ಪಾಕಿಸ್ಥಾನ ಆಗ ಉದಯವಾದದ್ದು ಹೇಗೆಂದರೆ, ಇದೊಂದು ಮುಸ್ಲಿಂ ಪ್ರಾಬಲ್ಯದ ಪ್ರಜಾಪ್ರಭುತ್ವದ ರಾಷ್ಟ್ರವಾಗಿರಬೇಕೆಂದು. ನಂತರ ಆಳುವವರು ಮಾತ್ಸರ್ಯದ ಅನಿವಾರ್ಯತೆಯಿಂದ ಭಯೋತ್ಪಾದಕರ ಕೈಗೆ ತಮ್ಮ ಜುಟ್ಟನ್ನು ಕೊಟ್ಟುಬಿಟ್ಟರು. ಮೈಸೂರಿನ ಟಿಪ್ಪು ಕೂಡಾ :ನಾಮ್ಕೇ ವಾಸ್ತೆ ‘ ರಾಜ ವಂಶದ ಕುಡಿಯನ್ನು ಇಟ್ಟುಕೊಂಡು ದಬ್ಬಾಳಿಕೆ ಮಾಡಬೇಕೆಂದಿದ್ದ. ಹೀಗೆ ಮಾಡಿದರೆ ವಿರೋಧಗಳು ಕಡಿಮೆಯಾಗುತ್ತದೆ ಎಂಬುದು ಲೆಕ್ಕಾಚಾರ. ಹಿಂದೆ ಚಿತ್ರದುರ್ಗ ದಲ್ಲಿ ನಾಯಕ ವಂಶದ ಲಿಂಗಣ್ಣ ನಾಯಕನನ್ನಿರಿಸಿ ದಳವಾಯಿ ಮುದ್ದಣ್ಣ ದಬ್ಬಾಳಿಕೆ ಮಾಡಿದಂತೆಯೇ , ಪಾಕಿನ ರಾಜಕಾರಣವೂ ಆಗಿದೆ.
ದಾವೂದಿನಂತವರು, ಅಲ್ಕೈದಾ ನಾಯಕರು, ಜಿಹಾದಿಗಳ ಕರಾಳ ಮುಷ್ಟಿಯಲ್ಲಿ ಪಾಕಿಸ್ಥಾನದ ಪ್ರಜಾಪ್ರಭುತ್ವ ಒದ್ದಾಡುತ್ತಿದೆ. ಈಗ ನವಾಜ್ ಶೆರೀಪನ ಆಡಳಿತ. ಇದು ಹೆಸರಿಗೆ ಮಾತ್ರ. ವಿದೇಶದ ನೆರವು,ಬೆಂಬಲ ಸಿಗುವುದು ಕೇವಲ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಮಾತ್ರ. Dictator ದೇಶಗಳಿಗೆ ಸಂಬಂಧ ಯಾಕಿರುವುದೆಂದರೆ ಕೇವಲ ವ್ಯಾಪಾರೋದ್ಧೇಶಕ್ಕೆ ಮಾತ್ರ. ರಾಜ ತಾಂತ್ರಿಕ ಸಲಹೆಗಳನ್ನು ಪ್ರಜಾಪ್ರಭುತ್ವ ರಾಷ್ಟ್ರಗಳು ಇವರಲ್ಲಿ ಕೇಳುವುದಿಲ್ಲ. ಹಾಗಾಗಿ ಪಾಕಿನಲ್ಲಿ ಹೆಸರಿಗೆ ಮಾತ್ರ ಪ್ರಜಾ ಪ್ರತಿನಿಧಿತ್ವ ಇದೆ. ಎಲ್ಲಾ ಚಟುವಟಿಕೆಗಳು ಮಿಲಿಟರಿಯ ಆದೇಶಾನುಸಾರವೇ ನಡೆಯುತ್ತದೆ.ಮಿಲಿಟರಿಯು ತಮ್ಮ ಬಲ ವೃದ್ಧಿಗಾಗಿ ಕ್ರೂರ ಭಯೋತ್ಪಾದಕರೊಂದಿಗೆ ಕೈ ಜೋಡಿಸಿದೆ. ಎಲ್ಲಾ international wanted ಗಳ ಅಡಗುದಾಣವೇ ಪಾಕಿಸ್ಥಾನ. ಸಾಲದ್ದಕ್ಕೆ ಅಣ್ವಸ್ತ್ರಗಳೂ ಪಾಕಿನಲ್ಲಿದೆ. ಭಯೋತ್ಪಾದಕರಿಗೆ ಇದೊಂದು ಇಡೀ ಪ್ರಪಂಚವನ್ನು ನಡುಗಿಸಲು ಅಸ್ತ್ರವೇ ಆಗಿದೆ. ಆದರೆ ಇದರ ಅಧಿಕಾರ ಪಾಕಿನ ಮಿಲಿಟರಿಯಲ್ಲಿ ಇರುವುದಲ್ಲವೇ ಎಂದು ಕೇಳಬಹುದು.ಅದು ಹೌದು.ಆದರೆ ಅಲ್ಲಿನ ಮಿಲಿಟರಿಯಲ್ಲೂ ಎರಡು ಭಿನ್ನ ತಂಡಗಳಿವೆ.ಒಂದು ನೀತಿಯದ್ದು,ಇನ್ನೊಂದು ಅನೀತಿಯದ್ದು. ನೀವು ಮುಶ್ರಪನ ಕಾಲದ ಕಾರ್ಗಿಲ್ ಯುದ್ಧವನ್ನು ವಿಮರ್ಷಿಸಿಕೊಂಡರೆ ಎಲ್ಲವೂ ಅರ್ಥವಾದೀತು.
