No Result
View All Result
ಪಶ್ಚಿಮ ಬಂಗಾಳದಲ್ಲಿ 200ರ ಗಡಿ ಮುಟ್ಟಿ ಇತಿಹಾಸ ನಿರ್ಮಿಸಿದ ಬಿಜೆಪಿ | ಟಿಎಂಸಿ ಧೂಳಿಪಟ
English Articles

Political Turmoil in Tamil Nadu: BJP Faces Wave of Resignations

by ಕಲ್ಪ ನ್ಯೂಸ್
June 6, 2026
0

Kalpa Media House  |  Chennai  | A major political development is unfolding in Tamil Nadu as a series of resignations...

Read moreDetails
ಶಿವಮೊಗ್ಗಕ್ಕೆ ಇಂಡಿಗೋ ಬೆನ್ನಲ್ಲೇ ಸ್ಪೈಸ್ ಜೆಟ್ ವಿಮಾನ ಸೇವೆಯೂ ಸ್ಥಗಿತ | ಕಾರಣವೇನು?

SpiceJet Flights to Shivamogga Suspended After IndiGo Exit | What’s the Reason?

June 6, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

India Dominates World Yogasana Championship 2026, Wins 5 Golds on Opening Day

June 6, 2026
INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8

INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8

June 5, 2026
From the Village Tracks to International Triumphs: The Inspiring Saga of Geetha A. Shetty

From the Village Tracks to International Triumphs: The Inspiring Saga of Geetha A. Shetty

June 5, 2026
  • Advertise With Us
  • Grievances
  • About Us
  • Contact Us
Sunday, June 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಜಕೀಯ

20 ಯೋಧರ ಹತ್ಯೆ: ಮಲಾಲಾ, ರಮ್ಯಾ ಎಂಬ ಶಾಂತಿದೂತೆಯರು ಎಲ್ಲಿ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 19, 2016
in ರಾಜಕೀಯ
0
Share on FacebookShare on TwitterShare on WhatsApp
ಒಬ್ಬರು ನೊಬೆಲ್ ಶಾಂತಿ ಪ್ರಶಸ್ತ ವಿಜೇತೆ, ಇನ್ನೊಬ್ಬರು ಸಾಮಾಜಿಕ ನ್ಯಾಯ ಹಾಗೂ ಜಾತ್ಯತೀತತೆಯ(?)ನ್ನು ಹಾಸು ಹೊದ್ದಕೊಂಡಿರುವ ಪಕ್ಷದ ನಾಯಕಿ(?).  ಆ ಇಬ್ಬರೂ ಮಹಿಳಾಮಣಿಗಳು ಸ್ವರ್ಗದ ಹೇಳಿಕೆ ನೀಡಿ ಇನ್ನೂ ತಿಂಗಳೂ ಸರಿಯಾಗಿ ಕಳೆದಿಲ್ಲ, ಆಗಲೇ ಆ ಸ್ವರ್ಗವಾಸಿಗಳ ಶಾಂತಿಯಿಂದ ಕೂಡಿದ ನರಕ ದರ್ಶನ ಜಮ್ಮು ಕಾಶ್ಮೀರದ ಉರಿಯಲ್ಲಿ ಕಾಣಿಸಿಕೊಂಡಿದೆ.
ನಿನ್ನೆ ಉರಿಯಲ್ಲಿ ನಡೆದ ಭೀಕರ ದಾಳಿಯಲ್ಲಿ 20 ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ದುಃಖದ ಸಂದರ್ಭದಲ್ಲಿ, ಮೇಲೆ ಹೇಳಿದ ಇಬ್ಬರೂ ಶಾಂತಿ ಪಾಲಕರು ಹಾಗೂ ಬೋಧಕರು ಯಾಕೋ ಕಣ್ಮರೆಯಾಗಿದ್ದಾರೆ.
ಆ ಇಬ್ಬರು ಶಾಂತಿ ಪಾಲಕ(?)ರಲ್ಲಿ ಓರ್ವ ಶಾಂತಿಧೂತೆ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಯೂಸುಫ್ ಮಲಾಲಾ(ಆದರೆ ಈ ಹುಡುಗಿ ಎಂದು ನೊಬೆಲ್ ಪಡೆಯಲು ಅದೇನು ಶಾಂತಿ ಕಾಪಾಡಲು ಹೋರಾಡಿದಳೂ ಎನ್ನುವುದು ಇಂದಿಗೂ ಯಕ್ಷ ಪ್ರಶ್ನೆಯಾಗಿದೆ).
ಈಕೆ ಕೆಲವು ದಿನಗಳ ಹಿಂದೆ ಹೇಳಿಕೆಯೊಂದನ್ನು ನೀಡಿದ್ದಳು. “ಭಾರತೀಯ ಯೋಧರು ಗಡಿಯಲ್ಲಿ ಶಾಂತಿ ಕಾಪಾಡಬೇಕು, ಬಂದೂಕು ಕೆಳಗಿಡಬೇಕು. ಕಾಶ್ಮೀರ ಜನರಿಗೆ ಮೂಲಭೂತ ಹಕ್ಕುಗಳು ದೊರೆಯಬೇಕು. ಅವರು ಸ್ವತಂತ್ರ್ಯವಾಗಿ, ಯಾವುದೇ ಭಯ  ಇಲ್ಲದೇ ಜೀವಿಸಬೇಕು. ಆದರೆ, ಆಕೆ ಈ ಮಾತನ್ನು ಹೇಳುವಾಗ ಭಾರತೀಯ ಯೋಧರನ್ನು ಉದ್ದೇಶಿಸಿ ಹೇಳಿದಳೇ ಹೊರತು, ನೂರಾರು ಭಾರತೀಯ ಯೋಧರನ್ನು ಕೊಂದ, ಸಾವಿರಾರು ಭಾರತೀಯ ಸೈನಿಕರನ್ನು ಗಾಯಾಳುಗಳನ್ನಾಗಿ ಮಾಡಿದ ನೀಚ ಪಾಕಿಸ್ಥಾನದ ಯೋಧರು ಹಾಗೂ ಪಾಕ್ ಸೇನೆಯ ಪ್ರಾಯೋಜಿತ ಉಗ್ರರ ಕೃತ್ಯಗಳು ಅವಳಿಗೆ ಕಾಣಲಿಲ್ಲ.
ಆ ಹುಡುಗಿ ಹೇಳಿ ಇನ್ನೂ ಒಂದು ತಿಂಗಳೂ ಸಹ ಕಳೆದಿಲ್ಲ. ಆಗಲೇ ಆಕೆ ಹೇಳಿದ ಶಾಂತಿ ದೂತರು ಅಟ್ಟಹಾಸ ಮೆರೆದಿದ್ದಾರೆ. ಈಗ ಆಕೆಯನ್ನು ಕೇಳಬೇಕಿದೆ. ಭಾರತೀಯ ಗಡಿಯನ್ನು ಮುರಿದು, ಸೇನಾ ಮುಖ್ಯ ಕಚೇರಿಯ ಮೇಲೆ ದಾಳಿ ನಡೆಸಿ, ನಮ್ಮ ಸೈನಿಕರನ್ನು ಕೊಂದದ್ದು ಯಾರು? ಮಲಗಿದ್ದ ಯೋಧರ ಮೇಲೆ ದಾಳಿ ಮಾಡಿದ ನಪುಂಸಕರು ಯಾರು? ಇದೇ ಏನು ನೀನು ಹೇಳಿದ ಮೂಲಭೂತ ಹಕ್ಕುಗಳು? ಕೊಲ್ಲುವದೇ ನಿಮ್ಮ ಮೂಲಭೂತ ಹಕ್ಕೇ ಯೂಸುಫ್ ಮಲಾಲಾ?
ಈ ಅಪ್ರಭುದ್ದ ಹುಡುಗಿ ಅದಾವ ಲೆಕ್ಕಾಚಾರದಲ್ಲಿ ಸೇನೆಯ ಶಾಂತಿ ಕುರಿತು, ಪಾಕ್ ಸೇನೆಯ ಪರ ವಕಾಲತ್ತು ವಹಿಸಿದಳು? ನಿನ್ನೆ ನಡೆದ ದಾಳಿಯ ವೇಳೆ ಭಾರತೀಯ ಯೋಧರ ಮೇಲೆ ಗ್ರೆನೇಡ್ ಎಸೆದವರು, ಗುಂಡಿನ ಮಳೆಗರೆದವರು ಮುಗ್ದರೆ?  ಶಾಂತಿಯಿಂದಿದ್ದ ಗಡಿಯಲ್ಲಿ, ಗಡಿ ಬೇಲಿಯನ್ನು ಮುರಿದು, ಭೀಕರ ದಾಳಿ ನಡೆಸಿ ಅಶಾಂತಿ ಮೂಡಿಸಿದ ಉಗ್ರರು ಶಾಂತಿಪ್ರಿಯರೇ ಮಲಾಲಾ?  ಪಾಕ್ ಪರ ವಕಾಲತ್ತು ವಹಿಸುತ್ತೀಯಲ್ಲಾ ಮಲಾಲಾ ಭೇಟಿ.. ಬಲೂಚಿಸ್ಥಾನದಲ್ಲಿ ಭೀಕರವಾಗಿ ಜನರನ್ನು ಪಶುಗಳಿಗಿಂತಲೂ ಕ್ರೂರವಾಗಿ ಹತ್ಯೆ ಮಾಡುತ್ತಿರುವವರು ಯಾರು? 5 ವರ್ಷದ ಹೆಣ್ನು ಮಗುವಿನ ಮೇಲೆ ಅತ್ಯಾಚಾರ ಮಾಡಿದವರು ಮಾನವ ಹಕ್ಕು ರಕ್ಷಕರೇ? ಶಾಂತಿ ಹಾಗೂ ಮಾನವ ಹಕ್ಕು ಕುರಿತಾಗಿ ಮಾತನಾಡುವ ನಿನಗೆ ಪಾಕಿಸ್ಥಾನ ಸೇನೆಯಲ್ಲಿ ಹೆಣ್ಣುಮಕ್ಕಳನ್ನು ಭೋಗದ ವಸ್ತುವನ್ನಾಗಿ ಮಾಡಿಕೊಂಡಿರುವುದು ಕಾಣುವುದಿಲ್ಲವೇ?
ಇಷ್ಟೆಲ್ಲಾ ನೀಚತನ, ರಾಕ್ಷಸೀ ಕೃತ್ಯಗಳು ನಿನ್ನ ಪಾಕಿಸ್ಥಾನದಲ್ಲಿ ಇಟ್ಟುಕೊಂಡು ನಮಗೆ ಬುದ್ಧಿ ಹೇಳುತ್ತೀಯ ನೀನು. ಆದರೆ, ನಿನಗೆ ಮಾತ್ರ ಆ ನಿನ್ನ ಶಾಂತಿದೂತರ ನಾಡಾದ ಪಾಕಿಸ್ತಾನದಲ್ಲಿ ನೆಲೆಸುವುದು ಸಾಧ್ಯವಾಗದೇ ನೆಮ್ಮದಿಯಾಗಿ ಲಂಡನ್ ನಲ್ಲಿದ್ದೀಯಾ. ಮಲಾಲಾ ಭೇಟಿ, ಇನ್ನೊಮ್ಮೆ ಭಾರತಕ್ಕೆ ಉಚಿತ ಸಲಹೆ ನೀಡುವ ಮುನ್ನ ಕೊಳೆತು ನಾರುತ್ತಾ, ರಾಕ್ಷಸರ ಕಾರ್ಖಾನೆಯಾಗಿರುವ ನಿನ್ನ  ದೇಶದ ಕುರಿತಾಗಿ ಮೊದಲು ಚಿಂತಿಸು.
ಮತ್ತೊಬ್ಬ ಮಹಾನ್ ನಾಯಕಿ(?) ರಮ್ಯಾ ಎಂಬ ಶಾಂತಿದೂತೆ
ಮಲಾಲಾ ನಂತರ ಬಂದರೆ ನಮ್ಮ ಕರುನಾಡಿನ ಮಾಜಿಯಾಗುತ್ತಿರುವ ಚಿತ್ರನಟಿ, ಮಾಜಿಯಾಗಿರುವ ಸಾಂಸದೆ ಮಿಸ್ ರಮ್ಯಾ ಅವರ ಸರದಿ.
ಅಮ್ನೆಸ್ಟಿ ಇಂಟರ್ ನ್ಯಾಶನಲ್ ಎಂಬ ಸಂಸ್ಥೆಯ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನಮಗೆ ಕಾಶ್ಮೀರದಲ್ಲಿ ಆಜಾದಿ ಬೇಕು ಎಂದು ಕೂಗಿ, ಭಾರತೀಯ ಸೇನೆಯ ವಿರುದ್ಧ ಮಾತನಾಡಿದ್ದರು ಕೆಲವು ದೇಶದ್ರೋಹಿಗಳು. ಅದೇ ವೇಳೆ ಹೇಳಿಕೆ ನೀಡಿದ್ದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪಾಕ್ ಗೆ ಹೋಗುವುದಕ್ಕಿಂತಲೂ ನರಕಕ್ಕೆ ಹೋಗುವುದು ಲೇಸು ಎಂದಿದ್ದರು.
ಆ ವೇಳೆ ಪ್ರತಿಕ್ರಿಯೆ ನೀಡಿದ್ದ ರಮ್ಯಾ, ಪಾಕಿಸ್ಥಾನ ನರಕ ಅಲ್ಲ. ಪಾಕಿಸ್ಥಾನ ಒಂದು ಶಾಂತಿ ಬಯಸುತ್ತಿರುವ ದೇಶ ಎನ್ನುವುದನ್ನು ನಾವು ತಿಳಿಯಬೇಕು. ನಾನು ಪಾಕಿಸ್ಥಾನಕ್ಕೆ ತೆರಳಿದ ವೇಳೆ ಅಲ್ಲಿನ ಜನ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂಬ ಅಣಿಮುತ್ತನ್ನು ಉದುರಿಸಿದ್ದರು.
ಈಗೆಲ್ಲಿ ಅಡಗಿ ಕುಳಿತಿದ್ದಾರೆ ಮಲಾಲಾ ಹಾಗೂ ರಮ್ಯಾ?
ಪಾಕಿಸ್ಥಾನ ಶಾಂತಿ ಬಯಸುವ ನಾಡು ಎಂದು ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆದು, ಒಂದಷ್ಟು ವಿವಾದಗಳನ್ನೂ ಸೃಷ್ಠಿಸಿಕೊಂಡು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸುದ್ಧಿ ಮಾಡಿದ ಮಲಾಲಾ ಹಾಗೂ ರಮ್ಯಾ ಎಂಬ ಇಬ್ಬರು ಶಾಂತಿ ಪ್ರತಿಪಾದಕರು ಈಗೆಲ್ಲಿ ಹೋಗಿದ್ದಾರೆ.
ನೀವು ಹೇಳಿದ ಆ ಶಾಂತಿ ಬಯಸುವ ನಾಡಿನಿಂದ ಬಂದ ಕಲಿಯುಗ ರಾಕ್ಷಸರು ಭಾರತೀಯ ಸೇನೆಯ 20 ಯೋಧರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಈಗ ವಿಚಾರದಲ್ಲಿ ಮಾತನಾಡಲು, ಪಾಕ್ ನ ಕೃತ್ಯವನ್ನು ಖಂಡಿಸಲು ನಿಮ್ಮ ನಾಲಿಗೆಗಳು ಬಿದ್ದು ಹೋಗಿದೆವೆಯೇ?
ಕಡೆಯಪಕ್ಷ ಮೃತರಾದ ಭಾರತೀಯ ಯೋಧರ ಕುರಿತಾಗಿ ಒಂದು ಸಂತಾಪದ ಮಾತೂ ನಿಮ್ಮಗಳ ಬಾಯಿಂದ ಬಂದಿಲ್ಲ ಎಂದರೆ ನಿಮ್ಮ ನೈತಿಕತೆ, ನಿಮ್ಮ ನೀಚತನ ಎಂತಹದ್ದು ಎನ್ನುವುದು ತಿಳಿಯುತ್ತದೆ. ಮಾತ್ರವಲ್ಲ ಗೋಮುಖ ವ್ಯಾಘ್ರದ ಮುಖವಾಡ ಧರಿಸಿರುವ ನಿಮ್ಮ ಜಾತ್ಯತೀತತೆ ಹಾಗೂ ಕಪಟವೇಷ ಕಳಚುತ್ತಿದೆ.
ಕೇಳಮ್ಮಾ ಮಲಾಲಾ…
ನಾವೂ ಶಾಂತಿದೂತರು ಎಂದು ಬಿಂಬಿಸಿಕೊಳ್ಳಲು ಅಕಸ್ಮಾತ್ ಆಗಿ ನಿನಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಕೊಡಿಸಲಾಗಿದೆ. ಅಷ್ಟೇ ಹೊರತು ನೀನೇನು ಶಾಂತಿ ಪ್ರತಿಷ್ಠಾಪಿತಳಲ್ಲ. ಪ್ರಪಂಚದ ಶಾಂತಿಯನ್ನು ಬೇಡ, ನಿನ್ನ ದೇಶದಲ್ಲಿ ಶಾಂತಿಯನ್ನು ಕಾಪಾಡಲು ನಿನ್ನ ಕೊಡುಗೆಯೇನು ಎನ್ನುವುದನ್ನು ಮೊದಲು ಚಿಂತಿಸಿ. ಆ ಕುರಿತು ಚಿಂತಿಸಿದರೆ, ನೊಬೆಲ್ ಪ್ರಶಸ್ತಿ ಪಡೆದಿದ್ದು ಬಿಟ್ಟರೆ ನಿನ್ನ ಸಾಧನೆ ಶೇ.100 ರಷ್ಟು ಸೊನ್ನೆಯಷ್ಟೆ.. ನೀನು ನೊಬೆಲ್ ಪಡೆದುಕೊಂಡಾಗ ಯಾವ ವಯಸ್ಸಿನಲ್ಲಿ ಇದ್ದಯೋ, ಆ ವಯೋಮಾನದೊಳಗೆ ಪ್ರಪಂಚವೇ ತಿರುಗಿ ನೋಡುವಂತಹ ಸಾಧನೆ ಮಾಡಿದ ಮಕ್ಕಳಿದ್ದಾರೆ ನಮ್ಮ ಭಾರತದಲ್ಲಿ. ಅವರು ನಮ್ಮ ಹೆಮ್ಮೆ, ಅವರ ಮುಂದೆ ನೀನು ನಿಜಕ್ಕೂ ಸೊನ್ನೆ. ಅದೇ ರೀತಿ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಇಡಿಯ ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಅಂಗ. ಇಲ್ಲಿ ಭಾರತೀಯರಿಗೆ ಉಪದೇಶ ನೀಡಿದ ಹಾಗಲ್ಲ. ಹೋಗಿ ನಿನ್ನ ಪಾಕ್ ಗೆ ಹೇಳು, ಕಾಶ್ಮೀರವನ್ನು ಭಾರತಕ್ಕೆ ಬಿಟ್ಟುಕೊಟ್ಟು ಮುಂದಾಗಬಹುದಾದ ಅನಾಹುತದಿಂದ ದೂರವಿರಿ ಎಂದು. ಹೇಳುವ ತಾಕತ್ತಿದೆಯೇ ಚಿಂತಿಸಿ ನೋಡು ಮಲಾಲಾ…
ಹಲೋ ರಮ್ಯಾ ಕೇಳಿ…
ದೇಶ, ಭಾಷೆ ಹಾಗೂ ದೇಶದ ಕುರಿತಾದ ಸೂಕ್ಷ್ಮ ವಿಚಾರಗಳ ಕುರಿತಾಗಿ ಮತ್ತೊಮ್ಮೆ ಹೇಳಿಕೆ ನೀಡುವಾಗ ಸಾವಿರ ಬಾರಿ ಯೋಚಿಸಿ. ಇಲ್ಲವಾದರೆ ನಮ್ಮ ಜನರಿಂದ ನಿಮಗೆ ತಕ್ಕ ಶಾಸ್ತಿ ಖಂಡಿತಾ. ದೇಶದಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳು ಸಾವಿರಾರು ಇವೆ. ನಿಮ್ಮ ಕ್ಷೇತ್ರದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾವೇರಿ ಸಮಸ್ಯೆ ಭೀಕರವಾಗುತ್ತಿದೆ. ಹೋಗಿ ಅದರ ಹೋರಾಟದಲ್ಲಿ ಪಾಲ್ಗೊಳ್ಳಿ. ಎಲ್ಲಕ್ಕೂ ಮುಖ್ಯವಾಗಿ ಕಾಶ್ಮೀರ ಸಮಸ್ಯೆ ಕುರಿತಾಗಿ ಮಾತನಾಡುವ ನಿಮಗೆ, ಕಾಶ್ಮೀರ ಸಮಸ್ಯೆ ಉದ್ಭವವಾಗಲು ನಿಮ್ಮ ಕಾಂಗ್ರೆಸ್ ಪಕ್ಷವೇ ಮೂಲ ಕಾರಣ ಎನ್ನುವುದು ನೆನಪಿರಲಿ.
Share196Tweet123Send
Previous Post

ಕಾವೇರಿ ವಿವಾದ: ಮಧ್ಯಸ್ಥಿಕೆಗೆ ಕೇಂದ್ರ ಆಸಕ್ತಿ

Next Post

ಸಾಗುವಳಿದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಕಾಲಾವಕಾಶ: ಸಚಿವ ಕಾಗೋಡು ತಿಮ್ಮಪ್ಪ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸಾಗುವಳಿದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಕಾಲಾವಕಾಶ: ಸಚಿವ ಕಾಗೋಡು ತಿಮ್ಮಪ್ಪ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ವೆಂಕಟಾಚಲಧಾಮದ 15ನೇ ವಾರ್ಷಿಕೋತ್ಸವ | ಚಿನ್ನದ ಕಿರೀಟ ಸಮರ್ಪಣೆ

ವೆಂಕಟಾಚಲಧಾಮದ 15ನೇ ವಾರ್ಷಿಕೋತ್ಸವ | ಚಿನ್ನದ ಕಿರೀಟ ಸಮರ್ಪಣೆ

June 6, 2026
ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿದ ಕುಮದ್ವತಿ ರೆಸಿಡೆನ್ಷಿಯಲ್ ಸ್ಕೂಲ್ | ಹೇಗಿತ್ತು ಆಚರಣೆ?

ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿದ ಕುಮದ್ವತಿ ರೆಸಿಡೆನ್ಷಿಯಲ್ ಸ್ಕೂಲ್ | ಹೇಗಿತ್ತು ಆಚರಣೆ?

June 6, 2026
ಯುಗಾದಿ | ಯಶವಂತಪುರ-ಹೊಸಪೇಟೆ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು

ತಾಳಗುಪ್ಪ-ಶಿವಮೊಗ್ಗ-ಮೈಸೂರಿನ ನಾಲ್ಕು ರೈಲುಗಳ ಕುರಿತಾಗಿ ಅಪ್ಡೇಟ್

June 6, 2026
ಸಚಿವರ ಅಸಮಾಧಾನ ಆಡಳಿತದ ಮೇಲೆ ಪರಿಣಾಮ: ಸಿ.ಟಿ. ರವಿ

ಸಚಿವರ ಅಸಮಾಧಾನ ಆಡಳಿತದ ಮೇಲೆ ಪರಿಣಾಮ: ಸಿ.ಟಿ. ರವಿ

June 6, 2026
ಶಿವಮೊಗ್ಗ | ಕ್ರೇನ್’ಗೆ ಸಿಲುಕಿ ಬೆಳ್ತಂಗಡಿ ಮೂಲದ ಕಾರ್ಮಿಕ ದಾರುಣ ಸಾವು

ಶಿವಮೊಗ್ಗ | ಕ್ರೇನ್’ಗೆ ಸಿಲುಕಿ ಬೆಳ್ತಂಗಡಿ ಮೂಲದ ಕಾರ್ಮಿಕ ದಾರುಣ ಸಾವು

June 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL