ಬೆಂಗಳೂರು, ಅ.17: ಆರ್ ಎಸ್ ಎಸ್ ಸ್ವಯಂ ಸೇವಕ ಆರ್. ರುದ್ರೇಶ್ ಅವರ ಹತ್ಯೆ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಜನಜಾಗೃತಿ ವೇದಿಕೆ, ಹಿಂದೂ ಮುಖಂಡರನ್ನು ರಕ್ಷಿಸುವಲ್ಲಿ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದೆ.
ನಿನ್ನೆ ಸಂಘದ ಸ್ವಯಂಸೇವಕ ಆರ್. ರುದ್ರೇಶ್ ಹತ್ಯೆಗೆ ಸರ್ಕಾರ ರಾಜ್ಯದಲ್ಲಿ ಜಿಹಾದಿ ಮಾನಸಿಕತೆಯ ಮತಾಂಧರಿಗೆ ಕರ್ನಾಟಕವನ್ನು ಇಸ್ಲಾಮಿಕ್ ರಾಜ್ಯವನ್ನಾಗಿಸಲು ಪೋಷಿತ ವಾತಾವರಣ ಕಲ್ಪಿಸುತ್ತಿರುವುದೇ ಕಾರಣವಾಗಿದೆ ಎಂಬ ಸಂದೇಹ ಮೂಡುತ್ತಿದೆ. ಈ ಹಿಂದೆಯೂ ಜಿಹಾದಿಗಳು ಮೈಸೂರಿನ ಕೆ. ರಾಜು,ಮೂಡುಬಿದ್ರೆಯ ಪ್ರಶಾಂತ ಪೂಜಾರಿ, ಕುಶಾಲನಗರದ ಪ್ರವೀಣ ಪೂಜಾರಿ ಮತ್ತು ಕೊಡಗಿನ ಕುಟ್ಟಪ್ಪನವರನ್ನು ಇದೇ ಮಾದರಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದರು. ಈ ಘಟನೆಗಳು ಮಾಸುವ ಮೊದಲೇ ಪುನಃ ಹಿಂದೂ ನಾಯಕ ರುದ್ರೇಶರ ಹತ್ಯೆ ನಡೆದಿರುವುದು ರಾಜ್ಯ ಸರಕಾರದ ಹಿಂದೂವಿರೋಧಿ ಧೋರಣೆ ಮತ್ತು ಅಲ್ಪಸಂಖ್ಯಾತರ ಓಲೈಕೆ,ಮತಾಂಧ ಜಿಹಾದಿಗಳ ಬಗ್ಗೆ ಮೃದುಧೋರಣೆಯೇ ಮುಖ್ಯಕಾರಣವಾಗಿದೆ ಎಂದು ಸಮಿತಿ ಕಿಡಿ ಕಾರಿದೆ.
ಕೇರಳ ಮತ್ತು ತಮಿಳುನಾಡಿನಲ್ಲಿ ನೂರಕ್ಕೂ ಅಧಿಕ ಹಿಂದೂ ನಾಯಕರನ್ನು ಮತಾಂಧ ಜಿಹಾದಿಗಳು ಇದೇ ಮಾದರಿಯಲ್ಲಿ ಹತ್ಯೆ ಮಾಡಿ ಹಿಂದೂ ಚಳುವಳಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಅದೇ ಪ್ರಯತ್ನ ಕರ್ನಾಟಕ ರಾಜ್ಯದಲ್ಲಿಯೂ ಮತಾಂಧ ಜಿಹಾದಿಗಳು ಮುಂದುವರೆಸಿದ್ದಾರೆ, ಎಂಬ ಸಂದೇಹ ಮೂಡುತ್ತಿದೆ. ಇದಕ್ಕೆ ರಾಜ್ಯ ಸರ್ಕಾರದ ಪರೋಕ್ಷ ಬೆಂಬಲವೇ ಕಾರಣವಾಗಿದೆ ಎಂದು ಖಂಡಿಸಿದೆ.
ಮತಾಂಧ ಜಿಹಾದಿಗಳು ಹಿಂದೂ ನಾಯಕರನ್ನು ಕಗ್ಗೊಲೆಯ ಮೂಲಕ ರಾಷ್ಟ್ರ ಮತ್ತು ಧರ್ಮ ಕಾರ್ಯ ಮಾಡುವ ಹಿಂದೂ ಸಮಾಜದ ಮನಸ್ಸಿನಲ್ಲಿ ಭಯ ಮೂಡಿಸಿ ಕಾಶ್ಮೀರಿ ಪಂಡಿತರಂತೆ, ಕರ್ನಾಟಕದ ಹಿಂದೂ ಸಮಾಜವನ್ನು ಬಲಿಪಶು ಮಾಡುವ ಹುನ್ನಾರ ನಡೆಸಿದ್ದಾರೆ. ಇದು ದೇಶದ ಭದ್ರತೆ ಮತ್ತು ರಾಜ್ಯದ ಹಿಂದೂಗಳ ಸುರಕ್ಷತೆ ದೃಷ್ಟಿಯಿಂದ ಅತ್ಯಂತ ಮಹತ್ವದ ಸಮಸ್ಯೆಯಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಹಿಂದೂ ನಾಯಕರಿಗೆ ರಕ್ಷಣೆ ನೀಡುವಲ್ಲಿ ವಿಫಲವಾದ ಮತ್ತು ಜಿಹಾದಿಗಳಿಗೆ ಶಿಕ್ಷಿಸದೇ ಅವರಿಗೂ ಕುಮ್ಮಕ್ಕು ನೀಡುವ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿ ಹಿಂದೂಗಳ ರಕ್ಷಣೆಯನ್ನು ಮಾಡಬೇಕೆಂದು ಸಮಿತಿಯು ಆಗ್ರಹಿಸುತ್ತದೆ. ಅಲ್ಲದೇ ಇದು ವರೆಗೆ ಹಿಂದೂ ನಾಯಕರ ಹತ್ಯೆ ಪ್ರಕರಣವನ್ನು ಗಮನಿಸಿ ಆಡಳಿತವು ಹಿಂದೂ ನಾಯಕರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಸಮಿತಿಯ ಸಮನ್ವಯಕಾರ ಗುರುಪ್ರಸಾದ್ ಆಗ್ರಹಿಸಿದ್ದಾರೆ.
Discussion about this post