Read - < 1 minute
ಬೆಂಗಳೂರು, ಸೆ.3: ರಾಜ್ಯದ ವಿವಿಧ ನಿಗಮ,ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವಾಗ ಶಾಸಕರಿಗೆ ಪ್ರಾತಿನಿಧ್ಯ ನೀಡುವುದನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರೋಧಿಸಿದ ಹಿನ್ನೆಲೆಯಲ್ಲಿ ನಿಗಮ, ಮಂಡಳಿಗಳ ನೇಮಕಾತಿ ಪ್ರಕ್ರಿಯೆ ಮುಂದಕ್ಕೆ ಹೋಗಿದೆ.
ಶಾಸಕರಿಗೆ ನಿಗಮ,ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವುದು ಬೇಡ. ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಯತ್ನಿಸಲಿ ಎಂದು ರಾಹುಲ್ ನೇರವಾಗಿ ಹೇಳಿದ್ದು ಇದರಿಂದಾಗಿ ಇಂದು ಸಂಜೆ ಸಿಎಂ ಸಿದ್ಧರಾಮಯ್ಯ ಮತ್ತಿತರರು ನಡೆಸಿದ ಮಾತುಕತೆ ಯಾವುದೇ ಫಲಶೃತಿ ಇಲ್ಲದೆ ಅಂತ್ಯಗೊಂಡಿದೆ
ಹೀಗಾಗಿ ಸೆಪ್ಟೆಂಬರ್ 21 ರ ನಂತರ ನಿಗಮ,ಮಂಡಳಿಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೊಸ ಮಾನದಂಡಗಳನ್ನು ರೂಪಿಸಿಕೊಂಡು ಸಿದ್ದರಾಮಯ್ಯ ಮತ್ತೆ ದಿಲ್ಲಿಗೆ ಹೋಗಲಿದ್ದಾರೆ.
ಸೆಪ್ಟೆಂಬರ್ 6 ರಿಂದ 21 ರವರೆಗೆ ರಾಹುಲ್ ಗಾಂಧಿ ಪ್ರವಾಸಕ್ಕೆ ತೆರಳುತ್ತಿದ್ದು ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತಿತರರು ನಿರುಪಾಯರಾಗಿ ರಾಜ್ಯಕ್ಕೆ ಹಿಂತಿರುಗುವಂತಾಗಿದೆ.
ಮುಖ್ಯಮಂತ್ರಿ ಗಳು ದೆಹಲಿಯಲ್ಲಿ ಇಂದು ಸುಪ್ರೀಂಕೋರ್ಟ್ ವಕೀಲ ನಾರಿಮನ್ ಅವರನ್ನು ಭೇಟಿಯಾಗಿ ಕಾವೇರಿ ನದಿ ನೀರಿನ ವಿವಾದ ಕುರಿತು ಚರ್ಚಿಸಿದರು. ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಜೊತೆಗಿದ್ದರು
Discussion about this post