Monday, September 8, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜ್ಯೋತಿರ್ವಿಜ್ಞಾನ

ಸರ್ವ ಪಿತೃ ಶ್ರಾದ್ದ ಮಹಾಲಯ

September 16, 2016
in ಜ್ಯೋತಿರ್ವಿಜ್ಞಾನ
0 0
0
Share on facebookShare on TwitterWhatsapp
Read - 2 minutes

ವರ್ಷಕ್ಕೊಮ್ಮೆ ಕನ್ಯಾಮಾಸದ ಕೃಷ್ಣ ಪಾಡ್ಯದಿಂದ ಅಮವಾಸ್ಯೆಯ ವರೆಗಿನ ಹದಿನೈದು ದಿನಗಳ ಈ ಪಕ್ಷವು ಸರ್ವಪಿತೃ ಶ್ರಾದ್ಧ ಕಾಲವಾಗುತ್ತದೆ. ಸಾಮಾನ್ಯವಾಗಿ ಈ ಪಿತೃಕಾರ್ಯ ಮಾಡುವವರು ಅವರವರ ಪಿತೃಗಳ ಮೃತ ತಿಥಿಯಲ್ಲಿ ಮಾಡುವುದು ವಾಡಿಕೆಯಾಗಿದೆ‌ ‌. ಈ ಪಿತೃಕಾರ್ಯವು ಅತ್ಯಂತ ಪವಿತ್ರವೂ, ಪುಣ್ಯಪ್ರದವೂ ಆದಂತಹ ಒಂದು ಸಂಸ್ಕಾರವಾಗಿದೆ. ಬಹಳ ಪೂರ್ವದಲ್ಲಿ ಇದು ಪುರೂರವ ನದೀತೀರದಲ್ಲಿ( ಇದು ಸಿಂಧೂ ನದಿಯ ಒಂದು ಉಪನದಿಯಾಗಿದ್ದು, ಕೃಷ್ಣನ ಕಾಲಾನಂತರ ಹೇಗೆ ಸರಸ್ವತಿಯು ಅಂತರ್ಗಾಮಿಯಾದಳೋ ಹಾಗೆಯೇ ಇದು ಅಂತರ್ಗಾಮಿಯಾಗಿ ಹೋಯಿತು.ಈಗಿನ ಬೆಲೂಚಿ ಪ್ರಾಂತದಲ್ಲಿ ಈ ನದಿಯು ಸಿಂಧೂ ನದಿಯೊಂದಿಗೆ ಸಂಗಮವಾಗಿತ್ತು. ಹೀಗಾಗಿಯೇ ಶ್ರಾದ್ಧ ಮಂತ್ರದಲ್ಲಿ ‘ಪುರೂರವಾರ್ದ್ದೇ ‘ ಎಂದು ಪ್ರಾರಂಭವಾಗುತ್ತದೆ.

ಯಾಕೆ ಮಹಾಲಯ ಕಾರ್ಯ ಮಾಡಬೇಕು?

