ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಬಾಡದಬೈಲು-ಕವಡೆಗದ್ದೆ ಶ್ರೀ ಶನೇಶ್ವರ ಸ್ವಾಮಿ ಹಾಗೂ ಅನ್ನಪೂಣೇಶ್ವರಿ ದೇವರ 36ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವ ಮಾ.26ರ ಶನಿವಾರ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ, ಶ್ರೀ ಶನೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ, ತೈಲಾಭಿಷೇಕ, ಎಳನೀರು ಅಭಿಷೇಕ, ಅಲಂಕಾರ ಪೂಜೆ ಮತ್ತು ನವಗ್ರಹ ಪೂರ್ವಕ ಶನಿಮಂತ್ರ ಹವನ ಹಾಗೂ ಸಾರ್ವಜನಿಕ ಶ್ರೀಸತ್ಯನಾರಾಯಣ ವ್ರತ ಮತ್ತು ಶ್ರೀ ಶನೇಶ್ವರಸ್ವಾಮಿಯ ಪೂರ್ಣಾಹುತಿ, ಮಹಾನೈವೇದ್ಯ ಹಾಗೂ ಮಹಾಮಂಗಳರಾತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ರಾತ್ರಿ 8:30ಕ್ಕೆ ಶ್ರೀಲಕ್ಷ್ಮಿ ನರಸಿಂಹ ಯುವಕ ಸಂಘ ಕಮರೂರು ಹಾಗೂ ಶ್ರೀ ಭೂತಲಿಂಗೇಶ್ವರ ಯಕ್ಷಗಾನ ಬಯಲಾಟ ಮಂಡಳಿ ಬಂದಿಗೆ ಇವರಿಂದ ಶ್ರೀ ಶನೇಶ್ವರ ಮಹಾತ್ಮೆ ರಾಜ ವಿಕ್ರಮ ಚರಿತ್ರೆ ಬಯಲಾಟ ನಡೆಯಲಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಬೇಕೆಂದು ದೇವಾಲಯದ ವ್ಯವಸ್ಥಾಪಕರು, ಸೇವಾ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಕೋರಿದ್ದಾರೆ.
Also read: ತಲೆ ತಪ್ಪಿಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನಕ್ಕೆ ಪೊಲೀಸರ ಸೂಪರ್ ಐಡಿಯಾ! ತಾನೇ ಶರಣಾದ ದೂರ್ತ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post