ಬೆಂಗಳೂರು, ಆ.31: ಸೆಪ್ಟಂಬರ್ 14 ರಂದು ಒಂದು ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದೆ. ಅಂದು ಬೆ.11 ಗಂಟೆಗೆ ಕಲಾಪ ಆರಂಭವಾಗಲಿದೆ.
ಈ ವಿಶೇಷ ಅಧಿವೇಶನದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಸೂದೆ ಕುರಿತು ಚರ್ಚೆ ನಡೆಯಲಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ರಾಜ್ಯಸಭೆಯಲ್ಲಿ ಜಿಎಸ್ ಟಿ ಮಸೂದೆ ಅಂಗೀಕಾರ ಪಡೆದಿತ್ತು. ಸದ್ಯ ಈ ಮಸೂದೆಗೆ ಕನಿಷ್ಟ ಹದಿನೈದು ರಾಜ್ಯಗಳಲ್ಲಿ ಅಂಗೀಕಾರವಾಗಬೇಕು. ಇದಕ್ಕೆ ಬೆಂಬಲ ನೀಡುವಂತೆ ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕವನ್ನೂ ಪ್ರಧಾನಿ ಮೋದಿ ಸರ್ಕಾರ ಕೋರಿತ್ತು. ಈ ಕುರಿತು ಪ್ರಧಾನಿಯೊಂದಿಗೆ ಮಾತುಕತೆ ನಡೆಸಿ ಮಂಗಳವಾರ ರಾತ್ರಿ 8 ಗಂಟೆಗೆ ರಾಜ್ಯಕ್ಕೆ ಸಚಿವ ಮಹದೇವಪ್ಪ ವಾಪಸ್ಸಾಗಿದ್ದಾರೆ.
Discussion about this post