ಮಹಾಲಯ ಕಾರ್ಯದ ಈ ಕಾಲವು ರವಿ ಚಂದ್ರರು ಪರಸ್ಪರ ಸಮೀಪ ಇರುವ ಕಾಲ. ಇಲ್ಲಿ ಮಂತ್ರದಲ್ಲೂ ‘ ಕನ್ಯಾಗತೇ’ ಎಂದಿದೆ.ಇವರ ಮದ್ಯದಲ್ಲಿರುವ ಸ್ಥಳವೇ ಸ್ವರ್ಗಲೋಕ.ಇದನ್ನು ನಾವು spectrum ಎಂದು ಈಗಿನ ಭಾಷೆಯಲ್ಲಿ ಕರೆಯಬಹುದು. ಇಲ್ಲಿಗೆ ನಮ್ಮ ಪಿತೃಗಳ ಪಯಣವಾಗಬೇಕು.ಅಲ್ಲಿಂದ ಮಳೆಯ ಮೂಲಕವಾಗಿ ಮತ್ತೆ ಇಳೆಗೆ ಇಳಿದು ಭತ್ತ,ಗೋದಿ ಬೆಳೆಯೊಳಗೆ ಈ ಜೀವಾತ್ಮ ( ಜೀನುಗಳು) ಸೇರಿಕೊಂಡು ಮತ್ತೆ ಅದೇ ವಂಶದ ಮಾನವನಲ್ಲಿ ಸೇರಿಕೊಳ್ಳುತ್ತವೆ‌.ನಂತರ ಮನುಷ್ಯ ಜನನ.
ಇದೊಂದು ರೀತಿಯ cycling theory.ಯಾವ ಆಧುನಿಕ ಕಣ್ಣುಗಳಿಗೂ ಕಾಣದಂತಹ ವಿಚಾರ.ಇದನ್ನು ತಿಳಿಯಲು ಮನುಷ್ಯನ ಮೂರನೆಯ ಕಣ್ಣಿಗೆ ಮಾತ್ರ ಸಾಧ್ಯ.ಆದರೆ ಅದೊಂದು ಇದೆಯೇ, ? ಅದು ಸುಳ್ಳು ಎಂದು ವಾದಿಸುವವರಲ್ಲಿ ನಾವು ವಾದ ಮಾಡುವುದು ಅಸಾಧ್ಯ. ಅನುಭವಿಸುವಿಕೆಯೇ ಮೂರನೆಯ ಕಣ್ಣು.ಇದು ಇರುವುದು ಭ್ರೂಮಧ್ಯದಲ್ಲಿ. ಇದನ್ನು ಜಾಗೃತ ( activate) ಗೊಳಿಸಲು ನಮ್ಮ ಉಪಾಸನೆಗಳೇ ಮುಖ್ಯ.
ಹಾಗೆ ತಿಳಿಯಲು ಅಸಾಧ್ಯವಾದುದಕ್ಕೆ ‘ ತಸ್ಮತ್ ಶಾಸ್ತ್ರ ಪ್ರಮಾಣೇಶು ‘ ಎಂದು ಶಾಸ್ತ್ರಗಳಲ್ಲಿ ನಂಬಿಕೆ ಇಟ್ಟು ಅದರ ಪ್ರಕಾರವೇ ನಡೆದುಕೊಳ್ಳುವುದು ಕ್ಷೇಮ.
ಈ ಮಹಾಲಯ ಕಾರ್ಯದಲ್ಲಿ ನಾವು ಜೀವನದಲ್ಲಿ ಯಾರಲ್ಲೆಲ್ಲ , ಯಾವುದರಲ್ಲೆಲ್ಲ ಋಣಿಗಳಾಗಿದ್ದೇವೋ ಅಂತಹ ಗತಿಸಿದವರಿಗೆಲ್ಲಾ ಪಿಂಡ ಪ್ರಧಾನ ಮಾಡುವ ವಿಧಿ ಇದೆ.ಎಲ್ಲ ಬಿಟ್ಟರೆ ಶ್ವಾನಕ್ಕೂ ಒಂದು ಹವಿಸ್ಸಿನ ಭಾಗ ಇಡುವ ಪದ್ಧತಿ ಇದೆ.ನೋಡಿ ಎಂತಹ ಒಂದು ಪದ್ಧತಿ ನಮ್ಮ ಸನಾತನ ವೈದಿಕ ಪರಂಪರೆಯದ್ದು.
ನಮ್ಮ ಆಪ್ತರು, ಪರಿಚಯಸ್ತರು, ದೇಶದ ಮಹಿಮಾನ್ವಿತರು, ದೇಶ ಕಾಯುವ ಸೈನಿಕರು ಯಾರಾದರೂ ಒಬ್ಬರು ಸತ್ತರೆ ಈಗ media ( f b: twitter ) ಇತ್ಯಾದಿಗಳ ಮೂಲಕ ಶ್ರದ್ಧಾಂಜಲಿ ಸಮರ್ಪಿಸುವಂತೆ, ಹುಟ್ಟು ಹಬ್ಬಕ್ಕೆ ಶುಭ ಕೋರುವಂತೆ ಇದೊಂದು ಪಾರಮಾರ್ಥಿಕ ನಮನ. ಪರಿಚಯ ಇಲ್ಲದವರಿಗೆ, ನಮ್ಮ ಅನುಭವದಲ್ಲಿ ಇಲ್ಲದವರಿಗೆ ನಾವು ಶ್ರದ್ಧಾಂಜಲಿಯಾಗಲೀ, ಶುಭಾಶಯಗಳಾಗಲೀ ಹೇಳುತ್ತೇವೆಯೇ? ಹಾಗೆಯೇ ನಮ್ಮ ಅನುಭವದಲ್ಲಿ ಬರುವವರಿಗೆಲ್ಲ ಮಹಾಲಯದಲ್ಲಿ ಪಿಂಡ ತರ್ಪಣಾದಿಗಳನ್ನು ಸಲ್ಲಿಸುವ ಪವಿತ್ರ ಕೆಲಸವಿದೆ. ವಿದ್ಯುತ್ತಾಘಾತೇ ಮೃತಃ ,ಸಿಂಹ ವ್ಯಾಗ್ರಾದಿ ಮುಖೇನ ಹತೇ, ಕೃಷಿಕಾರ್ಯ ಕರ್ಮಯೋಗಿ ಹತೇ ಇತ್ಯಾದಿ ಪ್ರಧಾನಗಳಿವೆ. ಹಿಂದಿನ ಕ್ರಮ ಬೇರೆ. ವಿದ್ಯುತ್ತಿನಿಂದ ಹತ ಎಂದರೆ ನಮ್ಮ ಜೀವನಕ್ಕೆ ಸಹಕರಿಸಿದ ರೈತನು ಸಿಡಿಲಾಘಾತದಿಂದ ಸತ್ತಿದ್ದಿದ್ದರೆ ಎಂಬ ಅರ್ಥ.ಈಗ ವಿದ್ಯುತ್ ಇಲಾಖೆಯ ನೌಕರ ಎಂದೂ ಆಗುತ್ತದೆ.ಸಿಂಹ ವ್ಯಾಗ್ರಗಳಿಂದ ಸತ್ತವರು ಎಂದರೆ forest department ಎಂದು ತಿಳಿಯಬೇಕು. ವಿಚಾರ ಒಂದೆ. ಆದರೆ ಕಾಲಗಳ ರೂಪ ಮಾತ್ರ ವೆತ್ಯಾಸವಷ್ಟೆ.
ಯಾರು ಮಹಾಲಯ ಕಾರ್ಯಕ್ಕೆ ಅರ್ಹರು?

