ಕಲ್ಪ ಮೀಡಿಯಾ ಹೌಸ್ | ಸೊರಬ |
ಪ್ರತಿಯೊಬ್ಬರಿಗೂ ಒತ್ತಡದ ಬದುಕಿನಿಂದ ಹೊರಬರಲು ಕ್ರೀಡೆ ಸಹಕಾರಿಯಾಗಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಶಂಕರ್ ಶೇಟ್ ಅಭಿಪ್ರಾಯಪಟ್ಟರು.
ಜನಸಂಗ್ರಾಮ ಪರಿಷತ್, ಯುವಾ ಬ್ರಿಗೇಡ್, ನಮ್ಮೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಧನೆ ಎಲ್ಲ, ಅಲ್ಲ ನಮ್ಮ ನಡೆ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Also read: ಗಮನಿಸಿ! ಆಗುಂಬೆ ಘಾಟಿಯಲ್ಲಿ ಗುಡ್ಡಕುಸಿತ: ಬದಲಿ ಮಾರ್ಗದ ವಿವರ ಇಲ್ಲಿದೆ
ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡಿ ಸೊರಬ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದ ಅವರು, ಈ ರೀತಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಬೇಕಾದದ್ದು ಸಂಘ-ಸಂಸ್ಥೆಗಳ ಕರ್ತವ್ಯವಾಗಿದೆ. ಈ ರೀತಿ ಗುರುತಿಸಿ ಗೌರವಿಸಿದಾಗ ಅವರು ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಯುವ ಬ್ರಿಗೇಡ್ ಸಂಚಾಲಕ ಮಹೇಶ್ ಕಾರ್ವಿ, ಪ್ರಮುಖರಾದ ಎಸ್. ರಾಘವೇಂದ್ರ, ರಂಗನಾಥ ಮೊಗವೀರ, ಮಂಜು, ವಿನೋದ್ ವಾಲ್ಮೀಕಿ, ರಮೇಶ್ ಕಲ್ಲಟ ಬಿ, ಗಂಧರ್ವ, ಅನಿಲ್, ಶ್ವೇತ ನಾಗಪ್ಪ, ರವಿಕುಮಾರ್, ಪೋಷಕರಾದ ರಾಮಪ್ಪ, ನಾಗವೇಣಿ, ನಾಗರಾಜ್, ಲಲಿತ, ನಿಂಗಪ್ಪ, ಹುಚ್ಚಪ್ಪ, ಲೋಕೇಶ್, ಪುಟ್ಟಪ್ಪ, ಗಣಪತಪ್ಪ, ಕಾಳಪ್ಪ, ಲಕ್ಷ್ಮೀಶ್, ಸುರೇಶ್, ದಿನೇಶ್, ಉಮೇಶ್, ಗಣೇಶ್, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post