Thursday, March 23, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Army

ಆಧುನಿಕ ಮಹಿಳೆಗೆ ಮಾಹಿತಿ ತಂತ್ರಜ್ಞಾನ ಅವಶ್ಯ

October 6, 2016
in Army
0 0
0
Share on facebookShare on TwitterWhatsapp
Read - 2 minutes
ನಾವೀಗ 21 ನೆಯ ಶತಮಾನದಲ್ಲಿ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿದ್ದೇವೆ. ಕೇವಲ ಅಡಿಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ನಾನಾ ರಂಗದಲ್ಲಿ ಜಗತ್ತಿನಲ್ಲಿ ಪುರುಷರಿಗೆ ಸರಿ ಸಮಾನಳಾಗಿ ನಿಂತಿದ್ದಾಳೆ. ಮಾಹಿತಿ ತಂತ್ರಜ್ಞಾನದ ಮುಖ್ಯ ಸಾಧನಗಳಾದ ಮೊಬೈಲ್, ಕಂಪ್ಯೂಟರ್, ವೃತ್ತ ಪತ್ರಿಕೆಗಳು, ನಿಯತಕಾಲಿಕೆಗಳು ಇನ್ನೂ ಅನೇಕ ಮಾಧ್ಯಮಗಳ ಮೂಲಕ ತನ್ನ ಜ್ಞಾನವನ್ನು ಮಹಿಳೆ ಹೆಚ್ಚಿಸಿಕೊಂಡು ಜ್ಞಾನದಾಹಿಗಳಾಗಿದ್ದಾರೆ. ಸಾಧನೆಗಳನ್ನು ಮಾಡುವಲ್ಲಿ, ಹಿಡಿದ ಕೆಲಸವನ್ನು ಗುರಿ ಮುಟ್ಟಿಸುವಲ್ಲಿ, ಅಚ್ಚುಕಟ್ಟಾಗಿ ನೆರವೇರಿಸಿಕೊಳ್ಳುವಲ್ಲಿ ತನ್ನ ಮೂಲಭೂತವಾದ ಗುಣಗಳು ಅವಳಿಗೆ ಅತ್ಯಂತ ಸಹಕಾರಿಯಾಗಿವೆ. ಮಾಹಿತಿ ತಂತ್ರಜ್ಞಾನದಿಂದಾಗಿ ಅವಳು ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಎಷ್ಟೋ ಮೂಢನಂಬಿಕೆಗಳಿಂದ ತನ್ನನ್ನು ತಾನು ವಿಮರ್ಶಿಸಿಕೊಳ್ಳುತ್ತಾ ಆಧುನಿಕ ಯುಗಕ್ಕೆ ಸರಿಯಾಗಿ ಹೇಗೆ ಪರಿವರ್ತಿಸಿಕೊಳ್ಳಬಹುದು ಪರಾಮರ್ಶಿಸಿ ತನ್ನನ್ನು ತಾನು ಹೇಗೆ ತಿದ್ದಿಕೊಳ್ಳಬಹುದು ಎನ್ನುವ ಅರಿವು ಅವಳಿಗೆ ಉಂಟಾಗಿದೆ.
