Tuesday, July 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂತಾರಾಷ್ಟ್ರೀಯ

ಅಮೆರಿಕಾದ ಕೊಲಂಬಸ್‌ನಲ್ಲಿ ರಾಧಾ ಕೃಷ್ಣ ವಾಸುದೇವ ಮಹಾಯಜ್ಞ

September 16, 2016
in ಅಂತಾರಾಷ್ಟ್ರೀಯ
0 0
0
Share on facebookShare on TwitterWhatsapp
Read - 3 minutes
ಕೊಲಂಬಸ್: ಅಮೆರಿಕಾದ ಕೊಲಂಬಸ್ ನಗರದ ಭಾರತೀಯ ಹಿಂದೂ ದೇವಾಲಯದಲ್ಲಿ ನಾಲ್ಕು ದಿನಗಳ ಕಾಲ ಕಳೆದ ವಾರ ನಡೆದ ಶ್ರೀರಾಧಾ ಕೃಷ್ಣ ವಾಸುದೇವ ಮಹಾಯಜ್ಞ ಆಯೋಜನೆ ಮಾಡಲಾಗಿತ್ತು.
ವರದಿ: ಶಂಕರ್ ಅಜ್ಜಂಪುರ, ಒಮಾಹಾ, ಅಮೆರಿಕಾ
ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸದವಕಾಶ ನನ್ನದಾಗಿತ್ತು. ಇದು ಸುದರ್ಶನ ಹೋಮದ ಕ್ರಮವನ್ನೇ ಆಧರಿಸಿದ ಕಲಾಪವಾಗಿದ್ದರೂ ಇದನ್ನು ಆಯೋಜಿಸಿದ ಭಕ್ತಾದಿಗಳಲ್ಲಿ ಹೆಚ್ಚಿನವರು ಗುಜರಾತಿನವರಾದ್ದರಿಂದ ಮೇಲ್ಕಂಡಂತೆ ಹೆಸರಿಸಲಾಗಿತು.್ತ
ದೇವನೊಬ್ಬ ನಾಮ ಹಲವು ಎಂಬ ಪ್ರಚಲಿತ ನುಡಿಗಟ್ಟಿನ ಮುಂದುವರೆದ ಭಾಗವಾಗಿ ಕಾಣುವ ದಕ್ಷಿಣೋತ್ತರ ರಾಜ್ಯಗಳ, ಪೂರ್ವ ಪಶ್ಚಿಮ ರಾಜ್ಯಗಳ ಪೂಜಾವಿಧಿಗಳಲ್ಲೂ ವೈವಿಧ್ಯತೆ ಕಾಣಬರುತ್ತದೆ. ಭಾರತದಲ್ಲಿರುವಾಗ ಇಂಥ ಅವಕಾಶ ಕಾಣಸಿಕ್ಕದು ಮತ್ತು ಅದು ಅವಶ್ಯವೂ ಅಲ್ಲ.
ಭಾರತದ ಪ್ರತಿ ರಾಜ್ಯದಲ್ಲಿ ಇರುವ ಪೂಜಾ ಪರಂಪರೆಗಳು ಆಯಾ ರಾಜ್ಯದ ವಿಶೇಷದ ಭಾಗವಾಗಿ ಮಾತ್ರ ಪರಿಗಣಿತವಾಗುತ್ತದೆಯೇ ವಿನಾ, ಅದನ್ನೊಂದು ಸಂಕಲಿತ ರೂಪದಲ್ಲಿ ನೋಡಲು ದೊರೆಯುವುದು ಅಪರೂಪ. ಈ ಕಾರಣಗಳಿಂದಾಗಿ ಇಲ್ಲಿ ನಡೆದ ಕಾರ್ಯಕ್ರಮವು ಹಿಂದೂಸ್ತಾನಿ, ಕರ್ನಾಟಕ ಸಂಗೀತಗಳ ಜುಗಲ್ ಬಂದಿ ಕಾರ್ಯಕ್ರಮದಂತೆ ಇತ್ತು.  ಏಕೆಂದರೆ ಭಾರತದ ಎಲ್ಲ ರಾಜ್ಯಗಳ ನಿವಾಸಿಗಳು ನೆಲೆಯಾಗಿರುವ ಇಂಥ ಎಡೆಗಳಲ್ಲಿ, ಆಯಾ ರಾಜ್ಯಗಳಲ್ಲಿ ಪ್ರಚಲಿತವಿರುವ ಆಚರಣೆಯ ವಿಧಾನಗಳನ್ನು ಅನುಸರಿಸಬೇಕಾದುದು ಅನಿವಾರ್ಯವಾಗುತ್ತದೆ. ಅಂತೆಯೇ ದೈವಸನ್ನಿಧಿಗಳು, ಪೂಜಾ ವ್ಯವಸ್ಥೆ ಕೂಡ. ಕೊಲಂಬಸ್‌ನ ಭಾರತೀಯ ಹಿಂದೂ ದೇವಾಲಯದಲ್ಲಿ ಗಣಪತಿ, ಶಿವ, ಅಯ್ಯಪ್ಪ, ವೆಂಕಟೇಶ್ವರ, ವೈಷ್ಣೋದೇವೀ, ಸುಭದ್ರಾ, ಬಲಭಧ್ರ ಮತ್ತು ಜಗನ್ನಾಥ, ಶ್ರೀರಾಮ ಮುಂತಾಗಿ ಪ್ರತ್ಯೇಕ ಕೋಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದೆ.