೧. ಆ ವ್ಯಕ್ತಿಗೆ ಪಿಂಡಾಧಿಕಾರ ಇರಬೇಕು.ತಂದೆಯ ಉತ್ತರ ಕ್ರಿಯೆ ಮಾಡಿರಬೇಕು.ಅಂದರೆ ತಂದೆ ಇಲ್ಲದವರಿಗೆ ಅಧಿಕಾರವಿದೆ.
೨.ಒಂದೇ ತಾಯಿಯ ಮಕ್ಕಳಲ್ಲಿ ಜೇಷ್ಟನಿಗೆ ಅಧಿಕಾರ.ಅವನಿಲ್ಲದಿದ್ದರೆ ಕನಿಷ್ಟನಿಗೆ. ಅವನೂ ಇಲ್ಲದಿದ್ದರೆ ಉಳಿದವರು ಯಾರೂ ಆಗಬಹುದು.
ಕೆಲವೆಡೆ ದೊಡ್ಡ ಕುಟುಂಬದಲ್ಲಿ ಎಲ್ಲೋ ಒಂದು ಕಡೆ ಹಾಕುತ್ತಾರೆ. ನಮಗೇನಿಲ್ಲ ಎಂದು ಸುಮ್ಮನಿರುವವರಿದ್ದಾರೆ. ಇದು ತಪ್ಪು. ಇಲ್ಲಿ ತಂದೆಯ ಭಾಗದ ಸಪತ್ನೀಕ ಪಿತು ಪಿತಾಮಹ ಪ್ರಪಿತಾಮಹರಿಗೆ ಆರು ಪಿಂಡ, ತಾಯಿಯ ಕಡೆಯ ಸಪತ್ನೀಕ ಪಿತುಃಪಿತಾಮಃ ಪ್ರಪಿತಾಮಃ ಎಂಬ ಆರು ಪಿಂಡ.ಒಟ್ಟಿಗೆ ಹನ್ನೆರಡು ಪಿಂಡ. ಕೊನೆಗೆ ಜ್ಯೇಷ್ಟಾದಿ ಕನಿಷ್ಟಾದಿ ಎಂಬ ಒಂದು ಪಿಂಡ. ಇದು ಪ್ರಧಾನ ಪಿಂಡಗಳು.ನಂತರ ಇದರ ಸುತ್ತು ( ದಿಕ್ಕುಗಳ ಕಲ್ಪನೆ ಇದೆ) ಬಂದು, ಸೇವಕರು,ಅಲ್ಲದೆ ಮೇಲೆ ಹೇಳಿದ ಗತಿಸಿದವರಿಗೆ ಪಿಂಡ ಇಡುವ ಪದ್ಧತಿ.
ಕುಟುಂಬ ಬೆಳೆಯುತ್ತಾ ಹೋದಂತೆ ತಾಯಿಯೂ ಬೇರೆ ಬೇರೆ ಆಗುತ್ತಾ ಹೋಗುತ್ತದೆ.ಆಗ ಅವರ ಮಕ್ಕಳಿಗೆ ಅರ್ಹತೆ ಬರುತ್ತದೆ. ಉದಾಹರಣೆಗೆ ಅಜ್ಜನ ನಾಲ್ಕು ಗಂಡುಮಕ್ಕಳ ಮಕ್ಕಳಿಗೆ ಮಹಾಲಯ ಬೇರೆ ಬೇರೆ ಬೇರೆಯೇ ಆಗಬೇಕು.ಸುಲಭವಾಗಿ ಹೇಳಬೇಕೆಂದರೆ ಒಂದು ತಾಯಿಯ ಸಂತಾನದಲ್ಲಿ ಒಬ್ಬರು ಮಾಡಿದರೆ ಸಾಕು. ಕೆಲವೆಡೆ ತಾಯಿ ಅಜ್ಜಿ ಜೀವಂತ ಇದ್ದರೆ ಅವರಿಗೆ ಪಿಂಡ ಹಾಕುವ ಕ್ರಮವಿಲ್ಲ.ಅದಕ್ಕಾಗಿ ಅವರ ಸಾಲಿನಲ್ಲಿ ಗತಿಸಿದ ಅವರ ಹಿರಿಯರಿಗೆ ಸ್ಥಾನ. ಉದಾಹರಣೆಗೆ ತಾಯಿ, ತಾಯಯಿ ತಾಯಿ ಜೀವಂತವಾಗಿದ್ದರೆ ಅಲ್ಲಿ ಮಾತೃ ಪಿಂಡದ ಜಾಗದಲ್ಲಿ ವೃದ್ಧ ಪ್ರಪಿತಾಮಹಿ ,ವೃದ್ಧ ಪ್ರಪಿತಾಮಹಿ ಎಂದು ಪಿಂಡ ಇಡಬೇಕು.