ಸಂಪ್ರದಾಯಗಳ ಹಿಂದೆ ವೈಜ್ಞಾನಿಕ ಸತ್ಯವು ಇದೆ ಎನ್ನುವ ಅರಿವು ಈಗ ಅವಳಿಗೆ ಹಿಂದೆಂದಿಗಿಂತಲೂ ನಿಚ್ಚಳವಾಗಿ ತೋರಿಬರುತ್ತಿದೆ. ಜ್ಞಾನ ಮತ್ತು ನಡತೆಗಳು ಒಂದಕ್ಕೊಂದು ಸಂಬಂಧವನ್ನು ಹೊಂದಿದ್ದು ಜಗತ್ತಿನ ಜ್ಞಾನವನ್ನು ಮಾಹಿತಿ ತಂತ್ರಜ್ಞಾನದಿಂದ ಪಡೆಯುವ ಮೂಲಕ ತಾನು ಪರಿಪೂರ್ಣಳಾಗಬೇಕು, ಆದರ್ಶಪ್ರಾಯವಾಗಿರಬೇಕು. ನಡತೆಯಲ್ಲಿ ತೋರ್ಪಡಿಸುವ ಮೂಲಕ ತಾನು, ತನ್ನ ಕುಟುಂಬ, ಸುತ್ತಲಿನ ಸಮಾಜ ಎಲ್ಲವೂ ಬೆಳಕಾಗಬಲ್ಲುದು ಎನ್ನುವ ಅರಿವು ಮಹಿಳೆಗೆ ಮೂಡಿರುವುದೇ ಮಾಹಿತಿ ತಂತ್ರಜ್ಞಾನದಿಂದ ೨೧ ನೇ ಶತಮಾನದಲ್ಲಿ ಮಹಿಳೆಗೆ ಸಿಕ್ಕಿರುವ ಕೊಡುಗೆಯಾಗಿದೆ. ಇಂಟರ್ ನೆಟ್ ಸೌಲಭ್ಯವನ್ನು ಕಂಪ್ಯೂಟರ್‌ಗಳಲ್ಲಿ, ಮೊಬೈಲ್‌ಗಳಲ್ಲಿ ಅಳವಡಿಸಿಕೊಂಡು ಮನೆಯಲ್ಲಿದ್ದೇ ಪ್ರಪಂಚದ ಘಟನೆಗಳಿಗೆ ಸ್ಪಂದಿಸುವ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಈಗ ಅವಳಿಗೆ ದೊರೆತಿರುವುದು ಅವಳ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆತಿರುವುದರಲ್ಲಿ ಸಂಶಯವಿಲ್ಲ.
ಹಿಂದೊಮ್ಮೆ ಮಕ್ಕಳಿಲ್ಲದವರು ಮಾಹಿತಿ ತಂತ್ರಜ್ಞಾನದ ಕೊರತೆಯಿಂದ ಮಹಿಳೆಯರು ಅದಕ್ಕೆ ತಾನೇ ಪೂರ್ತಿ ಹೊಣೆ ಅದು ತನ್ನ ದುರಾದೃಷ್ಟ ಎನ್ನುವ ಕಾಲವಿತ್ತು. ಮೂಢನಂಬಿಕೆಗಳಿಂದ ಅದಕ್ಕೆ ಪರಿಹಾರವೆನ್ನುವಂತೆ ಗುಡಿ ಗುಂಡಾರಗಳನ್ನು ಸುತ್ತುತ್ತಾ, ವ್ರತ ನಿಯಮಗಳಿಗೆ ತನ್ನನ್ನು ದಂಢಿಸಿಕೊಳ್ಳುತ್ತಾ, ತನ್ನನ್ನೇ ನಿಕೃಷ್ಟಳೆಂದುಕೊಳ್ಳುತ್ತಾ ಇದ್ದ ಕಾಲವಿತ್ತು. ಮಾನಸಿಕವಾಗಿ ತಾವು ಸಮಾಜಬಾಹಿರರೇನೋ ಎನ್ನುವ ಮನಸ್ಥಿತಿಯುಳ್ಳವರಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದರು.
