No Result
View All Result
Yogada Satsang Society brings out Kannada version on Kriya Yoga today
English Articles

Yogada Satsang Society brings out Kannada version on Kriya Yoga today

by ಕಲ್ಪ ನ್ಯೂಸ್
March 25, 2026
0

Kalpa Media House  |  Dharwad  | Yogada Satsang Society of India has brought out the Kannada version of Kriya Yoga...

Read moreDetails
Sagara Engulfed In The Ocean of Music

Sagara Engulfed In The Ocean of Music

March 23, 2026
MAHE Introduces ‘MAGIC’ to Power AI-Driven Academic and Administrative Transformation

MAHE Introduces ‘MAGIC’ to Power AI-Driven Academic and Administrative Transformation

March 23, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
  • Advertise With Us
  • Grievances
  • About Us
  • Contact Us
Wednesday, March 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಕಲಿಯೊಗದೊಳು ಹರಿನಾಮವ ನೆನೆದರೆ…

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 16, 2016
in Army
0
Share on FacebookShare on TwitterShare on WhatsApp

“ಕಲಿಯುಗದಲ್ಲಿ ಜನರು ಕಲಿಯ ಪ್ರಭಾವದಿಂದ ಹೇಗೆ ಮುಕ್ತರಾಗಿರಲು ಸಾಧ್ಯ..?” ಇದು ದೇವರ್ಷಿ ನಾರದರು ದ್ವಾಪರಯುಗದ ಅಂತ್ಯದಲ್ಲಿ ಸೃಷ್ಟಿಕರ್ತ ಬ್ರಹ್ಮನಿಗೆ ಕೇಳಿದ ಪ್ರಶ್ನೆ.ಆಗ ಬ್ರಹ್ಮ “ಆದಿಪುರುಷ ಭಗವಾನ್ ನಾರಾಯಣನ ನಾಮಜಪವನ್ನು ಯಾವ ಜೀವಿಯು ನಿರಂತರವಾಗಿ ಜಪಿಸುತ್ತದೆಯೋ ಅಂತಹ ಜೀವಿ ಕಲಿಪ್ರಭಾವದಿಂದ ಮುಕ್ತವಾಗಿರುತ್ತದೆ” ಎಂದು ಉತ್ತರಿಸುತ್ತಾನೆ.”ಅಂತಹ ನಾಮಜಪ ಯಾವುದು?” ಎಂಬುದು ನಾರದರ ಪ್ರಶ್ನೆ.ಆಗ ಬ್ರಹ್ಮ ನಾರದರಿಗೆ ಈ ಮಂತ್ರವನ್ನು ಉಪದೇಶಿಸುತ್ತಾನೆ.

“ಹರೇ ಕೃಷ್ಣ ಹರೇ ಕೃಷ್ಣ

ಕೃಷ್ಣ ಕೃಷ್ಣ ಹರೇ ಹರೇ |

ಹರೇ ರಾಮ ಹರೇ ರಾಮ

ರಾಮ ರಾಮ ಹರೇ ಹರೇ ||”

“ಇತಿ ಷೋಡಶಕಂ ನಾಮ್ನಾಂ ಕಲಿ ಕಲ್ಮಷನಾಶನಮ್ |

ನಾತಃ ಪರತರೋಪಾಯಃ ಸರ್ವ ವೇದೇಷು ದೃಶ್ಯತೇ ||”

ಹದಿನಾರು ಪದಗಳ ಈ ದಿವ್ಯಮಂತ್ರದಿಂದ ಮನುಷ್ಯ ಕಲಿಪ್ರಭಾವದಿಂದ ರಕ್ಷಿಸಲ್ಪಡುತ್ತಾನೆ.ಈ ಮಂತ್ರದ ಹೊರತಾಗಿ ಕಲಿಯುಗದಲ್ಲಿ ಮನುಷ್ಯನನ್ನು ಉದ್ಧಾರ ಮಾಡುವ ಮಂತ್ರಗಳು ನಾಲ್ಕು ವೇದಗಳಲ್ಲಿಯೂ ಕಾಣಸಿಗಲಾರದು.ಕಲಿಯುಗದಲ್ಲಿ ಶ್ರೇಯಸ್ಸನ್ನು ಪಡೆಯಬೇಕೆಂದರೆ ಈ ಮಂತ್ರವೊಂದೇ ಸಾಕು.ಇನ್ಯಾವ ಮಂತ್ರಜಪದ ಅವಶ್ಯಕತೆ ನಮಗಿಲ್ಲ.