ಮೋಕ್ಷ ಹೊಂದಿದವರಿಗೆ ?

ಇದು ಒಳ್ಳಯ ಪ್ರಶ್ನೆ. ಯಾರು ಪುನರ್ಜನ್ಮ ಇಲ್ಲದ ಮೋಕ್ಷವಾಸಿಗಳಾಗಿದ್ದಾರೆ ಎಂಬುದು ನಮಗೇನು ಗೊತ್ತು? ಮಂತ್ರದಲ್ಲಿ ‘ಸ್ವರ್ಗಂ ಗಚ್ಛತು ಪಿತರಃ’ ಎಂದೇ ಹೇಳಿದೆಯೇ ಹೊರತು ‘ ಮೋಕ್ಷಂ ಗಚ್ಛತು ಪಿತರಃ’ ಎಂದು ಹೇಳಿಲ್ಲ. ಅಂದರೆ ನೀವು ಮಾಡಿದ ಪುಣ್ಯಾನುಸಾರ ಸ್ವರ್ಗ ಸುಖ ಅನುಭವಿಸಿ ಮತ್ತೆ ನಮ್ಮ ವಂಶದಲ್ಲಿ ಹುಟ್ಟಬೇಕು ಎಂಬ ತತ್ವ. ಆದರೂ ಪ್ರಾರಂಭದ ಸಂಕಲ್ಪದಲ್ಲಿ ‘ ಪಿತೃ ಅಕ್ಷಯ ಪುಣ್ಯಲೋಕ ಪ್ರಾಪ್ತ್ಯರ್ಥೇ ಕರ್ಮ ಕರಿಷ್ಯೇ’ ಎಂದು ಹೇಳಿದೆ.ಅರ್ಥಾತ್ ಒಂದೋ ಪುನರ್ಜನ್ಮ ಇಲ್ಲದ, ಕ್ಷಯವಾಗದಂತಹ ಪುಣ್ಯಲೋಕ ಪ್ರಾಪ್ತಿಯಾಗಲೀ, ಅಥವಾ ಸ್ವರ್ಗ ಪ್ರಾಪ್ತಿಯಾಗಿ ಮತ್ತೆ ನಮ್ಮ ಉದರದಲ್ಲಿ ಜನಿಸಬೇಕು ಎಂಬ ಅರ್ಥ. ಇದೆಲ್ಲಾ ಪುನರ್ಜನ್ಮ ವಿಚಾರ ಸಂಹಿತೆಗಳಲ್ಲಿ, ಗರುಡಪುರಾಣಗಳಲ್ಲಿ ಸಾಕಷ್ಟು ವಿಚಾರಗಳಿವೆ. ರಕ್ತ ಸಂಬಂಧಿ ಪಿತೃಗಳು ನಮ್ಮ ವಂಶದಲ್ಲಿ ಜನಿಸಲಿ, ಇತರ ಆವರಣ ಪಿಂಡಗಳ ಪಿತೃಗಳಿಗೆ ಸ್ವರ್ಗವೂ,ಉತ್ತಮ ಜನ್ಮವೂ ಬರಲಿ ಎಂಬ ಉದ್ದೇಶದ ಕ್ರಿಯೆಯೇ ಸರ್ವ ಪಿತೃ ಮಹಾಲಯವಾಗಿದೆ.