ಆದರೆ, ಇಂದು ತಮ್ಮಷ್ಟೇ ಪುರುಷರೂ ಕಾರಣರು ಇಬ್ಬರಲ್ಲೂ ದೋಷವಿದ್ದಲ್ಲಿ ಮಾತ್ರ ಮಕ್ಕಳಾಗದಿರಲು ಸಾಧ್ಯ. ವೈಧ್ಯಕೀಯ ಲೋಕದ ಸಾಧನೆಗಳಿಂದ ಐವಿಎಫ್ (ತಂತ್ರಜ್ಞಾನ) ಮೂಲಕ  ಅಲ್ಲದೆ ತನ್ನ ಗರ್ಭಕೋಶದ ನಾಳಗಳಲ್ಲಿರುವ ಸಮಸ್ಯೆಗಳಿಂದ ಸರಿಪಡಿಸಿಕೊಳ್ಳುವಲ್ಲಿ ಪುರುಷರಲ್ಲಿ ವೀರ‌್ಯಾಣು ಉತ್ಪಾದನೆ ಹೆಚ್ಚಿಸಿಕೊಳ್ಳುವಂತೆ ಮಾಡಿಸುವಲ್ಲಿ ಇನ್ನೂ ಅನೇಕ ಕಾರಣಗಳು ಮಾಹಿತಿ ತಂತ್ರಜ್ಞಾನದಿಂದಾಗಿ ಮಹಿಳೆಗೆ ಅರಿವಿಗೆ ಬಂದಿದ್ದು ಬಂಜೆತನವನ್ನು ನೀಗಿಸಿಕೊಂಡು ಅತ್ಯಂತ ಸಂಭ್ರಮ ಪಡುತ್ತಿರುವುದನ್ನು ಮಾಹಿತಿ ತಂತ್ರಜ್ಞಾನವು ಅವಳಿಗೆ ದೊರಕಿಸಿಕೊಟ್ಟಿರುವುದು ಆಧುನಿಕ ಯುಗದ ಕೊಡುಗೆಯೆಂದೇ ಹೇಳಬಹುದು.
ಸಾಂಪ್ರದಾಯಿಕ ಅಡಿಗೆಗೆ ತನ್ನನ್ನು ಸೀಮಿತಗೊಳಿಸಿಕೊಂಡಿದ್ದ ಮಹಿಳೆ ಇಂದು ಮಾಧ್ಯಮಗಳ ಮಾಹಿತಿಯಿಂದ ಅನೇಕ ಹೊಸ ರುಚಿಗಳನ್ನು ಕಲಿತುಕೊಂಡಿದ್ದಲ್ಲದೆ , ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ, ಲೇಖನಗಳ ಮೂಲಕ ತನ್ನನ್ನು ಸಮಾಜಕ್ಕೆ ತೆರೆದುಕೊಂಡಿದ್ದಾಳೆ. ಇದರಿಂದ ಅಡುಗೆಯಲ್ಲಿ ಅತೀ ಶೀಘ್ರದಲ್ಲಿ ಹೊಸ ಹೊಸ ರುಚಿಗಳು, ವೈವಿಧ್ಯತೆಯ ಪ್ರಯೋಗಗಳಿಂದ ಹೊಸ ರುಚಿ ಲೋಕದ ಅಡುಗೆ ಮನೆ ಕ್ರಾಂತಿಯೇ ನಡೆದಿದೆ ಎಂದರೆ ತಪ್ಪಾಗಲಾರದು. ಮೊಬೈಲ್, ಕಂಪ್ಯೂಟರ್ ಗಳಲ್ಲಿ ಇಂಟರ್‌ನೆಟ್‌ನ ಉಪಯೋಗದಿಂದ ಆಧುನಿಕ ಮಹಿಳೆ ಇಂದು ಪ್ರಪಂಚದಾದ್ಯಂತ ಸ್ನೇಹಿತರನ್ನು,  ಬಳಗವನ್ನು ಸಂಪರ್ಕಿಸುತ್ತಿದ್ದು ಅಪಾರವಾದ ಜ್ಞಾನದೊಂದಿಗೆ ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿ ಬಂದು ನಿಲ್ಲುವಂತಾಗಿದೆ. ಈಗಿನ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವು ಪ್ರಾಜೆಕ್ಟ್ ಕೆಲಸಗಳಿಗೆ, ಶಾಲೆಯಲ್ಲಿನ ಮಕ್ಕಳ ಚಟುವಟಿಕೆಗಳನ್ನು ಪೋಷಕರಿಗೆ ತಿಳಿಸುವಲ್ಲಿ, ಸಲಹೆ ಪಡೆಯುವಲ್ಲಿ ಶಾಲೆಯ ಪಾತ್ರದಷ್ಟೇ ಮನೆಯಲ್ಲೂ ಮಕ್ಕಳಿಗಾಗಿ ಮಾಹಿತಿ ತಂತ್ರಜ್ಞಾನವನ್ನು ಪೋಷಕರು ಪಡೆಯಬೇಕಾದ್ದು ಅತ್ಯಂತ ಅವಶ್ಯಕವಾಗಿದೆ. ಬ್ಯಾಂಕ್ ವ್ಯವಹಾರಗಳು ಶಾಪಿಂಗ್ ವ್ಯವಹಾರ, ರಸೀದಿಗಳನ್ನು ಪಾವತಿಸುವುದು ಎಲ್ಲವೂ ಇಂದಿನ ಆಧುನಿಕ ಮಹಿಳೆಗೆ ಕ್ಷಣಾರ್ಧದಲ್ಲೇ ಮಾಹಿತಿ ತಂತ್ರಜ್ಞಾನದಿಂದಾಗಿ ದೊರಕಬಲ್ಲುದು.
ಇದರಿಂದ ಅನೇಕ ಸಮಸ್ಯೆಗಳನ್ನು ಅವಳು ಎದುರಿಸುವುದು ಕಂಡುಬರುತ್ತಿದೆ. ಮಾಹಿತಿ ಕೊರತೆಯನ್ನು ಪೂರ್ತಿ ಪಡೆಯಲಾಗದ ಅರೆಬರೆ ತಿಳುವಳಿಕೆಯಿಂದ ಅವಳು ಮೋಸ ಹೋಗುತ್ತಿರುವುದು ಮಾಹಿತಿ ತಂತ್ರಜ್ಞಾನದ ಸಮಸ್ಯೆಯ ಇನ್ನೊಂದು ಮುಖವಾಗಿದೆ. ತನ್ನ ಕುಟುಂಬ ಸದಸ್ಯರುಗಳು ಭಾವನಾತ್ಮಕವಾಗಿ ಹೆಚ್ಚು ಹೊಂದಿಕೊಳ್ಳದೆ ಇರುವುದು, ಮಕ್ಕಳು ಮೊಬೈಲ್ ಕಂಪ್ಯೂಟರ್ ನಿಂದ ಓದಿನತ್ತ ಆಸಕ್ತಿಯನ್ನು ಕಡಿಮೆಮಾಡಿಕೊಳ್ಳುತ್ತಿರುವುದು, ಅಪರಾದದ ಜಾಲದಲ್ಲಿ ಸಿಕ್ಕಿ ಬೀಳುತ್ತಿರುವುದು ಮಹಿಳೆಗೆ ಚಿಂತೆಗೀಡುಮಾಡುತ್ತಿದೆ. ಫೇಸ್‌ಬುಕ್, ವಾಟ್ಸಪ್‌ಗಳ ಲೋಕದಲ್ಲಿ ಕುಟುಂಬದ ಸುಂದರ ಸಮಾರಂಭಗಳಲ್ಲಿ ಭಾಗವಹಿಸಲು ನಿರಾಕರಿಸುತ್ತಿರುವ ಯುವ ಜನಾಂಗವನ್ನು ರೋಬೋಟ್‌ಗಳಾಗಿ ಪರಿವರ್ತನೆ ಗೊಳ್ಳುತ್ತಿರುವುದನ್ನು ತಡೆಯುವುದು ಇಂದಿನ ಸಮಾಜದ ಮಾಹಿತಿ ತಂತ್ರಜ್ಞಾನದ ಅತಿಯಾದ ಅವಲಂಬನೆಯಿಂದಾಗಿ ಅಂಬ ಅರಿವು ಅವಳಲ್ಲಿ ಉಂಟಾಗುತ್ತಿದೆ. ಎಚ್ಚೆತ್ತ ಆಧುನಿಕ ಮಹಿಳೆಗೆ ಇದರಿಂದ ಪರಿಹಾರವು ಅಸಾಧ್ಯವಾಗಲಾರದು. ಅನಾನುಕೂಲಕ್ಕಿಂತ ಅವಳಿಗೆ ೨೧ನೇ ಶತಮಾನದಿಂದೀಚೆಗೆ ಅವಳನ್ನು ಅವಳ ಕುಟುಂಬವನ್ನು ರಕ್ಷಿಸಿಕೊಳ್ಳುವಲ್ಲಿ, ಪರಿಪೂರ್ಣತೆಯೆಡೆಗೆ ಕೊಂಡುಯ್ಯುವಲ್ಲಿ ಸಹಕಾರಿಯಾಗಿದೆ. ಎಂದರೆ ತಪ್ಪಲ್ಲವಲ್ಲವೇ ಎಂದು ಹೇಳುತ್ತಾ.
ಟಿವಿಗಳು, ಕಂಪ್ಯೂಟರ್‌ಗಳು, ಪತ್ರಿಕಾ ಮಾಧ್ಯಮಗಳು ಮೊಬೈಲ್‌ಗಳಲ್ಲಿಯ ವಾಟ್ಸಪ್ ಫೇಸ್‌ಬುಕ್‌ಗಳು ದಿನ ದಿನದ ಮಾಹಿತಿಯನ್ನು ಅವಳು ಮನೆಯಲ್ಲೇ ಕುಳಿತು ತಿಳಿದುಕೊಂಡು ತನ್ನ ಬುದ್ಧಿಮತ್ತೆಗೆ ಇರುವ ಸ್ಪರ್ಧಾವಕಾಶಗಳನ್ನು ಉಪಯೋಗಿಸಿಕೊಡುವಲ್ಲಿ ತೊಡಗಿಸಿಕೊಳ್ಳುವಲ್ಲಿ ೨೧ನೆಯ ಶತಮಾನವು ಅವಳನ್ನು ಅಬಲೆಯಿಂದ ಸಬಲೆಯಾಗುವೆಡೆಯಲ್ಲಿ ಪಾತ್ರ ವಹಿಸಿದೆ. ಸಾಮಾಜಿಕ ಪಿಡುಗಾದ ವರದಕ್ಷಿಣೆ, ಪುರುಷರ ದೌರ್ಜನ್ಯ, ಆರೋಗ್ಯ ಸಮಸ್ಯೆಗಳನ್ನು ಮಾಹಿತಿ ತಂತ್ರಜ್ಞಾನದಿಂದಾಗಿ ಸಮರ್ಥವಾಗಿ ಎದುರಿಸಿ ತನ್ನ ಮಕ್ಕಳನ್ನು ರೂಪಿಸುವಲ್ಲಿ ಅವರಲ್ಲೂ ಅರಿವನ್ನು ಮೂಡಿಸಿ ದಿಟ್ಟತನದಿಂದ ಸಮಾಜವನ್ನು ಎದುರಿಸುವಲ್ಲಿ ಅಣಿಗೊಳಿಸುವಲ್ಲಿ ಆಧುನಿಕ ಮಹಿಳೆಯ ಪಾತ್ರ ಅತ್ಯಂತ ಪ್ರಮುಖವಾದುದು.
ಆರೋಗ್ಯ ಸಮಸ್ಯೆಯು ಮಹಿಳೆಗೆ ಕುಟುಂಬದಲ್ಲಿ ಯಾರಿಗಾದರೂ ಸಂಭವಿಸಿದಲ್ಲಿ ಅಂತರ್ಜಾಲವನ್ನು ಜಾಲಾಡಿ ಅದು ಹೇಗೆ ಬಂದಿರಬಹುದು. ವೈದ್ಯಲೋಕ ಅದಕ್ಕೆ ಏನು ಪರಿಹಾರ ಸೂಚಿಸಿದೆ. ಸಾಂಪ್ರದಾಯಕವಾದ ಔಷಧಗಳೊಂದಿಗೆ, ಹಿರಿಯರ ಜ್ಞಾನದ ಅನುಭವಗಳಿಗೆ ತುಲನೆ ಮಾಡಿ ತ್ವರಿತ ನಿರ್ಧಾರಗಳನ್ನು ಪರಿಹಾರವನ್ನು ಕಂಡುಕೊಳ್ಳಬಲ್ಲವಳಾಗಿರುವುದು ಅವಳಿಗೆ ಮಾಹಿತಿ ತಂತ್ರಜ್ಞಾನ ಕೊಟ್ಟ ವರವಾಗಿದೆ. ಯಾವ ಸಮಸ್ಯೆಗಳಿಗೆ ಯಾರನ್ನು ಸಂಪರ್ಕಿಸಬೇಕು ಎಂಬ ತತಕ್ಷಣದ ಮಾಹಿತಿಯಿಂದಾಗಿ, ಹೃದಯಘಾತವಾದ ಸಂದರ್ಭಗಳಲ್ಲಿ ವ್ಯಕ್ತಿಯನ್ನು ಸತತವಾಗಿ ಕೆಮ್ಮುತ್ತಿರುವಂತೆ ಮಾಡಿ ಉಸಿರನ್ನು ದೀರ್ಘವಾಗಿ ತೆಗೆದುಕೊಳ್ಳುವಂತೆ ಮಾಡುತ್ತಾ ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ಮಾಹಿತಿಗಳನ್ನು ದೂರವಾಣಿಗಳಿಂದ ಸಾಧ್ಯವಾಗಿದೆ.
 
ಲೇಖಕರು: -ಮಮತ ಎಸ್. ಹೆಗ್ಡೆ,
ಬರಹಗಾರ್ತಿ, ವಿನಾಯಕ ನಗರ, ಶಿವಮೊಗ್ಗ
Previous Post

ಪ್ಯಾರಾಚೂಟ್‌ನಲ್ಲಿ ಬರಲಿದ್ದಾರೆ ಉಗ್ರರು: ಗುಪ್ತಚರ ಇಲಾಖೆ ಮಾಹಿತಿ

Next Post

ಯಡಿಯೂರಪ್ಪ-ಈಶ್ವರಪ್ಪರನ್ನು ಒಂದು ಮಾಡಿದ ರಾಮ್ ಲಾಲ್: ಬಿಎಸ್‌ವೈ ಮನೆಯಲ್ಲಿ ತಿಂಡಿ: ಕೆಎಸ್‌ಈ ಭಾಗಿ

kalpa

kalpa

Next Post

ಯಡಿಯೂರಪ್ಪ-ಈಶ್ವರಪ್ಪರನ್ನು ಒಂದು ಮಾಡಿದ ರಾಮ್ ಲಾಲ್: ಬಿಎಸ್‌ವೈ ಮನೆಯಲ್ಲಿ ತಿಂಡಿ: ಕೆಎಸ್‌ಈ ಭಾಗಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

Representational File Photo Only

ಎಸ್’ಎಸ್’ಎಲ್’ಸಿ ಪರೀಕ್ಷಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಕೆಎಸ್’ಆರ್’ಟಿಸಿ: ಏನದು?

March 22, 2023

ಶಿವಮೊಗ್ಗದ ಇಂದಿನ ಸುದ್ಧಿಗಳು: ಶಿಕಾರಿಪುರದಲ್ಲಿ ಚುನಾವಣಾ ಕಣಕ್ಕಿಳಿಯಲಿದ್ದಾರಾ ಯುವ ವಕೀಲ ಚಂದ್ರಕಾಂತ್ ಪಾಟೀಲ್?

March 22, 2023

ಬ್ಯಾಂಕ್ ಆಫ್ ಬರೋಡ ನೂತನ ಪ್ರಾದೇಶಿಕ ಕಚೇರಿಗೆ ಚಾಲನೆ

March 21, 2023

ಸಾವನ್ನು ಸಾರ್ಥಕಗೊಳಿಸಲು ಅಂಗ ದಾನದ ಮಹತ್ವ ಅರಿಯಿರಿ: ಡಾ. ಧನಂಜಯ ಸರ್ಜಿ ಕರೆ

March 21, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Representational File Photo Only

ಎಸ್’ಎಸ್’ಎಲ್’ಸಿ ಪರೀಕ್ಷಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಕೆಎಸ್’ಆರ್’ಟಿಸಿ: ಏನದು?

March 22, 2023

ಶಿವಮೊಗ್ಗದ ಇಂದಿನ ಸುದ್ಧಿಗಳು: ಶಿಕಾರಿಪುರದಲ್ಲಿ ಚುನಾವಣಾ ಕಣಕ್ಕಿಳಿಯಲಿದ್ದಾರಾ ಯುವ ವಕೀಲ ಚಂದ್ರಕಾಂತ್ ಪಾಟೀಲ್?

March 22, 2023

ಬ್ಯಾಂಕ್ ಆಫ್ ಬರೋಡ ನೂತನ ಪ್ರಾದೇಶಿಕ ಕಚೇರಿಗೆ ಚಾಲನೆ

March 21, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!