 

ಬೃಹನ್ನಾರದೀಯ ಪುರಾಣದಲ್ಲಿ..

“ಹರೇರ್ನಾಮ ಹರೇರ್ನಾಮ

ಹರೇರ್ನಾಮೇವ ಕೇವಲಮ್ |

ಕಲೌ ನಾಸ್ತ್ಯೇವ ನಾಸ್ತ್ಯೇವ

ನಾಸ್ತ್ಯೇವ ಗತಿರನ್ಯಥಾ ||”

ಕಲಿಯುಗದಲ್ಲಿ ಕೇವಲ ಹರಿನಾಮ,ಹರಿನಾಮ,ಹರಿನಾಮದಿಂದಷ್ಟೇ ಒಳಿತಾಗುತ್ತದೆ.ಹರಿನಾಮವನ್ನು ಬಿಟ್ಟು ಮನುಷ್ಯನನ್ನು ಉದ್ಧಾರ ಮಾಡುವ ಉಪಾಯ ಯಾವುದಿಲ್ಲ,ಯಾವುದಿಲ್ಲ,ಯಾವುದಿಲ್ಲ..!!ಕಲಿಯುಗದಲ್ಲಿ ಸ್ವಯಂ ಶ್ರೀಕೃಷ್ಣನೇ ಹರಿನಾಮ ರೂಪದಲ್ಲಿ ಅವತಾರವೆತ್ತಿದ್ದಾನೆ.ಕೇವಲ ಹರಿನಾಮದಿಂದಲೇ ಸಕಲ ಜಗತ್ತುಗಳ ಒಳಿತಾಗುತ್ತದೆ.

 

ಪದ್ಮಪುರಾಣದಲ್ಲಿ..

“ನಾಮ ಚಿಂತಾಮಣಿಃ ಕೃಷ್ಣಶ್ಚೈತನ್ಯ ರಸವಿಗ್ರಹಃ | ಪೂರ್ಣಶುದ್ಧೋ ನಿತ್ಯಮುಕ್ತೋ ಅಭಿನ್ನತ್ವಂ ನಾಮ ನಾಮಿನೋಃ ||” ಎಂದು ಹೇಳಲಾಗಿದೆ.ಅಂದರೆ,ಹರಿನಾಮ ಸಮಸ್ತ ಕಾಮನೆಗಳನ್ನು ನೆರವೇರಿಸುವ ಚಿಂತಾಮಣಿಯಂತೇ.ಹರಿನಾಮ ಸಾಕ್ಷಾತ್ ರಸಸ್ವರೂಪ,ದಿವ್ಯತೆಗಳಿಂದ ಕೂಡಿದ ಶ್ರೀಕೃಷ್ಣ.ಪೂರ್ಣತೆ,ಶುದ್ಧತೆ ಹಾಗೂ ನಿತ್ಯಮುಕ್ತತೆಯ ಪ್ರತಿರೂಪವೇ ಹರಿನಾಮ.

“ನಾಮಿ” (ಹರಿ) ಹಾಗೂ ಹರಿನಾಮದಲ್ಲಿ ಯಾವುದೇ ಅಂತರವಿಲ್ಲ.ಯಾರು ಕೃಷ್ಣನೋ ಆತ ಹರಿನಾಮ.ಯಾವುದು ಹರಿನಾಮವೋ ಆತನೇ ಶ್ರೀಕೃಷ್ಣ..!!