ಪ್ರತಿ ವಾರವೂ ಆಯಾ ದೇವತೆಗಳನ್ನು ಉದ್ದೇಶಿಸಿ, ಒಂದೊಂದು ದಿನ ವಿಶೇಷ ಪೂಜೆಗಳು ಜರುಗುತ್ತವೆ. ಪ್ರತಿ ವರ್ಷವೂ ನಾಲ್ಕಾರು ಉತ್ಸವ, ಯಜ್ಞಗಳನ್ನು ಆಚರಿಸುವ ಪದ್ಧತಿಯಂತೆ ನಡೆದ ಈ ಹವನದಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಪುರೋಹಿತರು, ಋತ್ವಿಜರು ಪಾಲ್ಗೊಂಡಿದ್ದರು. ಉತ್ತರ ಭಾರತದಲ್ಲಿ ಮಂತ್ರಗಳನ್ನು ಪಠಿಸುವ ಪದ್ಧತಿಯು ದಕ್ಷಿಣಕ್ಕಿಂತ ಭಿನ್ನವಾಗಿರುತ್ತದೆ. ಆದರೆ ಮಂತ್ರಗಳು ಮಾತ್ರ ಒಂದೇ. ನಾಲ್ಕು ವೇದಗಳಲ್ಲಿನ ಪೂಜಾರಾಧನೆಯ ಮಂತ್ರಗಳನ್ನು ಆರಿಸಿಕೊಂಡು, ಅವುಗಳನ್ನು ಸೂಕ್ತವಾಗಿ ಸಂಯೋಜಿಸಿ, ನಡೆಸಿದ ಪೂಜಾ ಕ್ರಮವನ್ನು, ಪೌರೋಹಿತ್ಯದ ಪರಿಚಯವುಳ್ಳವರು ಮಾತ್ರವೇ ಆಸ್ವಾದಿಸುವಂಥ ವಾತಾವರಣ ಎಲ್ಲೆಡೆಯಲ್ಲೂ ಇರುವುದು ಸಾಮಾನ್ಯ.
ವಿದೇಶದಲ್ಲಿ ನೆಲೆಸಿರುವ ಕಾರಣಕ್ಕೆ, ಭಾರತೀಯ ಸಂಸ್ಕೃತಿಯ ಬೇರುಗಳು ಕಡಿತವಾಗಬಾರದೆಂಬ ಭಾವ, ಭಾರತಕ್ಕಿಂತ ವಿದೇಶೀ ನೆಲದಲ್ಲಿ ಬಾಧಿಸುವುದು ಸ್ವಾಭಾವಿಕವೇ ಸರಿ. ಅದೇ ರೀತಿ, ಇದನ್ನು ಸರಿತೂಗಿಸುವಂತೆ ಇತ್ತೀಚಿನ ದಿನಗಳಲ್ಲಿ  ಕಂಡುಬರುತ್ತಿರುವ ಉತ್ತಮ ಬೆಳವಣಿಗೆಯೆಂದರೆ, ತಾವು ಮಾಡುತ್ತಿರುವ ಕಲಾಪದ ವಿವರಗಳನ್ನು ಕಾರ್ಯಕ್ರಮದ ನಡುವೆಯೇ ನೀಡುವಂಥ ವ್ಯವಸ್ಥೆ ಇಲ್ಲಿತ್ತು. ಎಂಟು ಹವನ ಕುಂಡಗಳು ಹಾಗೂ ಒಂದು ಪ್ರಧಾನ ಕುಂಡಗಳಲ್ಲಿ ನಡೆಸಲಾದ ಈ ಕಾರ್ಯಕ್ರಮದ ಆಚಾರ್ಯತ್ವವನ್ನು ವಹಿಸಿದ್ದ ಶ್ರೀಪ್ರಕಾಶ ಚತುರ್ವೇದಿಯವರು ಏಕಕಾಲದಲ್ಲಿ ಎಲ್ಲ ಉಪಕುಂಡಗಳ ಆಚಾರ್ಯರಿಗೆ ಮಾರ್ಗದರ್ಶನ ಮಾಡಿದರು.
ಹೆಸರಿಗೆ ಮಾತ್ರವೇ ಚತುರ್ವೇದಿಯಾಗಿರದ ಅವರು ಸಂಸ್ಕೃತ, ಹಿಂದಿ ಮತ್ತು ಇಂಗ್ಲೀಷಿನಲ್ಲಿ ನೀಡುತ್ತಿದ ಸರಳ ವಿವರಣೆಗಳು  ಜನಸಾಮಾನ್ಯರಿಗೂ ತಲುಪುವಂತಿತ್ತು. ಭಾರತದ ವಿವಿಧ ನಗರಗಳಿಂದ ಬಂದಿದ್ದ, ಇಲ್ಲಿನ ನಿವಾಸಿಗಳ ತಂದೆ-ತಾಯಿಯರು, ಬಂಧುಗಳಿಗೆ ಇದೊಂದು ಅಪೂರ್ವ ಅವಕಾಶ ಎನ್ನಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಪೂಜಾ ಕಾರ್ಯಕ್ರಮವನ್ನು ರಂಜನೀಯವಾಗಿಸಲು, ಹೋಮಾದಿಗಳ ನಡುವಣ ಅಂತರದಲ್ಲಿ ಉದ್ದಿಷ್ಟ ದೇವತೆಗಳ ಬಗ್ಗೆ ಲಘು ಉಪನ್ಯಾಸ, ಡೋಲಕ್ ಸಹಿತ ಭಜನೆಗಳನ್ನು ಸೇರಿಸಲಾಗಿತ್ತು.
ಪ್ರತಿದಿನದ ಪ್ರಸಾದಕ್ಕೆಂದು ಸೇವಾವ್ರತಿಗಳು ತಾವಾಗಿಯೇ ತಮ್ಮಿಂದಾಗುವಷ್ಟು ಕೆಲಸಗಳನ್ನು ನಿರ್ವಹಿಸುತ್ತಿದ್ದರು. ತರಕಾರಿ ಹೆಚ್ಚುವುದು, ಬಡಿಸುವುದು, ಆಹಾರ ತಯಾರಿಸುವುದು ಮುಂತಾದ ಚಟುವಟಿಕೆಗಳಲ್ಲಿ ಮಡಿ, ಮೈಲಿಗೆಯ ಉಸಾಬರಿಯಿಲ್ಲದೇ, ಜಾತಿ ಭೇದಗಳ ವ್ಯತ್ಯಾಸವಿಲ್ಲದೇ,  ಸಾಧ್ಯವಿದ್ದಷ್ಟೂ ಭಾರತೀಯ ಉಡುಗೆ ತೊಡುಗೆಗಳನ್ನೇ ಧರಿಸಿದ ಜನರಿಗೆ ಭಕ್ತಿಯೇ ಪ್ರಧಾನವೆಂಬ ಭಾವನೆಯನ್ನು ಮೂಡಿಸಿರುವ ದೇವಾಲಯವು ತನ್ನ ನೈಜ ಅರ್ಥದಲ್ಲಿ ಕೆಲಸಮಾಡುತ್ತಿದೆ. ಪೂಜಾ ಪರಿಕರಗಳು, ಹೋಮ ದ್ರವ್ಯಗಳು, ಹವನ ಸಾಮಗ್ರಿಗಳು ಮುಂತಾಗಿ ಯಾವುದಕ್ಕೂ ಕೊರತೆಯಿಲ್ಲದಂತೆ, ಸುಂದರ ಪರಿಸರದಲ್ಲಿ ನಡೆದ ಈ ಪೂಜಾ ಕಾರ್ಯಕ್ರಮದಲ್ಲಿ ಉತ್ತರ, ದಕ್ಷಿಣ ಭಾರತೀಯರು ತಮ್ಮ ಸಂಸ್ಕೃತಿಗಳನ್ನು ಮುಖಾಮುಖಿಯಾಗಿಸಿಕೊಂಡು, ಅವುಗಳ ಸ್ವಾರಸ್ಯವನ್ನು ಅರ್ಥಮಾಡಿಕೊಳ್ಳುವಂತೆ ಆಯೋಜಿಸಿದ್ದ ಪರಿ ಮೆಚ್ಚುವಂತಿತ್ತು.
unnamed-1unnamed-2unnamed-5unnamed-8
ದೇವಾಲಯವನ್ನು ಹೊರಗಿನಿಂದ ನೋಡುವಾಗ, ನಮ್ಮ ಸಾಂಪ್ರದಾಯಿಕ ಮಂದಿರಗಳನ್ನು ನೋಡಿದಂತಾಗುವುದಿಲ್ಲ. ಏಕೆಂದರೆ ಇಟ್ಟಿಗೆಯ ಕೋಟೆಯಂತೆ ಕಾಣುವ ಈ ಕಟ್ಟಡಕ್ಕೆ ದೇವಾಲಯ ಗೋಪುರ, ವಿವಿಧ ಮೂರ್ತಿಗಳ ಅಲಂಕಾರಗಳಾವುವೂ ಇಲ್ಲ. ೨೨ ಎಕರೆ ವಿಸ್ತಾರದಲ್ಲಿ ಹರಡಿರುವ ಈ ಮಂದಿರವನ್ನು ಬರುವ ವರ್ಷಗಳಲ್ಲಿ ಪ್ರಮುಖ ಆಕರ್ಷಣೆಯಾಗುವಂತೆ ಮಾಡುವ ಯೋಜನೆಯಿದೆ ಎಂದು ದೇವಾಲಯ ಸಂಚಾಲಕ, ವೃತ್ತಿಯಿಂದ ಹೃದಯರೋಗ ತಜ್ಞರಾಗಿರುವ ಪಾಂಡೆ ತಿಳಿಸಿದರು. ಭಾರತೀಯರ, ಅದರಲ್ಲೂ ಹಿಂದೂ ಜನರ ಸಂಖ್ಯೆ ಪ್ರತಿವರ್ಷ ಅಮೆರಿಕಾದ ಎಲ್ಲ ರಾಜ್ಯಗಳಲ್ಲೂ ವೃದ್ಧಿಯಾಗುತ್ತಿರುವುದರಿಂದ, ಭಾರತೀಯ ಸಂಸ್ಕೃತಿಯ ಪ್ರಚಾರ-ಪ್ರಸಾರಗಳಿಗೆ ಒತ್ತು ನೀಡಿ, ಸಂಘಟಿತವಾಗಿ ಕೆಲಸಮಾಡುವ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಹಿಂದೂ ದೇಗುಲಗಳಿಗೆ ಇದೆ ಮತ್ತು ಅದನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದಾಗಿ ಪಾಂಡೆ ತಿಳಿಸಿದರು. unnamed-3unnamed-6
Previous Post

