No Result
View All Result
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ
English Articles

Darling Krishna, Milana Nagaraj ’s Love Mocktail 3 Premieres This 21st on Zee Kannada

by ಕಲ್ಪ ನ್ಯೂಸ್
June 19, 2026
0

Kalpa Media House  |  Bengaluru  | Staying committed to showcasing stories that connect with viewers of all generations, Zee Kannada...

Read moreDetails
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

Periodicity of Bhubaneswar–Yesvantpur Special Train Extended

June 19, 2026
Blood Donation Camp Successfully Organised at Mysuru Division

Blood Donation Camp Successfully Organised at Mysuru Division

June 16, 2026
yoga | Participate online

India Launches Worldwide Campaign for International Day of Yoga 2026

June 13, 2026
Elderly Woman Found Dead

Elderly Woman Found Dead in Decomposed State in Shivamogga

June 13, 2026
  • Advertise With Us
  • Grievances
  • About Us
  • Contact Us
Saturday, June 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಪಾಪದಲ್ಲಿ ಪಾಲುದಾರರು ಯಾರು..?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 4, 2016
in Army
0
Share on FacebookShare on TwitterShare on WhatsApp

ಬಹಳ ಹಿಂದಿನ ಸಮಯದ ಘಟನೆ.ಒಂದು ರಾಜ್ಯದಲ್ಲಿ ಒಬ್ಬ ದೊಡ್ಡ ಡಕಾಯಿತನಿದ್ದ.ಆತನ ಹೆಸರು ರತ್ನಾಕರ.ಆ ಡಕಾಯಿತನನ್ನು ಕಂಡರೆ ರಾಜ್ಯವೇ ನಡುಗುತ್ತಿತ್ತು.ಆತನ ಲೂಟಿ,ಹಿಂಸೆ ಅಪರಿಮಿತವಾಗಿತ್ತು.ರಾತ್ರಿಯಾದರೆ ಸಾಕು,ದಾರಿಯಲ್ಲಿ ಸಾಗುವ ಪ್ರಯಾಣಿಕರನ್ನು ದೋಚುವುದು,ವಿರೋಧಿಸಿದರೆ ಅವರನ್ನು ಕೊಲ್ಲುವುದು ಡಕಾಯಿತನ ದಿನನಿತ್ಯದ ಹವ್ಯಾಸವಾಗಿತ್ತು.

 

ಒಂದು ಬಾರಿ ದೇವರ್ಷಿ ನಾರದರು ನಾರಾಯಣಮಂತ್ರವನ್ನು ಜಪಿಸುತ್ತಾ ಕಾಡಿನ ಹಾದಿಯಲ್ಲಿ ಸಾಗುತ್ತಿದ್ದರು.ಅವರ ಎದುರಾಗಿ ಹಲವರು ಓಡಿ ಬರುತ್ತಿದ್ದರು.ನಾರದರು ಏನಾಯಿತೆಂದು ಕೇಳುತ್ತಾರೆ.ಆಗ ಜನರು “ದಾರಿಯಲ್ಲಿ ರತ್ನಾಕರ ಬರುತ್ತಿದ್ದಾನೆ.ಆತ ನಮ್ಮನ್ನು ಕಂಡರೆ ದೋಚುತ್ತಾನೆ ಅಥವಾ ಸಾಯಿಸುತ್ತಾನೆ.ನೀವೂ ಸಹ ನಿಮ್ಮ ಪ್ರಾಣ ಉಳಿಸಿಕೊಳ್ಳಿ” ಎಂದು ಹೇಳಿ ವೇಗವಾಗಿ ಓಡಿ ಹೋದರು.

