ವಿಶ್ವಸಂಸ್ಥೆ:ಹವಾಮಾನ ಬದಲಾವಣೆ ಕುರಿತಂತೆ ಐತಿಹಾಸಿಕ ಪ್ಯಾರೀಸ್ ಒಪ್ಪಂದವನ್ನು ದೃಢೀಕರಿಸಲು ಭಾರತ ಕೈಗೊಂಡ ಕ್ಷಿಪ್ರಕ್ರಮವನ್ನು ವಿಶ್ವಸಂಸ್ಥೆಯ ಮಹಾಕಾರ್ಯದಶರ್ಿ ಬಾನ್ಕೀ-ಮೂನ್ ಸೋಮವಾರ ಶ್ಲಾಘಿಸಿದ್ದಾರೆ.
ಕಳೆದ ಅ.2ರಂದು ಪ್ಯಾರೀಸ್ನಲ್ಲಿ ಕೈಗೊಂಡ ಹವಾಮಾನ ಕುರಿತ ಜಾಗತಿಕ ಒಪ್ಪಂದವನ್ನು ಭಾರತವು ಸ್ಥಿರೀಕರಿಸಲಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಕೇರಳದ ಕಲ್ಲಿಕೋಟೆಯಲ್ಲಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದಶರ್ಿಯವರು ಭಾರತದ ನಿಲುವನ್ನು ಪ್ರಶಂಸಿಸಿದ್ದಾರೆ.
ಈ ತಿಂಗಳಾದಿಯಲ್ಲಿ ಅಮೆರಿಕ ಮತ್ತು ಚೀನಾಗಳು ಪ್ಯಾರೀಸ್ ಒಪ್ಪಂದಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿವೆ.ಕಳೆದ ಡಿಸೆಂಬರ್ನಲ್ಲಿ ಪ್ಯಾರೀಸ್ನಲ್ಲಿ ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ನೀತಿ ಚೌಕಟ್ಟಿನ ಸಮ್ಮೇಳನದಲ್ಲಿ 195ದೇಶಗಳು ಈ ಒಪ್ಪಂದಕ್ಕೆ ಬೆಂಬಲ ಸೂಚಿಸಿದ್ದವು.ತಾಪಮಾನ ಏರಿಕೆಯಂತಹ ಸವಾಲನ್ನು ಎದುರಿಸುವಲ್ಲಿ ಈ ಒಪ್ಪಂದವು ಮಹತ್ವದ ಕೊಡುಗೆಯಾಗಲಿದೆ ಎಂದು ಬಣ್ಣಿಸಲಾಗಿದೆ. ವಾತಾವರಣದ ಮಾಲಿನ್ಯ ಮತ್ತು ಇಂಗಾಲವನ್ನು ನಿಯಂತ್ರಿಸಲು ಹೆಚ್ಚಿನ ಹೂಡಿಕೆ ಮತ್ತು ಕ್ರಮಗಳನ್ನು ತೀವ್ರಗೊಳಿಸುವ ಬಗ್ಗೆ ಒಪ್ಪಂದದಲ್ಲಿ ಹೇಳಲಾಗಿತ್ತು.ಇದರಂತೆ ಈಗಿರುವ ಜಾಗತಿಕ ತಾಪಮಾನ ಏರಿಕೆಯ ಪ್ರಮಾಣವನ್ನು 2ಡಿಗ್ರಿಗಳಿಗಿಂತ ಕಡಿಮೆಗೆ ನಿಯಂತ್ರಿಸುವ ಮತ್ತು ಅದನ್ನು 1.5ಡಿಗ್ರಿಗಿಳಿಸುವ ಸಂಕಲ್ಪವನ್ನು ಈ ಒಪ್ಪಂದದಲ್ಲಿ ಕೈಗೊಳ್ಳಲಾಗಿತ್ತು.
ಚೀನಾ ಶ್ಲಾಘನೆ
ಪ್ಯಾರೀಸ್ ಹವಾಮಾನ ಒಪ್ಪಂದವನ್ನು ಅಂಗೀಕರಿಸುವ ಭಾರತದ ನಿಧರ್ಾರವನ್ನು ಚೀನಾ ಕೂಡಾ ಸೋಮವಾರ ಪ್ರಶಂಸಿಸಿದೆ. ಇದು ಈ ಮಹತ್ವದ ಒಪ್ಪಂದದ ಅನುಷ್ಠಾನದಲ್ಲಿ ನಿಧರ್ಾರಾತ್ಮಕ ಬೆಳವಣಿಗೆಯಾಗಿದೆ ಎಂದು ಅದು ಬಣ್ಣಿಸಿದೆ.
ತಾಪಮಾನ ಏರಿಕೆ ಮಾನವ ಸಮೂಹ ಎದುರಿಸುತ್ತಿರುವ ಸವಾಲಾಗಿದೆ. ಯಾವುದೇ ದೇಶ ಇದರಿಂದ ಹೊರತಾಗಿಲ್ಲ. ಆದ್ದರಿಂದ ನಾವೆಲ್ಲ ಒಟ್ಟಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಭಾರತದ ನಿಧರ್ಾರ ಈ ದಿಕ್ಕಿನಲ್ಲಿ ಮಹತ್ವದ್ದಾಗಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಜೆಂಗ್ ಷುವಾಂಗ್ ಹೇಳಿದರು. ಪ್ರಧಾನಿ ಮೋದಿಯವರ ಘೋಷಣೆ ವಿಶ್ವದ ದೇಶಗಳನ್ನು ಅಚ್ಚರಿಗೀಡು ಮಾಡಿದೆ.
Discussion about this post