ಈಗ ನವಾಜನಿಗೆ no voice.ಆರ್ಮಿ ಹೇಳಿದಂತೆ ಕೇಳಬೇಕು.ಆರ್ಮಿಯೇ ಭಯೋತ್ಪಾದಕರಾಗಿವೆ. ಪಾಕಿಸ್ಥಾನವು ಭಯೋತ್ಪಾದಕರ ಮುಷ್ಟಿಯಲ್ಲಿದ್ದರೆ ಇಡೀ ಪ್ರಪಂಚವನ್ನೇ ಇಸ್ಲಾಮೀಕರಣ ಮಾಡಬಹುದೆಂಬುದು ಈ ಮೂರ್ಖ ಭಯೋತ್ಪಾದಕರ ಲೆಕ್ಕಾಚಾರ. ಹಾಗಾಗಿ ಪಾಕಿಸ್ಥಾನವು ಎಂದೆಂದಿಗೂ ಭಾರತದೊಡನೆ ಸ್ನೇಹಾಚಾರ ಬಯಸದು.
ಈಗ ಮೋದಿಯವರ ನಡೆ ಭಯೋತ್ಪಾದಕರು ಅತ್ಯಂತ ನಿರ್ಣಾಯಕಕ್ಕೆ ಬರುವಂತಾಗಿದೆ. ನಿನ್ನೆಯ surgical attach ಭಯೋತ್ಪಾದಕರನ್ನು ಕೆರಳಿಸಿದಂತಾಗಿದೆ. ಇದು ಮೋದಿಯವರಿಗೂ ತಿಳಿದಿದೆ. ಮೋದಿಯವರು ರಂಗೋಲಿಯಡಿ ನುಗ್ಗುವವರೆಂಬುದು ಈ ಮೂರ್ಖರಿಗೆ ಗೊತ್ತಿಲ್ಲ.ಇವರು ಕೇವಲ ಅಣ್ವಸ್ತ್ರದ ಬಲದಲ್ಲಿರುವುದರಿಂದ ಇವರ ದೈರ್ಯ ಇಮ್ಮಡಿಯಾಗುತ್ತಿದೆ. ಆರ್ಮಿಯ ಜುಟ್ಟು ಭಯೋತ್ಪಾದಕರ ಕೈಯಲ್ಲಿದೆ.ಅಂದರೆ ಭಯೋತ್ಪಾದಕ ನಾಯಕರೇ ಆರ್ಮಿಯಲ್ಲಿದ್ದಾರೆ ಅಂದರೆ nuclear weapons ಭಯೋತ್ಪಾದಕರಿಗೆ ಸಿಕ್ಕಿದಂತಿದೆ. ಸದ್ಯ ಈ ಪ್ರಯೋಗಕ್ಕೆ ಮುಂದಾಗದಿದ್ದರೂ ಇನ್ನೆರಡು ಮೂರು ತಿಂಗಳಲ್ಲಿ ಈ ಕೆಲಸ ಮಾಡಿಯೇ ಮಾಡಬಹುದು.
ಆದರೆ ಮೋದಿಯವರಿಗೂ ಈ ಅರಿವು ಇದೆ.ಅವರು ಕಳುಹಿಸುವ Warhead ಭಾರತ ತಲುಪುವ ಮೊದಲೇ ಅದು ನಾಶವಾಗುವುದೂ ನಿಶ್ಚಿತ.ಆದರೆ ಇದು blast ಆಗಬಹುದು.ಎಲ್ಲಿ? ಇಸ್ಲಾಮಾಬಾದ್ ಗಡಿದಾಟಲಾರದು.ಅಲ್ಲಿಗೆ ಪಾಕ್ ಸರ್ವನಾಶ. ಉಳಿಯುವುದು ಬೆಲೂಚಿ, ಪಂಜಾಬ್, ಸಿಂದ್, ಕರಾಚಿಗಳು.ಈ ರಾಜ್ಯಗಳು ಮೊದಲೇ ಪಾಕಿನಿಂದ ಮುಕ್ತಿಗಾಗಿ ಬಯಸುತ್ತಿವೆ. ಇದರಿಂದ ಅದರ ಮುಕ್ತಿಯೂ ಆಗುತ್ತದೆ ಮತ್ತು ಪಾಕಿನ ಹೆಸರು ಭೂಪಟದಿಂದ ನಿರ್ಗಮಿಸುವುದೂ ನಿಶ್ಚಿತ.
ಜೈ ಹಿಂದ್.
Minister Somanna Inspects & Inaugurates Road Under Bridges in Tumkur District eliminating level Crossing gates
Kalpa Media House | Bengaluru | Union Minister of State for Railways and Jal Shakti, V. Somanna, today inaugurated three...
Read moreDetails