ಆದರೂ ನಾರದರು ಮುಂದೆ ಸಾಗಿದರು.ತನ್ನೊಂದಿಗೆ ನಾರಾಯಣನಿದ್ದಾನೆಂಬ ಅಚಲ ನಂಬಿಕೆ ನಾರದರಿಗಿತ್ತು.ದೇವರನ್ನು ಅತಿಯಾಗಿ ನಂಬಿದವನಿಗೆ ಯಾರ ಭಯ..?ಅನಾಥರಕ್ಷಕ ಭಗವಂತ.ಆತನ ಮೇಲೆ ನಿಷ್ಕಲ್ಮಶ ಭಕ್ತಿಯಿದ್ದರೆ ಜೀವನದಲ್ಲಿ ಯಾವ ಕಷ್ಟವನ್ನಾದರೂ ಎದುರಿಸಬಹುದು.ಅಣತಿ ದೂರ ಸಾಗಿದ ಬಳಿಕ ರತ್ನಾಕರ ತನ್ನ ಸಂಗಡಿಗರೊಂದಿಗೆ ಬಂದು ನಾರದರನ್ನು ಸುತ್ತುವರಿದ.

ರತ್ನಾಕರ – ನಾನು ರತ್ನಾಕರ , ದೊಡ್ಡ ಡಕಾಯಿತ.

ನಾರದರು – (ಮುಗುಳ್ನಗುತ್ತಾ) ನಾನು ನಾರದ,ದೇವರ್ಷಿ ನಾರದ.ನಿನ್ನ ಅತಿಥಿ ಹಾಗೂ ನಾನು ಸದಾ ನಿರ್ಭಯಿ.ನೀನೂ ಸಹ ನಿರ್ಭಯಿಯೇ..?

ರತ್ನಾಕರ – ಏನು ಹೇಳುತ್ತಿರುವೆ ನೀನು ?

ನಾರದ – ಹಾಂ..ನನಗೆ ಪ್ರಾಣಭಯವಿಲ್ಲ,ಅಸಫಲತೆಯ ಭಯವಿಲ್ಲ,ನಾಳೆಯ ಭಯವಿಲ್ಲ,ಹಾಗೂ ಯಾರ ಭಯವೂ ನನಗಿಲ್ಲ.ಈಗ ಹೇಳು,ನೀನೂ ಸಹ ನನ್ನಂತೆಯೇ ನಿರ್ಭಯಿಯಾ..?

ರತ್ನಾಕರ – ನಾನೂ ಸಹ ನಿರ್ಭಯನೇ..!! ಪ್ರಾಣದ,ಅಸಫಲತೆಯ,ನಾಳೆಯ,ಕಳಂಕದ ಭಯ ನನಗೂ ಇಲ್ಲ.

ನಾರದ – ಹಾಗಾದರೆ ನೀನೇಕೆ ಈ ಅರಣ್ಯದಲ್ಲಿ ಅವಿತುಕೊಂಡಿರುವೆ..? ರಾಜನೆಂದರೆ ನಿನಗೆ ಭಯವೇ..?

ರತ್ನಾಕರ – ಇಲ್ಲ.

ನಾರದ – ಪ್ರಜೆಗಳೆಂದರೆ ನಿನಗೆ ಭಯವೇ..?

ರತ್ನಾಕರ – ಇಲ್ಲ.

ನಾರದ – ಪಾಪವೆಂದರೆ ನಿನಗೆ ಭಯವೇ..?

 

ರತ್ನಾಕರ – ಇಲ್ಲ.

ನಾರದ – ಹಾಗಾದರೆ ಇಲ್ಲಿ ಅವಿತುಕೊಂಡಿರುವುದೇಕೆ..?

ಇದನ್ನು ಕೇಳಿ ರತ್ನಾಕರ ಕಕ್ಕಾಬಿಕ್ಕಿಯಾದ.ಉತ್ತರಿಸಲು ಕಷ್ಟವಾಯಿತು.ನಾರದರನ್ನು ದುರುಗುಟ್ಟಿ ನೋಡತೊಡಗಿದ.

ನಾರದ – ನಾನು ಉತ್ತರಿಸುತ್ತೇನೆ.ನೀನು ಮಾಡುತ್ತಿರುವ ಪಾಪಕಾರ್ಯಗಳು ನಿನ್ನನ್ನು ಹೆದರಿಸುತ್ತಿವೆ.

ರತ್ನಾಕರ – (ನಗುತ್ತಾ) ಅಯ್ಯೋ..!! ನಿಮ್ಮ ಈ ಮಾತುಗಳಿಂದ ನನ್ನನ್ನು ಭಯಪಡಿಸಲು ಯತ್ನಿಸುತ್ತಿದ್ದೀರಿ.ನಾನು ಪಾಪಕ್ಕೆ,ಪುಣ್ಯಕ್ಕೆ,ದೇವತೆಗಳಿಗೆ,ದಾನವರಿಗೆ,ರಾಜನಿಗೆ,ಪ್ರಜೆಗಳಿಗೆ,ದಂಡವಿಧಾನಗಳಿಗೆ ಎಂದೂ ಹೆದರುವುದಿಲ್ಲ.ನಾನು ರಾಜ್ಯಕ್ಕೆ ಹಾಗೂ ಸಮಾಜಕ್ಕೆ ದ್ರೋಹ ಮಾಡುತ್ತಿದ್ದೇನೆ,ಹಾಗಾಗಿ ಕಾಡಿನಲ್ಲಿ ವಾಸಿಸುತ್ತಿದ್ದೇನೆಯೇ ಹೊರತು ಭಯದಿಂದಲ್ಲ.

 

ನಾರದ – ಸರಿ ಯಾರಿಗೋಸ್ಕರ ಇಂತಹ ಪಾಪಕಾರ್ಯಗಳನ್ನು ಮಾಡುತ್ತಿರುವೆ..?

 

ರತ್ನಾಕರ – ನನ್ನ ಕುಟುಂಬಕ್ಕಾಗಿ.ನನ್ನ ಪತ್ನಿ ಮಕ್ಕಳು ಸುಖವಾಗಿರಬೇಕೆಂದು.

 

ನಾರದ – ನಿನ್ನ ಪತ್ನಿ ಮಕ್ಕಳೂ ನಿನ್ನ ಪಾಪಕಾರ್ಯಗಳಲ್ಲಿ ಸಹಭಾಗಿಗಳಾ..?

 

ರತ್ನಾಕರ – (ನಗುತ್ತಾ) ನಿಜವಾಗಲೂ ನಾನು ಮಾಡುತ್ತಿರುವ ಕಾರ್ಯಗಳೆಲ್ಲಾ ಅವರಿಗಾಗಿಯೇ.ಅವರ ಸುಖಕ್ಕೆಂದೇ.ನಿಶ್ಚಿತವಾಗಲೂ ಅವರು ನನ್ನ ಕಾರ್ಯಗಳಲ್ಲಿ ಸಹಭಾಗಿಗಳೇ.
ನಾರದ – ಸರಿ,ನೀನು ಮಾಡುತ್ತಿರುವ ಪಾಪಕಾರ್ಯಗಳು ಸರಿಯೇ..?ನಿನ್ನ ಪಾಪಕಾರ್ಯಗಳಲ್ಲಿ ನಿನ್ನ ಸಂಬಂಧಿಕರು ಪಾಲುದಾರರೇ..? ಎಂದು ನಿನ್ನ ಪತ್ನಿ,ಮಕ್ಕಳು,ತಂದೆ-ತಾಯಿ,ಸಂಬಂಧಿಕರಲ್ಲಿ ಕೇಳಿಕೊಂಡು ಬಾ.

 

ರತ್ನಾಕರ – ಈಗಲೇ ಹೋಗಿ ಕೇಳಿಕೊಂಡು ಬರುತ್ತೇನೆ.

 

ತನ್ನ ಸಂಗಡಿಗರಿಗೆ ನಾರದರನ್ನು ಅಲ್ಲಿಯೇ ಬಂಧಿಸಲು ಹೇಳಿ ರತ್ನಾಕರ ತನ್ನ ವಾಸ್ತವ್ಯಕ್ಕೆ ತೆರಳುತ್ತಾನೆ.ಪತ್ನಿಯ ಹತ್ತಿರ ಹೋಗಿ “ನಾನು ಮಾಡುತ್ತಿರುವುದು ಪಾಪಕಾರ್ಯವೇ..?ಒಂದೊಮ್ಮೆ ಹೌದಾದರೆ ನೀನೂ ಸಹ ಈ ಪಾಪಕಾರ್ಯದಲ್ಲಿ ಭಾಗಿಯಾಗಲು ಬಯಸುತ್ತೀಯಾ ?” ಎಂದು ಕೇಳುತ್ತಾನೆ.
ಪತ್ನಿ – ಇಲ್ಲ ಸ್ವಾಮೀ,ನಾನು ನಿಮ್ಮ ಸುಖ-ದುಃಖಗಳಲ್ಲಿ ಭಾಗಿಯಾಗುವ ಸಂಕಲ್ಪ ಮಾಡಿದ್ದೇನೆಯೇ ಹೊರತು ಪಾಪಕಾರ್ಯಗಳಲ್ಲಲ್ಲ.
ರತ್ನಾಕರ ಸ್ತಬ್ಧನಾದ.ಪುನಃ ತನ್ನ ಅಂಧ ಪಿತನ ಹತ್ತಿರ ಹೋಗಿ “ಪಿತಾಜಿ ನನ್ನ ಕಾರ್ಯಗಳಲ್ಲಿ ನೀವು ಭಾಗಿಯಾಗಲು ಬಯಸುತ್ತೀರಾ”

