Saturday, July 5, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ

ಶಿವಮೊಗ್ಗ ಪಾಲಿಕೆ ದಸರಾದಲ್ಲಿ ಅಧ್ವಾನ : ಶಾಸಕರ ಪತ್ನಿ ಸಾಧಕರೇ?

October 4, 2016
in ಜಿಲ್ಲೆ, ಶಿವಮೊಗ್ಗ
0 0
0
Share on facebookShare on TwitterWhatsapp
Read - 2 minutes
ಶಿವಮೊಗ್ಗ, ಅ.4:  ಪೂರ್ಣಚಂದ್ರ ತೇಜಸ್ವಿ ಅವರನ್ನು ನೋಡಲೆಂದು ಒಮ್ಮೆ, ಶಾಲಾ ಮಕ್ಕಳನ್ನು ಕರೆದುಕೊಂಡು ಮೇಷ್ಟ್ರೊಬ್ಬರು ಮೂಡಿಗೆರೆಗೆ ಹೋಗಿದ್ದರು.
ಆಗ ಆ ಮೇಷ್ಟ್ರು ಅವರೊಂದಿಗೆ ಮಾತನಾಡುತ್ತಾ ‘ಮಕ್ಕಳಿಗೆ ಬೇಲೂರು, ಹಳೇಬೀಡು ತೋರಿಸಿಕೊಂಡು ಬಂದೆವು. ಹಾಗೆಯೇ ತಮ್ಮನ್ನೂ ತೋರಿಸಿಕೊಂಡು ಹೋಗೋಣ ಎಂದು ಕರೆದುಕೊಂಡು ಬಂದೆವು’ ಎಂದರು.
 ಇದನ್ನು ಕೇಳಿ ತೇಜಸ್ವಿ ‘ಹಾಗೇ ನೋಡಿಕೊಂಡು ಹೋಗಲು, ನಾನೇನು ಮಾನ್ಯುಮೆಂಟೇ’ ಅಂದಿದ್ದರಂತೆ.
ಇದನ್ನೇ ಸ್ವಲ್ಪ ಬದಲಾಯಿಸಿ ಶಿವಮೊಗ್ಗ ಮಹಾನಗರಪಾಲಿಕೆಗೆ ಹೇಳಬೇಕಾಗಿದೆ.
ಅಂತರ್ರಾಷ್ಟ್ರೀಯ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿಯನ್ನು ನಾಗರಿಕರ ಪರವಾಗಿ ನಿನ್ನೆ ಸನ್ಮಾನಿಸಿತು. ಆ ಮುಖಾಂತರ ಶಿವಮೊಗ್ಗ ಇನ್ನೊಂದು ಸ್ವರ್ಣಗರಿಯನ್ನು ಮೂಡಿಸಿಕೊಂಡಿತು. ಆದರೆ, ಅವರನ್ನು ಅಧಿಕೃತವಾಗಿ ಆಹ್ವಾನಿಸದೇ, ಕಾಟಾಚಾರಕ್ಕೆಂಬಂತೆ, ಯುವದಸರಾದಲ್ಲಿ ಅವರನ್ನು ಸನ್ಮಾನಿಸಿದ್ದು, ಎಷ್ಟರಮಟ್ಟಿಗೆ ಸರಿ ಎಂಬ ಜಿಜ್ಞಾಸೆ ಮೂಡಿದೆ.
ಆ ವಿಜ್ಞಾನಿ ಅಂತರ್ರಾಷ್ಟ್ರೀಯ ಖ್ಯಾತಿ ಹೊಂದಿದ್ದರೂ, ಸರಳ-ಸಜ್ಜನತೆಯಿಂದ ಪಾಲಿಕೆ ಆಹ್ವಾನ ಮನ್ನಿಸಿ ಆಗಮಿಸಿದ್ದರು. ಈ ಆಹ್ವಾನ ಅಧಿಕೃತವಾಗಿ ಇರಲಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಯೊಂದು ಅವರನ್ನು ಕಾರ್ಯಕ್ರಮಕ್ಕೆ ಕರೆಯಿಸಿತ್ತು. ಇದೇ ನೆಪದಲ್ಲಿ ಪಾಲಿಕೆ ಅವರನ್ನು ತನ್ನ ದಸರಾದಲ್ಲಿ ಸನ್ಮಾನ ಮಾಡಿತು. ಆದರೆ, ಅಂತ ಓರ್ವ ವಿಜ್ಞಾನಿಗೆ ಪೌರಸನ್ಮಾನ ಮಾಡಲು, ನಿರ್ದಿಷ್ಟ ವೇದಿಕೆ, ಸಾರ್ವಜನಿಕರ ಸಹಭಾಗಿತ್ವ ಬೇಡವೇ? ಶಿಷ್ಟಾಚಾರ ಎಂಬುದೊಂದಿದೆ ಎನ್ನುವುದಾದರೂ ಪಾಲಿಕೆಗೆ ಗೊತ್ತಿದೆಯೇ? ಇದು ಒಂದು ರೀತಿಯಲ್ಲಿ ಆ ಶ್ರೇಷ್ಠ ವಿಜ್ಞಾನಿಗೆ ಅಪಚಾರ ಮಾಡಿದಂತಾಗಲಿಲ್ಲವೇ ಎಂಬ ಪ್ರಶ್ನೆಗಳಿಗೆ ಉತ್ತರಿಸುವವರಾರು?
ಪಾಲಿಕೆ ಯುವದಸರಾ ಸಮಿತಿ ಅಧ್ಯಕ್ಷ ವಿಶ್ವನಾಥ (ಕಾಶಿ)ಗಾಗಲಿ ಅಥವಾ ಪಾಲಿಕೆಗಾಗಲಿ ಆ ವಿಜ್ಞಾನಿ ಶಿವಮೊಗ್ಗಕ್ಕೆ ಬರುವವರೆಗೂ, ಅವರ ಬಗ್ಗೆ ತಿಳಿದಿರಲಿಲ್ಲ. ಇಲ್ಲಿಗೆ ಬಂದಾಗ ಇವರಿಗೆ ಇದ್ದಕಿದ್ದಂತೆ ಜ್ಞಾನೋದಯವಾಗಿದೆ. ತತಕ್ಷಣಕ್ಕೆ ಇಲ್ಲಿ ನಡೆಯುತ್ತಿದ್ದ ದಸರೋತ್ಸವ ಕಣ್ಣಿಗೆ ಕಂಡಿದ್ದು, ಅದರಲ್ಲಿಯೇ ಸನ್ಮಾನ ಮಾಡಿ ಬೀಗಿದ್ದಾರೆ. ನಿಸ್ಪಹ, ನಿಗರ್ವಿ ವಿಜ್ಞಾನಿ ಇದರ ಬಗ್ಗೆ ಚಕಾರವೆತ್ತದೆ, ಸನ್ಮಾನಿಸಿಕೊಂಡಿದ್ದಾರೆ.
ಆದರೆ, ನಾಗರಿಕರಾದ ನಾವಾದರೂ ನಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಲ್ಲವೇ ?
ಶಾಸಕರು ಜನಪ್ರತಿನಿಧಿ ಸರಿ, ಆದರೆ ಅವರ ಪತ್ನಿ ನೇರವಾಗಿ ದಸರಾ ವೇದಿಕೆಗೆ ಪ್ರವೇಶಪಡೆದುಕೊಳ್ಳುತ್ತಾರೆ. ಮಹಿಳಾ ದಸರಾದಲ್ಲಿ ಶಾಸಕ ಪ್ರಸನ್ನಕುಮಾರ್ ಪತ್ನಿಗೂ ಅವಕಾಶ ಮಾಡಿಕೊಟ್ಟಿರುವುದು ಹುಬ್ಬೇರುವಂತೆ ಮಾಡಿದೆ. ಸಾಧಕರನ್ನು ವೇದಿಕೆಗೆ ಕರೆದು, ಗೌರವಿಸುವುದು ಲೋಕಾರೂಢಿ. ಆದರೆ, ಶಾಸಕರ ಪತ್ನಿ ಯಾವ ಲೆಕ್ಕದಲ್ಲಿ ಸಾಧಕಿ ಎಂಬುದು ಸಾರ್ವಜನಿಕರಿಗೆ ಅರ್ಥವಾಗಿಲ್ಲ. 
ಪಾಲಿಕೆಗೆ ಸಾಧಕರನ್ನು ಹುಡುಕುವ ಮನಸ್ಸಿಲ್ಲವೇ? ಹುಡುಕಿಲ್ಲವೇ? ಅಥವಾ ಶಾಸಕ ಕಮ್ ಪಾಲಿಕೆ ಸದಸ್ಯ ಪ್ರಸನ್ನಕುಮಾರ್‌ರ ಹುಕುಂ ಎನ್ನಬಹುದೇ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಷ್ಟೋ ಮಂದಿ ಎಲೆ ಮರೆಯ ಕಾಯಿಯಂತೆ ಇದ್ದಾರೆ. ಇಂತಹವರ ಕುರಿತಾಗಿ ಹಲವು ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಅಂತಹ ಸಾಧಕರನ್ನು ಗುರುತಿಸಿ, ವೇದಿಕೆಗೆ ಕರೆದು ಸನ್ಮಾನಿಸಬಹುದು. ಅದರ ಬದಲಾಗಿ, ಶಾಸಕರ ಪತ್ನಿ ಎಂಬ ಕಾರಣಕ್ಕಾಗಿ ಅವರನ್ನು ವೇದಿಕೆಗೆ ಕರೆಯಲಾಗುತ್ತದೆ ಎಂದರೆ, ಈ ನಿರ್ಧಾರದ ಹಿಂದೆ ಒತ್ತಡ ಇಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂಬುದು ನಾಗರಿಕ ಅಂಬೋಣ.
* ಚಲನಚಿತ್ರ ದಸರಾದಲ್ಲಿ ಪ್ರದರ್ಶನವಾಗಲಿರುವ ಚಿತ್ರಗಳಲ್ಲಿ ಕೆಲವು ಅದೆಷ್ಟು ಬಾರಿ ವಾಹಿನಿಗಳಲ್ಲಿ ಪ್ರದರ್ಶನವಾಗಿದೆ ಎಂಬುದಕ್ಕೆ ಲೆಕ್ಕವಿಲ್ಲ. ಅವನ್ನೇ ಮತ್ತೆ ಪ್ರದರ್ಶನ ಮಾಡುವುದರ ಹಿಂದಿರುವ ಮರ್ಮವೇನು? 
* ಡೊಳ್ಳು ಕಲಾವಿದರನ್ನು ಮಹಾರಾಷ್ಟ್ರದಿಂದ ಕರೆಸಲಾಗುತ್ತಿದೆ. ಸ್ಥಳೀಯ ಕಲಾವಿದರನ್ನು ಉತ್ತೇಜಿಸಬೇಕಿದ್ದ, ಪಾಲಿಕೆ ನೆರೆಯ ರಾಜ್ಯದ ಕಲಾವಿದರಿಗೆ ಸಂಭಾವನೆ ನೀಡಿ ಕರೆಸುವ ಹಕೀಕತ್ತ್ ಆದರೂ ಏನು ?
* ಜಿಲ್ಲೆಯಾದ್ಯಂತ ಬರ ಪರಿಸ್ಥಿತಿ ಇದೆ. ಈ ಸಮಯದಲ್ಲಿ ದಸರಾಕ್ಕೆ ಸರ್ಕಾರ ಒಂದು ಕೋಟಿ ನೀಡಿದೆ ಎಂದ ಮಾತ್ರಕ್ಕೆ ಅದಷ್ಟನ್ನೂ ಖರ್ಚು ಮಾಡಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರಾ ಪಾಲಿಕೆ ಸದಸ್ಯರು ಹಾಗೂ ಶಾಸಕರು?
* ಇಂತಹ ಮಾತುಗಳು ಕೇಳಿಬರಬಾರದೆಂದೇ ರೈತದಸರಾ ಎಂಬುದನ್ನು ಮಾಡಲಾಗುತ್ತಿದೆಯೇ?
Previous Post

ದಸರಾಗೆ ಕೆಎಸ್ ಆರ್ ಟಿಸಿ ವಿಶೇಷ ಪ್ಯಾಕೇಜ್

Next Post

ಮ್ಯಾಕ್ಸ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೇಬಿ ಸೂಟ್ ಡೆಲಿವರಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮ್ಯಾಕ್ಸ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೇಬಿ ಸೂಟ್ ಡೆಲಿವರಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025

134ನೇ ಫುಟ್ಬಾಲ್ ದುರಂದ್ ಕಪ್’ಗೆ ರಾಷ್ಟ್ರಪತಿಗಳಿಂದ ಚಾಲನೆ | ಏನಿದರ ವಿಶೇಷ?

July 5, 2025

ಆರೋಗ್ಯ ಇಲಾಖೆಯಲ್ಲಿ ಅವೈಜ್ಞಾನಿಕ ವರ್ಗಾವಣೆ ಪುನರ್ ಪರಿಶೀಲಿಸಿ: ಶಾಸಕ ಆರಗ ಜ್ಞಾನೇಂದ್ರ

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025

134ನೇ ಫುಟ್ಬಾಲ್ ದುರಂದ್ ಕಪ್’ಗೆ ರಾಷ್ಟ್ರಪತಿಗಳಿಂದ ಚಾಲನೆ | ಏನಿದರ ವಿಶೇಷ?

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!