Previous Post

ಪೊಲೀಸ್ ಇಲಾಖೆಗೆ ನೇಮಕಕ್ಕೆ ಅಧಿಸೂಚನೆ

Next Post

ಮೈಸೂರಿನಲ್ಲಿ ಪಲಿಮಾರು ಶ್ರೀಪಾದರ ಚಾತುರ್ಮಾಸ್ಯವ್ರತ ಕೃಷ್ಣಾರ್ಪಣ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮೈಸೂರಿನಲ್ಲಿ ಪಲಿಮಾರು ಶ್ರೀಪಾದರ ಚಾತುರ್ಮಾಸ್ಯವ್ರತ ಕೃಷ್ಣಾರ್ಪಣ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಹಲವು ವ್ಯಕ್ತಿಗಳು ಒಂದೇ ಪತ್ರದಲ್ಲಿ GPA ಅಧಿಕಾರ ನೀಡಬಹುದೇ?

September 8, 2025

ಮಿಜೋರಾಂ | ಬೈರಾಬಿ-ಸೈರಾಂಗ್ ಅದ್ಭುತ ನೂತನ ರೈಲು ಮಾರ್ಗದ ವಿಶೇಷತೆಯೇನು? ಇಲ್ಲಿದೆ ವಿವರ

September 8, 2025

ಶ್ರೀ ಭಗವದ್ಗೀತಾ ಅಭಿಯಾನ | ನ.29ರಂದು ರಾಜ್ಯಮಟ್ಟದ ಸ್ಫರ್ಧೆ

September 8, 2025

ಪಕ್ಷಮಾಸದ ಪ್ರಯುಕ್ತ ಸೆ.21ರವರೆಗೆ ವಿವಿಧೆಡೆ “ಗರುಡ ಪುರಾಣ” ಧಾರ್ಮಿಕ ಪ್ರವಚನ

September 8, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಹಲವು ವ್ಯಕ್ತಿಗಳು ಒಂದೇ ಪತ್ರದಲ್ಲಿ GPA ಅಧಿಕಾರ ನೀಡಬಹುದೇ?

September 8, 2025

ಮಿಜೋರಾಂ | ಬೈರಾಬಿ-ಸೈರಾಂಗ್ ಅದ್ಭುತ ನೂತನ ರೈಲು ಮಾರ್ಗದ ವಿಶೇಷತೆಯೇನು? ಇಲ್ಲಿದೆ ವಿವರ

September 8, 2025

ಶ್ರೀ ಭಗವದ್ಗೀತಾ ಅಭಿಯಾನ | ನ.29ರಂದು ರಾಜ್ಯಮಟ್ಟದ ಸ್ಫರ್ಧೆ

September 8, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!