ಪಿತ – ಇಲ್ಲ ಮಗನೇ..ಇದು ನೀನು ಸಂಪಾದನೆಗಾಗಿ ಆಯ್ದುಕೊಂಡಿರುವ ವಾಮಮಾರ್ಗವೇ ಹೊರತು ಇನ್ನೇನಲ್ಲ.ನಾನೂ ನಿನ್ನ ಪಾಪಕಾರ್ಯಗಳಲ್ಲಿ ಭಾಗಿಯಾಗಲಾರೆ”
ಇದನ್ನು ಕೇಳಿ ರತ್ನಾಕರ ದುಃಖಿತನಾದ.ನಾನೆಂತಹ ಘೋರಕಾರ್ಯದಲ್ಲಿ ತೊಡಗಿದ್ದೇನೆಂಬ ಅರಿವಾಯಿತು.ತನ್ನ ಪಾಪಕಾರ್ಯಗಳಿಂದ ಯಾರನ್ನು ಸುಖವಾಗಿರಿಸಲು ಯತ್ನಿಸಿದ್ದನೋ ಅವರ್ಯಾರೂ ರತ್ನಾಕರನನ್ನು ಬೆಂಬಲಿಸಲಿಲ್ಲ.ಪಾಪಿಗಳಿಗೆ ರಕ್ಷಕರು ಯಾರಿಲ್ಲವೆಂಬ ಜ್ಞಾನೋದಯವಾಯಿತು.ನಿಧಾನವಾಗಿ ನಾರದರಿದ್ದಲ್ಲಿಗೆ ಬಂದ.
ನಾರದ – ನಿನ್ನ ಸಂಗಡಿಗರು ನನ್ನನ್ನೊಬ್ಬನನ್ನೇ ಬಿಟ್ಟು ಎಲ್ಲೋ ಹೊರಟುಹೋದರು ರತ್ನಾಕರ.

ರತ್ನಾಕರ ನಾರದರಿಗೆ ಸಾಷ್ಠಾಂಗ ನಮಸ್ಕಾರ ಮಾಡಿದ.”ಕ್ಷಮಿಸಿ ದೇವರ್ಷಿಗಳೇ ಜೀವನದಲ್ಲಿ ನಾನು ಒಂಟಿಯಾಗಿಬಿಟ್ಟೆ”ದುಃಖಿತನಾದ.
ನಾರದ – ಇಲ್ಲ ರತ್ನಾಕರ..ನೀನೇ ನಿನ್ನ ಮಿತ್ರ,ನೀನೇ ನಿನ್ನ ಶತ್ರು.ನಿನ್ನ ಹಳೆಯ ಸಂಸಾರವನ್ನು ನೀನೆ ರಚಿಸಿಕೊಂಡಿದ್ದೆ.ಹೊಸಸಂಸಾರವನ್ನೂ ನೀನೆ ರಚಿಸಿಕೊಳ್ಳಬೇಕು.ಆದ್ದರಿಂದ ದುಃಖಿಸಬೇಡ.ಎದ್ದೇಳು,ನಿನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಮಾರ್ಗವನ್ನು ಹುಡುಕು”ಎಂದು ಉಪದೇಶಿಸಿ ನಾರದರು ಮುಂದೆ ತೆರಳುತ್ತಾರೆ.

 
ಈ ಘಟನೆಯ ನಂತರ ಡಕಾಯಿತ ರತ್ನಾಕರನ ವ್ಯಕ್ತಿತ್ವ  ಸಂಪೂರ್ಣವಾಗಿ ಬದಲಾಯಿತು.ಪಾಪಮಾರ್ಗವನ್ನು ತ್ಯಜಿಸಿ ಪುಣ್ಯಮಾರ್ಗವನ್ನು ಅನುಸರಿಸಿದ.ಆಧ್ಯಾತ್ಮಸಾಧನೆಗೈದು ಸಂಪೂರ್ಣ ರಾಮಕಥೆಯನ್ನು ಬರೆದು ಮಹರ್ಷಿ ವಾಲ್ಮೀಕಿಯಾದ.

ಈ ಕಥೆಯ ಉದ್ದೇಶ ಇಷ್ಟೇ.ವಾಮಮಾರ್ಗಗಳನ್ನು ಅನುಸರಿಸಿ ಜೀವನದಲ್ಲಿ ಸಂಪತ್ತನ್ನು ಸಂಪಾದಿಸಬಹುದು.ಆದರೆ ಗಳಿಸಿದ ಪಾಪದಲ್ಲಿ ಪಾಲುದಾರರು ಯಾರಿರುವುದಿಲ್ಲ.ಅನ್ಯಾಯ,ಅಕ್ರಮಗಳಿಂದ ಗಳಿಸಿದ ಸಂಪತ್ತು ಬಹುಕಾಲ ಇರುವುದೂ ಇಲ್ಲ.

Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನಾರಿಮನ್ ಮನೆ ಗೇಟ್ ಗೂ ಕರ್ನಾಟಕದವರು ಹೋಗಬಾರದಂತೆ: ಬಯಲಾದ ನಾರಿಮನ್ ಬಣ್ಣ

Next Post

ಸೀಮಿತ ದಾಳಿ ಅಜಿತ್ ಧೋವಲ್ ತಂತ್ರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸೀಮಿತ ದಾಳಿ ಅಜಿತ್ ಧೋವಲ್ ತಂತ್ರ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
Shivamogga Ganja sale case Two arrested

ಶಿವಮೊಗ್ಗ | ಗಾಂಜಾ ಮಾರಾಟ ಪ್ರಕರಣ: ಇಬ್ಬರ ಬಂಧನ

June 19, 2026
ನಕಲಿ ಪತ್ರದ ಮೂಲಕ ಸಾಲ ವಂಚನೆ: ಸಾರ್ವಜನಿಕರಿಗೆ ಎಚ್ಚರಿಕೆ

ನಕಲಿ ಪತ್ರದ ಮೂಲಕ ಸಾಲ ವಂಚನೆ: ಸಾರ್ವಜನಿಕರಿಗೆ ಎಚ್ಚರಿಕೆ

June 19, 2026
ಭುವನೇಶ್ವರಿ ಬಡಾವಣೆ ಪಾರ್ಕ್ ಪರಿಶೀಲನೆ: ಮೂಲಸೌಕರ್ಯ ಕೊರತೆಗೆ ಶಾಸಕ ಚನ್ನಬಸಪ್ಪ ಗರಂ

ಭುವನೇಶ್ವರಿ ಬಡಾವಣೆ ಪಾರ್ಕ್ ಪರಿಶೀಲನೆ: ಮೂಲಸೌಕರ್ಯ ಕೊರತೆಗೆ ಶಾಸಕ ಚನ್ನಬಸಪ್ಪ ಗರಂ

June 19, 2026
ಮಾಸಿಕ ಪಿಂಚಣಿ ಯೋಜನೆ ಸ್ಥಗಿತ | ಬಡವರಿಗೆ ದ್ರೋಹ: ಶಾಸಕ ಚನ್ನಬಸಪ್ಪ ಆಕ್ರೋಶ

ಧರ್ಮಸ್ಥಳ ವಿಚಾರ: ನಟ ಪ್ರಕಾಶ್ ರಾಜ್ ವಿರುದ್ಧ ತನಿಖೆ ನಡೆಸಲು ಶಾಸಕ ಚನ್ನಬಸಪ್ಪ ಆಗ್ರಹ

June 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL