Read - < 1 minute
ವ್ಯಾಟಿಕನ್, ಸೆ.3: ಸಮಾಜ ಸೇವಕಿ, ಕ್ರೈಸ್ತ ಸನ್ಯಾಸಿನಿ ಮದರ್ ತೆರೇಸಾ ಅವರಿಗೆ ಭಾನುವಾರ ವ್ಯಾಟಿಕನ್ ಸಿಟಿಯಲ್ಲಿ ಸಂತ ಪದವಿ ಪ್ರದಾನ ಮಾಡಲಾಗುವುದು.
ತೆರೇಸಾ ನಿಧನಾನಂತರವೂ ಅವರ ಪಾವಡವನ್ನು ಗಮನಿಸಿ, ಸಂತ ಪದವಿ ನೀಡಲಾಗುತ್ತಿದೆ.
ತೆರೇಸಾ ಅವರು ಸಂತ ಪದವಿಗೇರಿದ ಮೂರನೇ ಭಾರತೀಯರಾಗಿದ್ದಾರೆ. ಸೆಪ್ಟಂಬರ್ 5 ರ ಅವರ ಜನ್ಮದಿನದ ಪೂರ್ವವಾಗಿ ಅವರ ಸೇವೆ, ಸಾರ್ಥಕತೆ ಹಾಗೂ ಪವಾಡವನ್ನು ಗುರುತಿಸಿ, ಪೋಪ್ ಸಂತ ಪದವಿ ಗೌರವ ನೀಡಲಿದ್ದಾರೆ.
ರೋಮನ್ ಕ್ಯಾಥೋಲಿಕ್ ಸನ್ಯಾಸಿನಿ ಆಗಿದ್ದ ಮದರ್ ತೆರೇಸಾ ತಮ್ಮ ಇಡೀ ಜೀವನವನ್ನು ಸೇವೆಗೆ ಸಮರ್ಪಿಸಿದವರು. ಕೋಲ್ಕತ್ತಾದಲ್ಲಿ ಹಲವು ವರ್ಷಗಳ ಕಾಲ ರೋಗಿಗಳ, ದೀನರ ಸೇವೆ ಮಾಡಿದರು. ಮಿಷನರಿ ಮೂಲಕ ಅವರು ಈ ಸೇವೆಯನ್ನು ಮಾಡಿ, ಜಗತ್ತಿನ್ನಲೇ ಪ್ರಸಿದ್ಧರಾಗಿದ್ದಾರೆ. ತಮ್ಮ 18ನೇ ವಯಸ್ಸಿಗೆ ಐರ್ಲೆಂಡ್ನಲ್ಲಿ ಸನ್ಯಾಸಿನಿಯಾದರು. 1929 ರಲ್ಲಿ ಅವರು ಭಾರತಕ್ಕೆ ಆಗಮಿಸಿದ್ದರು. ಅಧ್ಯಾಪಿಕೆಯಾಗಿ ಆಗಮಿಸಿದ್ದ ಅವರು ಸೇವಾಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದರು. ಕೋಲ್ಕತ್ತಾದಲ್ಲಿ ನಿರ್ಗತಿಕರ, ರೋಗಿಗಳನ್ನು ನೋಡಿ ಅವರು ವ್ಯಾಪಕವಾಗಿ ಮರುಗಿದ್ದರು. ಇದರ ಪರಿಣಾಮ ಮಿಷನರೀಸ್ ಆಫ ಚಾರಿಟಿ ಸ್ಥಾಪಿಸಿದರು.
ತೆರೇಸಾ ಸಂತ ಪದವಿಗೇರಲು ಕಾರಣ?
ತೆರೇಸಾ ಅವರನ್ನು ಸಂತ ಪದವಿಗೇರಿಸಲು ಕಾರಣವಾದ ಕೆಲ ಪವಾಡಗಳು ನಡೆದಿವೆ. ಕೋಲ್ಕತ್ತಾದ ಮಹಿಳೆಯೊಬ್ಬರು ತೆರೇಸಾರನ್ನು ಪ್ರಾರ್ಥಿಸಿದಾಗ ಅವರ ದೇಹದಲ್ಲಿದ್ದ ಗೆಡ್ಡೆ ವಾಸಿಯಾಗಿದೆ. ಈ ಘಟನೆ 2003 ರಲ್ಲಿ ನಡೆದಿದೆ. ಇನ್ನು ತೆರೇಸಾ ಅವರನ್ನು ಪ್ರಾರ್ಥಸಿದ ಬ್ರೆಜಿಲ್ ವ್ಯಕ್ತಿಯ ಮೆದುಳಿನ ಸೋಂಕು, ಮೂತ್ರಪಿಂಡ ಕಾಯಿಲೆ ವಾಸಿಯಾಗಿತ್ತು. ಇದು 2008 ರಲ್ಲಿ ನಡೆದಿತ್ತು. ಈ ಎರಡೂ ಘಟನೆಯನ್ನು ಪೋಪ್ ಗಮನಿಸಿ ಮಾನ್ಯ ಮಾಡಿದ್ದಾರೆ. ಬಳಿಕ 2015 ರಲ್ಲಿ ತೆರೇಸಾ ಅವರಿಗೆ ಸಂತ ಪದವಿ ನೀಡುವುದಾಗಿ ಘೋಷಿಸಿದ್ದರು.
ಶಾಲಾ ಮಕ್ಕಳಿಂದ ಶ್ರದ್ಧಾಂಜಲಿ
ಚೆನ್ನೈ: ಮದರ್ ತೆರೇಸಾ ಅವರಿಗೆ ಸಂತ ಪದವಿ ಪ್ರದಾನ ಮಾಡುತ್ತಿರುವ ಹಿನ್ನಲೆಯಲ್ಲಿ ಚೆನ್ನೈನಲ್ಲಿ ಸಾವಿರ ಅಡಿ ಉದ್ದದ ಗ್ರೀಟಿಂಗ್ಸ್ ಮೂಲದ ಮದರ್ ತೆರೇಸಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತೆರೇಸಾ ಸೇರಿದಂತೆ ವಿಶ್ವದ ಪ್ರಮುಖ ನಾಯಕರಾದ ರೊನಾಲ್ಡ್ ರೀಗನ್, ಪ್ರಿನ್ಸೆಸ್ ಡಯಾನಾ ಸೇರಿದಂತೆ ಅನೇಕರ ಭಾವಚಿತ್ರ ಮೂಲಕ ನಮನ ಸಲ್ಲಿಸಲಾಗಿದೆ.
ಇನ್ನು ಈ ಗ್ರೀಟಿಂಗ್ಸ್ ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಹೆಸರೂ ಕೂಡ ಇದೆ.
Discussion about this post