ಮೈಸೂರು, ಸೆ.1: ದೊಡ್ಡಕೆರೆ ಮೈದಾನ ವಿವಾದಕ್ಕೆ ಸಂಬಂಧ ಹೈಕೋರ್ಟ್ ಆದೇಶವಿದ್ದರೂ ಈವರೆಗೆ ಪಾಲಿಕೆ ಖಾತೆ ಮಾಡಿಸಿಕೊಟ್ಟಿಲ್ಲ.ಕೋರ್ಟ್ ಅದೇಶದಂತೆ ದೊಡ್ಡಕೆರೆ ಮೈದಾನವನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಜಮಾತೆ ಪ್ರಮೋದಾ ದೇವಿ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಪ್ರಮೋದದೇವಿ, 2009ರಲ್ಲೇ ಹೈಕೋರ್ಟ್ ನಮ್ಮ ಪರವಾಗಿ ಆದೇಶ ನೀಡಿತ್ತು. ಏಳು ವರ್ಷವಾದರೂ . ಕೋರ್ಟ್ ಆದೇಶವಿದ್ದರೂ ನಮ್ಮ ಹೆಸರಿಗೆ ಖಾತೆ ಮಾಡಲಾಗಿಲ್ಲ. ಈ ವಿಚಾರದಲ್ಲಿ ನಾನು ತಾಳ್ಮೆಯಿಂದ ಕಾಯುತ್ತಿದ್ದೀವಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯದುವೀರ್ ಅವರು ರಾಜಕೀಯ ಪ್ರವೇಶ ಕುರಿತು ಮಾತನಾಡಿದ ಪ್ರಮೋದ ದೇವಿ ಅವರು, ಇದು ಯದುವೀರ್ ವೈಯಕ್ತಿಕ ವಿಚಾರ. ರಾಜಕೀಯ ಸಂಬಂದ ನಾನು ಯದುವೀರ್ ಗೆ ಸಲಹೆ ನೀಡಲ್ಲ ಎಂದು ತಿಳಿಸಿದರು.
News by: ಪುನೀತ್ ಜಿ. ಕೂಡ್ಲೂರು















