ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬೆಳಗಾವಿ ವಿಭಾಗ.
ವಿಭಾಗ ಅಭ್ಯಾಸ ವರ್ಗ ( ಬೆಳಗಾವಿ, ಚಿಕ್ಕೋಡಿ )
ಆತ್ಮೀಯ ಕಾರ್ಯಕರ್ತ ಬಂಧುಗಳೇ,
ಸಸ್ನೇಹ ನಮಸ್ಕಾರಗಳು,
ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 154 ನೇ ವರ್ಷಾಚರಣೆ ಕಾರ್ಯಕ್ರಮಗಳು, ಅತ್ಯಂತ ಯಶಸ್ವಿಯಾಗಿ ನಡೆದಿವೆ. ಅಂತೆಯೇ ರಜಾಕಾಲಿನ, ಚಟುವಟಿಕೆಗಳು, ಪರೀಕ್ಷೆ ಸಂಬಂಧಿಸಿದ ಚಟುವಟಿಕೆಗಳು, ಕಾರ್ಗಿಲ ವಿಜಯೋತ್ಸವ ಮತ್ತು ವೀರಯೋಧರಿಗೆ, ಸ್ಮರಣೆ ನಡೆದು ನಮ್ಮ ನಿಮ್ಮೆಲ್ಲರಿಗೂ ಪ್ರೇರಣೆ ನಿಡಿವೆ. ವಿದ್ಯಾರ್ಥಿ ಪರಿಷತ್ ನ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಮಹತ್ವವಾದ ವಿಭಾಗ ಅಭ್ಯಾಸವರ್ಗ ದಿನಾಂಕ : 13, 14 ಮತ್ತು 15 ಅಕ್ಟೋಬರ 2016 ರಂದು ಬೈಲಹೊಂಗಲದಲ್ಲಿ ನಡೆಸಲು ತಿರ್ಮಾನಿಸಿದೆ. ಈ ಅಭ್ಯಾಸ ವರ್ಗಕ್ಕೆ ಅ.ಭಾ.ವಿ.ಪದ ಅಖಿಲ ಭಾರತೀಯ ಮತ್ತು ಪ್ರಾಂತದ ಹಿರಿಯರು, ಕಾರ್ಯಕರ್ತರು, ಉಪಸ್ಥೀತರಿದ್ದು ನಮಗೆಲ್ಲರಿಗೂ ಮಾರ್ಗದರ್ಶನ ಮಾಡಲಿದ್ದಾರೆ. ಈ ವರ್ಗದಲ್ಲಿ ಸೈದ್ಧಾಂತಿಕ ಭೂಮಿಕೆ, ನಮ್ಮ ಕಾರ್ಯಪದ್ಧತಿ, ಕ್ಯಾಂಪಸ್ ಕಾರ್ಯ, ಪ್ರಶಿಕ್ಷಣ, ವರ್ತಮಾನ ಭಾರತದ ಸ್ಥಿತಿಗತಿಗಳು ಮುಂತಾದ ವಿಷಯಗಳು ಸೇರಿದಂತೆ ಹಲವು ಸಂಘಟನಾತ್ಮಕ ವ್ಯಕ್ತಿತ್ವ ವಿಕಾಸನ ಪೂರಕ ವಿಷಯಗಳ ಮಂಡನೆ, ಚರ್ಚೆ, ಸಂವಾದಗಳು ನಡೆಯಲಿವೆ. ಪರಿಷತ್ತಿನ ಮಹತ್ವವಾದ ಈ ವಿಭಾಗ ಅಭ್ಯಾಸ ವರ್ಗಕ್ಕೆ ತಾವು ಅಪೇಕ್ಷಿತರಿದ್ದು ಪೂರ್ಣಸಮಯ ಉಪಸ್ಥಿತರಿರಬೇಕೆಂದು ಕೋರಲಾಗಿದೆ.
* ಸೂಚನೆಗಳು :
1) ಆ. 13 ರಂದು ಮಧ್ಯಾಹ್ನ 4:00 ಗಂಟೆಯೊಳಗೆ ವರ್ಗ ಸ್ಥಳಕ್ಕೆ ತಲುಪಿರಬೇಕು.
2) ವರ್ಗ ಸ್ಥಳವು ಬಸ್ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿದ್ದು ವಾಹನದ ವ್ಯವಸ್ಥೆ ಮಾಡಲಾಗಿದೆ.
3) ವರ್ಗಕ್ಕೆ ಬರುವಾಗ ವ್ಯಾಯಾಮದ ಉಡುಪು ಮತ್ತು ಹಾಸಲು, ಹೊದಿಕೆ ಹಾಗೂ ನಿತ್ಯ ಉಪಯೋಗಿಸುವ ವಸ್ತುಗಳನ್ನು ತರಬೇಕು.
4) ಈ ವರ್ಗದ ಪ್ರವೇಶ ಶುಲ್ಕ 30 ರೂ ಇರುತ್ತದೆ.
5) ಅಕ್ಟೋಬರ್ 15 ರಂದು ಮಧ್ಯಾಹ್ನ ಸಮಾರೋಪದೊಂದಿಗೆ ಮುಕ್ತಾಯಗೊಳ್ಳುವುದು.
ವರ್ಗಸ್ಥಳ : ಶ್ರೀ ವರ್ತಿ ಸಿದ್ಧಬಸವೇಶ್ವರ ಸುಕ್ಷೇತ್ರ ಬೈಲವಾಡ, ಬೈಲಹೊಂಗಲ.
ವಂದನೆಗಳೊಂದಿಗೆ,
ವ್ಯವಸ್ಥಾ ಪ್ರಮುಖ : ಸಂಜು ಪದ್ಮನ್ನವರ್
ಸಹ ವ್ಯವಸ್ಥಾ ಪ್ರಮುಖ : ಸಿದ್ಧಾರೂಡ ಹೊಂಡಪ್ಪನವರ್
ಸುದ್ದಿ : ಅಕ್ಷಯಕುಮಾರ ಕ್ಷತ್ರಿಯ, ಬೆಳಗಾವಿ ಜಿಲ್ಲೆ.
Discussion about this post