ಕೆ ಪ್ರತಿ ಮನೆ ಮನೆಗೆ ತೆರಳಬೇಕು ಇಂತಹ ಕಾರ್ಯಕ್ಕೂ ಸಂಘಟನೆ ಮುಂದಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಓರ್ವ ಮಹಿಳೆ ಸೇರಿದಂತೆ 60ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು, ಜಗಜ್ಯೋತಿ ಯುವ ಬಳಗದ ಟಿ.ಜಿ. ರಾಜೇಂದ್ರಪ್ರಸಾದ್, ಬಿ.ಜೆ. ಮಹೇಶ್, ದೂದೀಹಳ್ಳಿ ಪ್ರವೀಣ, ಹದಡಿ ಪ್ರವೀಣ, ಎಸ್. ವಿನಾಯಕ, ವಿನಯ್ಶಾಸ್ತ್ರಿ, ಬಾಳೇಕಾಯಿ ಪ್ರವೀಣ್, ಮಡ್ಡಿ ಗುರು, ಸಂಜಯ್ ಹೊನ್ನಶೆಟ್ಟರ್, ವಿವೇಕ್ ದೂದೀಹಳ್ಳಿ ಮತ್ತಿತರರು ಇದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post