ಕಲಿಯುಗ ದೋಷಗಳ ಭಂಡಾರ.ದೋಷಗಳ ಭಂಡಾರದಲ್ಲೂ ಇರುವ ಸದ್ಗುಣವೆಂದರೆ ಹರಿನಾಮ.(ಶ್ರೀಮದ್ಭಾಗವತ ೧೨.೩.೫೧)

ಸತ್ಯಯುಗದಲ್ಲಿ ಧ್ಯಾನದಿಂದ,ತ್ರೇತಾಯುಗದಲ್ಲಿ ಯಜ್ಞ-ಅನುಷ್ಠಾನಗಳಿಂದ,ದ್ವಾಪರಯುಗದಲ್ಲಿ ಪೂಜೆ,ಅರ್ಚನೆಗಳಿಂದ,ಕಲಿಯುಗದಲ್ಲಿ ಶ್ರೀಹರಿಯ ನಾಮ ಸಂಕೀರ್ತನೆಯಿಂದ ಪುಣ್ಯಪ್ರಾಪ್ತಿಯಾಗುತ್ತದೆ.

 

“ರಾಮ ರಾಮೇತಿ ರಾಮೇತಿ

ರಮೇ ರಾಮೇ ಮನೋರಮೇ |

ಸಹಸ್ರನಾಮ ತತ್ತುಲ್ಯಂ

ರಾಮನಾಮ ವರಾನನೇ ||”(ರಾಮರಕ್ಷಾಸ್ತೋತ್ರಮ್)  

“ಹೇ ಪಾರ್ವತಿ ! ನಾನು ಸದಾ ರಾಮನಾಮವನ್ನು ಜಪಿಸುತ್ತಿರುತ್ತೇನೆ ಹಾಗೂ ರಾಮನಾಮದ ಆನಂದವನ್ನು ಅನುಭವಿಸುತ್ತೇನೆ” ಇದು ಪರಮೇಶ್ವರ ಪಾರ್ವತಿಗೆ ಹೇಳುವ ಮಾತು.

“ರಾಮಚಂದ್ರನ ಪವಿತ್ರನಾಮ ಭಗವಾನ್ ವಿಷ್ಣುವಿನ ಒಂದು ಸಾವಿರ ನಾಮಕ್ಕೆ ಸರಿಸಮ”(ರಾಮರಕ್ಷಾಸ್ತೋತ್ರಮ್)

 

ಬ್ರಹ್ಮಾಂಡಪುರಾಣದಲ್ಲಿ..

“ಸಹಸ್ರನಾಮ್ನಾಂ ಪುಣ್ಯಾನಾಂ

ತ್ರಿರಾವೃತ್ಯಾ ತು ಯತ್ಫಲಮ್ |

ಎಕಾವೃತ್ಯಾ ತು ಕೃಷ್ಣಸ್ಯ

ನಾಮೈಕಮ್ ತತ್ ಪ್ರಯಚ್ಛತಿ ||”

ವಿಷ್ಣುವಿನ ಸಹಸ್ರನಾಮಜಪದಿಂದ ದೊರೆಯುವ ಪುಣ್ಯ ಕೇವಲ ಕೃಷ್ಣ ಎಂಬ ನಾಮಜಪದಿಂದ ಸಿದ್ಧಿಸುತ್ತದೆ.

 

ಮೂವತ್ತೆರಡು ಅಕ್ಷರಗಳುಳ್ಳ ಹರಿನಾಮಮಂತ್ರ ಸರ್ವಪಾಪಗಳನ್ನು ನಿವಾರಿಸುತ್ತದೆ.ಎಲ್ಲ ಪ್ರಕಾರಗಳ ವಿಷಯದುರ್ವಾಸನೆಗಳನ್ನು ದಹಿಸುವ ಅಗ್ನಿಯಾಗಿದೆ.ಶುದ್ಧಸತ್ವಸ್ವರೂಪ ಹಾಗೂ ಭಗವದ್ಭಕ್ತಿಯನ್ನು ವರ್ಧಿಸುವುದಾಗಿದೆ.ಎಲ್ಲರಿಗೂ ಆರಾಧನೀಯ ಹಾಗೂ ಜಪಿಸಲು ಯೋಗ್ಯವಾಗಿದೆ.ಎಲ್ಲರ ಮನೋಕಾಮನೆಗಳನ್ನು ಪೂರೈಸುವುದಾಗಿದೆ.ಈ ನಾಮಮಂತ್ರವನ್ನು ಜಪಿಸಲು ಸರ್ವರಿಗೂ ಅಧಿಕಾರವಿದೆ.ಎಲ್ಲ ಜೀವಿಗಳ ಬಂಧು,ಸಮಸ್ತ ಶಕ್ತಿಸಂಪನ್ನ,ಆಧಿ-ವ್ಯಾಧಿಗಳ ವಿನಾಶಕ ಹರಿನಾಮಮಂತ್ರವೆಂದು ಭಕ್ತಿ ಚಂದ್ರಿಕೆಯಲ್ಲಿ ಹರಿನಾಮಜಪದ ಮಹಾತ್ಮೆಯನ್ನು ವಿವರಿಸಲಾಗಿದೆ.ಈ ಮಂತ್ರವನ್ನು ಜಪಿಸಲು ದೀಕ್ಷೆ ಬೇಕಿಲ್ಲ.ಬಾಹ್ಯಪೂಜೆಯ ಅವಶ್ಯಕತೆಯಿಲ್ಲ.ದೇಶ-ಕಾಲಗಳ ಪ್ರತಿಬಂಧವಿಲ್ಲ.ಕೇವಲ ಭಕ್ತಿಯಿಂದ ಉಚ್ಚಾರಿಸಿದರೆ ಸಾಕು,ಸಂಪೂರ್ಣಫಲ ಸಿಗುತ್ತದೆ.”ಸ ಏವ ಮೂಲಮಂತ್ರಂ ಜಪತಿ ಹರೇಃ ಇತಿ ಕೃಷ್ಣ ಇತಿ ರಾಮ ಇತಿ” ಇದು ಅಥರ್ವವೇದದ ಚೈತನ್ಯೋಪನಿಷತ್ತಿನಲ್ಲಿ ಬರುವ ಮಾತು.

 

ಯಾವ ಭಕ್ತ ಪ್ರತಿನಿತ್ಯ ೩೨ ಅಕ್ಷರಗಳ ಈ ದಿವ್ಯಮಂತ್ರವನ್ನು ಭಕ್ತಿಯಿಂದ ಜಪಿಸುವನೋ ಆತನಿಗೆ ರಾಧಾಕೃಷ್ಣರ ಸಾಮೀಪ್ಯ ಸಿಗುತ್ತದೆ.ಯಾವುದೇ ಪ್ರಕಾರದ ಅಶುದ್ಧಾವಸ್ಥೆಯಲ್ಲಿಯೂ ಈ ಮಂತ್ರವನ್ನು ಜಪಿಸಬಹುದು.ಜಪ-ತಪಗಳಲ್ಲಿ ದೋಷವುಂಟಾದಾಗ ದೋಷನಿವಾರಣೆಗಾಗಿ ಈ ಮಂತ್ರವನ್ನು ಜಪಿಸಬಹುದು. ಸದಾ ಹರಿನಾಮ ಸಂಕೀರ್ತನೆಯನ್ನು ಉಚ್ಚಸ್ವರದಿಂದ ಮಾಡಬೇಕು.ಆಗಲೇ ಸರಿಯಾದ ಫಲಪ್ರಾಪ್ತಿ.