ಹಿಂದೂ ಮುಖಂಡರ ಹತ್ಯೆ ಸಂಚು ಪ್ರಕರಣ: ದೋಷಿಗಳಿಗೆ ಐದು ವರ್ಷ ಜೈಲು ಶಿಕ್ಷೆ

Next Post

ಏಜೆನ್ಸಿಗಳು ಆಧಾರ್ ಮಾಹಿತಿ ಬಹಿರಂಗ ಮಾಡುವಂತಿಲ್ಲ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಏಜೆನ್ಸಿಗಳು ಆಧಾರ್ ಮಾಹಿತಿ ಬಹಿರಂಗ ಮಾಡುವಂತಿಲ್ಲ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ರೈಲ್ವೆ ಪ್ರಯಾಣಿಕರೇ ಗಮನಿಸಿ! ರಿಸರ್ವೇಷನ್ ಟೈಮ್ ಕುರಿತಾಗಿ ಇಲಾಖೆ ಕೊಟ್ಟಿದೆ ಬಿಗ್ ಅಪ್ಡೇಟ್

July 1, 2025

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025

ಗಮನಿಸಿ | ಈ ಮೂರು ದಿನ ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್

June 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ರೈಲ್ವೆ ಪ್ರಯಾಣಿಕರೇ ಗಮನಿಸಿ! ರಿಸರ್ವೇಷನ್ ಟೈಮ್ ಕುರಿತಾಗಿ ಇಲಾಖೆ ಕೊಟ್ಟಿದೆ ಬಿಗ್ ಅಪ್ಡೇಟ್

July 1, 2025

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025

ಕೆಲವು ಹಿರಿಯರ ಜೊತೆ ಚರ್ಚಿಸಿ, ನಂತರ ಬಿಜೆಪಿ ಸೇರ್ಪಡೆಗೆ ನಿರ್ಧಾರ | ಕೆ.ಎಸ್. ಈಶ್ವರಪ್ಪ

June 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!