Sunday, September 24, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ರಾಷ್ಟ್ರೀಯ

ಆರೋಗ್ಯಕ್ಕೆ ಮಾರಕವಾಗಿ ಬರುತ್ತಿದೆ ಚೈನೀಸ್ ಮೊಟ್ಟೆ!: ಆತಂಕದಲ್ಲಿ ಆರೋಗ್ಯ ಇಲಾಖೆ

October 3, 2016
in ರಾಷ್ಟ್ರೀಯ
0 0
0
Share on facebookShare on TwitterWhatsapp
Read - 2 minutes

 

ಕಣ್ಣೂರು, ಅ.3: ಎಲ್ಲಾ ಉದ್ಯಮಗಳಲ್ಲಿಯೂ ನಕಲಿಯನ್ನಾಗಿಸುವ ಕುಖ್ಯಾತಿ ಹೊಂದಿರುವ ಚೀನಾ , ಇದೀಗ ಮೊಟ್ಟೆಯಲ್ಲೂ ಅಂತಹದ್ದೇ ಪ್ರಯೋಗ ಮಾಡಿರುವುದು ಆತಂಕಕ್ಕೀಡುಮಾಡಿದೆ. ನಕಲಿ ಮಾಲುಗಳನ್ನು ದೇಶದ ಮಾರುಕಟ್ಟೆಗೆ ನುಗ್ಗಿಸಿ ಭಾರತದ ಆರ್ಥಿಕತೆಯನ್ನು ಹಾಳುಗೆಡವುದರ ಜೊತೆಗೆ , ಆರೋಗ್ಯಕ್ಕೆ ಮಾರಕವಾದ ಆಹಾರ ವಸ್ತುಗಳನ್ನು ಭಾರತದಲ್ಲಿಳಿಸಿ ಈಗ ತಲ್ಲಣ ಮೂಡಿಸಿದೆ.

ಜನರ ಆರೋಗ್ಯಕ್ಕೆ ಮಾರಕವಾಗುವ ರೀತಿಯಲ್ಲಿ ನಕಲಿ ಚೈನೀಸ್ ಮೊಟ್ಟೆಗಳ ಹಾವಳಿ ಕೇರಳದಲ್ಲಿ  ಆರಂಭಗೊಂಡಿದೆ. ಗಂಭೀರ ಅನಾರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿ ಈ ನಕಲಿ ಮೊಟ್ಟೆಗಳನ್ನು ತಯಾರಿಸಲಾಗುತ್ತದೆ. ಇದರ ಮೂಲವನ್ನು ಪತ್ತೆ ಹಚ್ಚುವುದಕ್ಕೋ ಇಂತಹ ಮೊಟ್ಟೆಗಳನ್ನು ಪತ್ತೆ ಹಚ್ಚುವುದಕ್ಕೋ ಸಾಧ್ಯವಾಗದೆ ಆರೋಗ್ಯ ಇಲಾಖೆಯು ಚಡಪಡಿಸಲಾರಂಭಿಸಿದೆ.

ಕಳೆದ ಕೆಲವು ತಿಂಗಳುಗಳ ಹಿಂದೆಕಣ್ಣೂರು ಜಿಲ್ಲೆಯಲ್ಲಿಯೇ `ನಕಲಿಅಕ್ಕಿ’ಯನ್ನು  ಪತ್ತೆ ಹಚ್ಚಲಾಗಿತ್ತು. ಇದನ್ನು ಬೇಯಿಸಿದಾಗ ಕರಗಿ ಪ್ಲಾಸ್ಟಿಕ್ ರೂಪ ಪಡೆದಾಗಲೇ ಇದು ನಕಲಿ ಅಕ್ಕಿಯೆಂದು ಪತ್ತೆ ಹಚ್ಚಲು ಸಾಧ್ಯವಾದದ್ದು! ಇದೀಗ ನಕಲಿ ಮೊಟ್ಟೆಗಳ ಹಾವಳಿಯು ಇತರ ಜಿಲ್ಲೆಗಳಿಗೂ ಹರಡಿರುವುದಾಗಿ ಬಲವಾದ ಶಂಕೆ ಮೂಡಿ ಬಂದಿದೆ.

ಚೈನೀಸ್ ಮೊಟ್ಟೆ ಎಂದು ಕರೆಯಲ್ಪಡುವ ಈ ಮೊಟ್ಟೆಯನ್ನು ಇನ್ನಿತರ ಕೆಲವು ದೇಶಗಳಲ್ಲಿಯೂ ಉತ್ಪಾದಿಸುತ್ತಿರುವುದಾಗಿ ತಿಳಿದು ಬಂದಿದೆ. ಕಳೆದ ಭಾನುವಾರ ಕಣ್ಣೂರು ಕರಿವೆಳ್ಳೂರು ನಿವಾಸಿ ಕೂತೂರು ರಾಮಚಂದ್ರನ್ ಎಂಬವರಿಗೆ ಲಭಿಸಿದ ಮೊಟ್ಟೆಗಳೆಲ್ಲಾ ಇದೇ ವರ್ಗಕ್ಕೆ ಸೇರಿದವುಗಳಾಗಿದ್ದವು. ತಮಿಳುನಾಡಿನ ಮೂಲಕ ಕೇರಳಕ್ಕೆ ಈ ಮೊಟ್ಟೆಗಳು ಹೆಚ್ಚಾಗಿ ಸಾಗಾಟವಾಗುತ್ತಿವೆ ಎನ್ನಲಾಗಿದೆ. ಇದಕ್ಕೆ ಸಾಮಾನ್ಯ ನಾಟಿಕೋಳಿ ಮೊಟ್ಟೆಯ ಬೆಲೆಯನ್ನೇ ನಿಗದಿಪಡಿಸಲಾಗಿದೆ. ವ್ಯಾಪಾರಿಗಳು ಇದು ನಕಲಿಮೊಟ್ಟೆಯೆಂದು ತಿಳಿಯದೆಯೇ ಖರೀದಿಸಿ ಮೋಸ ಹೋಗುತ್ತಿರುವುದಾಗಿ ತಿಳಿದು ಬಂದಿದೆ.

ಚೈನೀಸ್ ಕೋಳಿಮೊಟ್ಟೆಯ ಕುರಿತಾಗಿ ಈ ಹಿಂದೆಯೇ ಸಾಮಾಜಿಕ ಅಂತರ್ಜಾಲಗಳಲ್ಲಿ ವಿವರಣೆ ಬಂದಿತ್ತು. ಮೊಟ್ಟೆಯೊಳಗಿನ ಲೋಳೆೆ(ಬಿಳಿ ದ್ರವ)ಗಾಗಿ ಸ್ಟಾರ್ಚ್, ರೆಸಿನ್, ಸೋಡಿಯಂ ಆಲ್ಗಿನೇಟ್ ಉಪಯೋಗಿಸಲಾಗುತ್ತದೆ. ಇದನ್ನು ದ್ರವರೂಪಕ್ಕೆ ತರಲು ಒಂದು ರೀತಿಯ ಆಲ್ಗಾದ ಸತುವನ್ನು ಉಪಯೋಗಿಸಲಾಗುತ್ತಿದೆ. ಇನ್ನು ಮೊಟ್ಟೆಯೊಳಗಿನ ಹಳದಿಗಾಗಿ ಅರ್ಗಿಕ್ ಆ್ಯಸಿಡ್, ಪೊಟಾಶಿಯಂ ಆಲಂ, ಜಲಾಟಿನ್, ಕ್ಯಾಲ್ಸಿಯಂಕ್ಲೋರೈಡ್, ಬೆನ್ಸಿಯೋಸಿಕ್ ಆ್ಯಸಿಡ್, ಕೃತಕ ಬಣ್ಣ ಮೊದಲಾದವುಗಳನ್ನು ಉಪಯೋಗಿಸಲಾಗುತ್ತಿದೆ. ಮೊಟ್ಟೆಯ ಚಿಪ್ಪನ್ನು ತಯಾರಿಸಲು ಕ್ಯಾಲ್ಸಿಯಂ ಕಾರ್ಬೋನೇಟ್, ಜಿಪ್ಲಂ, ಪೆಟ್ರೋಲಿಯಂ ಮಯಣ ಸೇರಿದಂತೆ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಲಾಗುತ್ತಿದೆ. ಇದು ನಿಜವಾದ ಮೊಟ್ಟೆಯೆಂದು ನಂಬಿಸುವುದಕ್ಕಾಗಿ ಈ ರೀತಿಯಾಗಿ ಕೃತಕವಾಗಿ ನಿರ್ಮಿಸಿದ ಮೊಟ್ಟೆಗಳ ಮೇಲೆ ಕೊಳಿಯ ತ್ಯಾಜ್ಯಗಳನ್ನೂ ಸಿಂಪಡಿಸಲಾಗುತ್ತದೆ. ಮೊಟ್ಟೆಗಳ ಚಿಪ್ಪುಗಳನ್ನು ನಿರ್ಮಿಸುವುದಕ್ಕಾಗಿ ಪ್ರತ್ಯೇಕ ಅಚ್ಚುಗಳನ್ನು ಉಪಯೋಗಿಸಲಾಗುತ್ತಿದೆ. ಇದನ್ನು ಎಷ್ಟೇ ಪರಿಶೋಸಿದರೂ ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಈ ಮೊಟ್ಟೆಗಳನ್ನು ನಿರ್ಮಿಸಲಾಗುತ್ತಿದೆ.

1990ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಈ ಕೃತಕ ಮೊಟ್ಟೆಯ ತಯಾರಿ ಆರಂಭಗೊಂಡಿತ್ತು. ಇದೀಗ ಸಾವಿರಾರು ಮಂದಿ ಗುಡಿಕೈಗಾರಿಕಾ ರೀತಿಯಲ್ಲಿ ಇಂತಹ ಮೊಟ್ಟೆಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ವ್ಯಕ್ತಿಯೋರ್ವ ದಿನವೊಂದರಲ್ಲಿ ಇಂತಹ 1500 ಮೊಟ್ಟೆಗಳನ್ನು ಉತ್ಪಾದಿಸುತ್ತಿರುವುದಾಗಿ ಚೀನಾದ ಸುದ್ದಿಮೂಲಗಳು ಬೊಟ್ಟು ಮಾಡುತ್ತಿವೆ.

ಈ ಮೊಟ್ಟೆಯನ್ನು ಒಡೆದು ದಿವಸಗಳು ಕಳೆದರೂ ಯಾವುದೇ ವಾಸನೆ ಉಂಟಾಗುವುದಿಲ್ಲ. ಇದಕ್ಕೆಇರುವೆಯಾಗಲೀ ನೊಣವಾಗಲೀ ಮುತ್ತಿಕೊಳ್ಳದು. ಮೊಟ್ಟೆಯ ಹಳದಿಗೆ ರಬ್ಬರ್ ಗುಣವಿರುವುದು. ಮೊಟ್ಟೆಯ ಚಿಪ್ಪನ್ನು ಒಡೆದರೂ ಮೊಟ್ಟೆಯೊಳಗಿನ ಭಾಗಗಳು ಒಡೆಯಲಾರವು. ಚಿಪ್ಪಿನ ಬಳಿಕ ಸೂಕ್ಷ್ಮವಾದ ಪ್ಲಾಸ್ಟಿಕ್ ಪದರುಇರುವುದರಿಂದಲೇ ಮೊಟ್ಟೆಯ ಚಿಪ್ಪೊಡೆದರೂ ಒಳಗಿನ ಭಾಗಗಳು ಚದುರದೆ ನಿಲ್ಲುತ್ತವೆ. ಇಂತಹ ಮೊಟ್ಟೆಗಳಿಗೆ ರುಚಿ, ಸುವಾಸನೆ ಇತರ ಮೊಟ್ಟೆಗಳಿಗಿಂತ ಕಡಿಮೆಯಾಗಿದೆ. ಇದನ್ನು ತಿನ್ನುವಾಗ ಚೂಯಿಂಗಂ ಜಗಿದ ಅನುಭವವಾಗುವುದು. ಹೊಟೇಲ್ ಗಳು ಫ್ರೈಡ್ ರೈಸ್, ಮೊಟ್ಟೆ ಪದಾರ್ಥದಲ್ಲಿ ಇವುಗಳನ್ನು ಉಪಯೋಗಿಸಿದರಂತೂ ಪತ್ತೆಹಚ್ಚಲೇ ಸಾಧ್ಯವಾಗದು. ಇಂತಹ ಮೊಟ್ಟೆಗಳಿಂದ ಕಿಡ್ನಿ , ಕರುಳು ಮತ್ತು ಹೊಟ್ಟೆಯನ್ನು ಬಾಸುವ ಗಂಭೀರ ರೋಗಗಳು ಉಂಟಾಗುವ ಸಾಧ್ಯತೆ ಇರುವುದಾಗಿ ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಭಯೋತ್ಪಾದಕ ಪಾಕಿಗೆ ಬೆಂಬಲ ನೀಡುವ ಚೀನಾ, ಈಗ ಇಂತಹ ಹುನ್ನಾರ ನಡೆಸುತ್ತಿರುವ ಬಗ್ಗೆ ಭಾರತೀಯರು ಎಚ್ಚೆತ್ತುಕೊಂಡು ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸಿ ದೇಶದ ಉತ್ಪನ್ನಗಳನ್ನೇ ಬಳಸಿ ತಮ್ಮಆರೋಗ್ಯ ಮತ್ತು ದೇಶದ ಆರ್ತಿಕ ಸ್ವಾಸ್ಥ್ಯವನ್ನು ರಕ್ಷಿಸಬೇಕಾಗಿದೆ.

Previous Post

ಬೆಳಗಾವಿಯಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯ ಸಂಪೂರ್ಣ ಸುದ್ಧಿ

Next Post

ಸರಣಿ ಹಂತಕ ಉಮೇಶ್ ರೆಡ್ಡಿಗೆ ಮರಣದಂಡನೆ ಖಾಯಂ

kalpa

kalpa

Next Post

ಸರಣಿ ಹಂತಕ ಉಮೇಶ್ ರೆಡ್ಡಿಗೆ ಮರಣದಂಡನೆ ಖಾಯಂ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಗಣೇಶೋತ್ಸವ ಪ್ರಯುಕ್ತ: ಸೆ.23-30 ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

September 23, 2023

ದೇಶದ ಸಮಗ್ರ ಅಭಿವೃದ್ಧಿಗೆ ಯುವಕರ ಕೊಡುಗೆ ಅಗತ್ಯ: ಡಾ.ರಮಾನಂದ ಗಾರ್ಗೆ

September 23, 2023

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಐತಿಹಾಸಿಕ ತೀರ್ಮಾನ: ಸಂಸದ ರಾಘವೇಂದ್ರ

September 23, 2023
Image Curtesy Internet

ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ಮಂಡ್ಯ-ಮದ್ದೂರು ಬಂದ್: ಹೇಗಿದೆ ಪ್ರತಿಕ್ರಿಯೆ

September 23, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಗಣೇಶೋತ್ಸವ ಪ್ರಯುಕ್ತ: ಸೆ.23-30 ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

September 23, 2023

ದೇಶದ ಸಮಗ್ರ ಅಭಿವೃದ್ಧಿಗೆ ಯುವಕರ ಕೊಡುಗೆ ಅಗತ್ಯ: ಡಾ.ರಮಾನಂದ ಗಾರ್ಗೆ

September 23, 2023

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಐತಿಹಾಸಿಕ ತೀರ್ಮಾನ: ಸಂಸದ ರಾಘವೇಂದ್ರ

September 23, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!