 

ಹರಿವಂಶಪುರಾಣದ ಅನುಸಾರ –

“ವೇದರಾಮಾಯಣೇಚೈವ ಪುರಾಣೇ ಭಾರತೇ ತಥಾ |

ಆದಾವಂತೇಚಮಧ್ಯೇ ಚ ಹರಿಃ ಸರ್ವತ್ರ ಗೀಯತೇ ||”

ವೇದ,ರಾಮಾಯಣ,ಮಹಾಭಾರತ,ಪುರಾಣಗಳ ಆದಿ,ಮಧ್ಯ ಹಾಗೂ ಅಂತ್ಯದಲ್ಲಿ ಸರ್ವತ್ರ ಶ್ರೀಹರಿಯ ಗುಣಗಾನವನ್ನೇ ಮಾಡಲಾಗಿದೆ.ಹಾಗಾಗಿ ಕಲಿಯುಗದಲ್ಲಿ ಹರಿನಾಮ ಜಪದಿಂದಷ್ಟೇ ಸಮಸ್ತ ದೋಷಗಳ ನಿವಾರಣೆ ಸಾಧ್ಯ.

“ಸರ್ವೇ ಭವಂತು ಸುಖಿನಃ”

 

Share196Tweet123Send
Previous Post

ಯಾರು ಮಹಾತ್ಮ? ಭಾಗ- ೩

Next Post

ಪೊಲೀಸ್ ಇಲಾಖೆಗೆ ನೇಮಕಕ್ಕೆ ಅಧಿಸೂಚನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಪೊಲೀಸ್ ಇಲಾಖೆಗೆ ನೇಮಕಕ್ಕೆ ಅಧಿಸೂಚನೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಗುಡ್ ನ್ಯೂಸ್ | ಮಂಗಳೂರು-ಸೂರತ್ ವಿಶೇಷ ರೈಲು ಸೇವೆ ಖಾಯಂ: ರೈಲ್ವೆ ಇಲಾಖೆ ಆದೇಶ

March 25, 2026
ಶೈಕ್ಷಣಿಕ ಸಂಸ್ಥೆಗಳ ಭೂ ವಿಧೇಯಕ ಮಂಡನೆ | ಐತಿಹಾಸಿಕ ಮಸೂದೆಗೆ ಒಮ್ಮತದ ಅಂಗೀಕಾರ

ಶೈಕ್ಷಣಿಕ ಸಂಸ್ಥೆಗಳ ಭೂ ವಿಧೇಯಕ ಮಂಡನೆ | ಐತಿಹಾಸಿಕ ಮಸೂದೆಗೆ ಒಮ್ಮತದ ಅಂಗೀಕಾರ

March 25, 2026
ಐಪಿಎಲ್ ಸಂಭ್ರಮವಿರಲಿ, ಬದುಕು ಬೆಚ್ಚಿರಲಿ: ಒಂದು ಕಣ್ಣೀರಿನ ಎಚ್ಚರಿಕೆ

ಐಪಿಎಲ್ ಸಂಭ್ರಮವಿರಲಿ, ಬದುಕು ಬೆಚ್ಚಿರಲಿ: ಒಂದು ಕಣ್ಣೀರಿನ ಎಚ್ಚರಿಕೆ

March 25, 2026
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯ, ಅಭಿವೃದ್ಧಿ ಶೂನ್ಯ: ಶಾಸಕ ಚನ್ನಬಸಪ್ಪ ವಾಗ್ದಾಳಿ

ಸಮಾಜ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸಲು ವಿಶೇಷ ಕಾರ್ಯಪಡೆ ರಚಿಸಲು ಶಾಸಕ ಚನ್ನಬಸಪ್ಪ ಒತ್ತಾಯ

March 25, 2026
ಡಾ. ಸಮೀಕ್ಷಾ ರೆಡ್ಡಿ ಸಾವು | ಉನ್ನತ ಮಟ್ಟದ ತನಿಖೆಗೆ ಶಾಸಕ ಚನ್ನಬಸಪ್ಪ ಆಗ್ರಹ 

ಡಾ. ಸಮೀಕ್ಷಾ ರೆಡ್ಡಿ ಸಾವು | ಉನ್ನತ ಮಟ್ಟದ ತನಿಖೆಗೆ ಶಾಸಕ ಚನ್ನಬಸಪ್ಪ ಆಗ್ರಹ 

March 25, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL