ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಣ್ಣೂರು-ಬೆಂಗಳೂರು ನಡುವಿನ ಎಕ್ಸ್’ಪ್ರೆಸ್ ರೈಲಿನ 7 ಬೋಗಿಗಳ ಮೇಲೆ ಏಕಾಏಕಿ ಬೃಹತ್ ಕಲ್ಲು ಬಂಡೆಗಳು ಉರುಳಿಬಿದ್ದ ಪರಿಣಾಮ ಅವು ಹಳಿ ತಪ್ಪಿದ್ದು, ಸ್ವಲ್ಪದರಲ್ಲಿ ಭಾರೀ ಅನಾಹುತ ತಪ್ಪಿದೆ.
ಇಂದು ಮುಂಜಾನೆ 3.50ರ ಸುಮಾರಿಗೆ ತೊಪ್ಪೂರು-ಶಿವಡಿ ಬಳಿಯಲ್ಲಿ ರೈಲು ಸಂಚರಿಸುವಾಗಿ ಕಲ್ಲು ಬಂಡೆಗಳು ಉರುಳಿಬಿದ್ದಿದೆ. ಪರಿಣಾಮವಾಗಿ 7 ಬೋಗಿಗಳು ಹಳಿ ತಪ್ಪಿವೆ. ರೈಲಿನ ವೇಗ ಹೆಚ್ಚಿಲ್ಲದ್ದ ಕಾರಣ ಭಾರೀ ಅನಾಹುತವೊಂದು ಅದೃಷ್ಠವಷಾತ್ ಸ್ವಲ್ಪದಲ್ಲಿ ತಪ್ಪಿದೆ.ಘಟನೆಯಲ್ಲಿ ಯಾವ ಪ್ರಯಾಣಿಕರಿಗೂ ಯಾವುದೇ ರೀತಿಯಲ್ಲಿ ತೊಂದರೆಯಾಗದೇ ಅಪಾಯದಿಂದ ಪಾರಾಗಿದ್ದಾರೆ. ರೈಲಿನಲ್ಲಿದ್ದ ಎಲ್ಲಾ ೨,೩೪೮ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ನೈಋತ್ಯ ರೈಲ್ವೆ ಅಧಿಕಾರಿಗಳ ತುರ್ತು ಸ್ಪಂದನೆ
ಇನ್ನು, ಘಟನೆ ವಿಚಾರ ತಿಳಿಯುತ್ತಿದ್ದಂತೆಯೇ ಅತಿ ಶೀಘ್ರದಲ್ಲಿ ಅಧಿಕಾರಿಗಳು ಹಾಗೂ ರಕ್ಷಣಾ ತಂಡ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯ ನಡೆಸಿದ್ದು, ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಂಡಿದ್ದಾರೆ.
ಪ್ರಯಾಣಿಕರಿಗೆ ಚಹಾ ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ.https://t.co/gmYRCWOQUZ
— South Western Railway (@SWRRLY) November 12, 2021
ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅಪಘಾತ ಸಂಭವಿಸಿದ ಸ್ಥಳದಿಂದ ಅಧಿಕಾರಿಗಳು ಬಸ್ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಆತಂಕದಲ್ಲಿದ್ದ ಪ್ರಯಾಣಿಕರಿಗೆ ಧೈರ್ಯ ಹೇಳಿದ ಅಧಿಕಾರಿಗಳು ಎಲ್ಲರಿಗೂ ಲಘು ಉಪಹಾರ ಹಾಗೂ ಚಹಾ ವ್ಯವಸ್ಥೆ ಮಾಡಿದ್ದರು.
ಹೆಲ್ಪ್ ಡೆಸ್ಕ್ ಆರಂಭ
ಇನ್ನು, ಘಟನೆ ಹಿನ್ನೆಲೆಯಲ್ಲಿ ರೈಲ್ವೆ ಅಧಿಕಾರಿಗಳು ಬೆಂಗಳೂರು ಕೆಆರ್’ಎಸ್, ಧರ್ಮ ಹಾಗೂ ಯಶವಂತಪುರ ನಿಲ್ದಾಣಗಳಲ್ಲಿ ಹೆಲ್ಪ್ ಡೆಸ್ಕ್ ಆರಂಭಿಸಿದ್ದಾರೆ.ರೈಲು ಸಂಚಾರದಲ್ಲಿ ವ್ಯತ್ಯಯ
ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಈ ಮಾರ್ಗದ ಹಲವು ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಕೆಲವು ರೈಲು ಸಂಚಾರವನ್ನು ರದ್ದು ಮಾಡಲಾಗಿದೆ.
ತ್ವರಿತಗತಿಯ ಪುನಃಸ್ಥಾಪನಾ ಕಾರ್ಯ
ಬಂಡೆಗಳು ಉರುಳಿಬಿದ್ದು ಹಳಿತಪ್ಪಿರುವ ರೈಲಿನ ಬೋಗಿಗಳನ್ನು ಹಳಿಯ ಮೇಲೆ ಪುನಃಸ್ಥಾಪಿಸುವ ಕಾರ್ಯವನ್ನು ನೈಋತ್ಯ ರೈಲ್ವೆ ಅತಿ ಶೀಘ್ರದಲ್ಲಿಯೇ ಮಾಡುತ್ತಿರುವುದು ಶ್ಲಾಘನೆಗೆ ಅರ್ಹವಾಗಿದೆ.
Restoration work in progress at accident spot between Sivadi – Toppuru
📸 Ajay Singh pic.twitter.com/moz9qa9obP
— South Western Railway (@SWRRLY) November 12, 2021
ಬೋಗಿಗಳನ್ನು ಹಳಿಗಳ ಮೇಲೆ ಪುನಃಸ್ಥಾಪಿಸುವ ಕಾರ್ಯವನ್ನು ತಾಂತ್ರಿಕ ಸಿಬ್ಬಂದಿ ತ್ವರಿತಗತಿಯಲ್ಲಿ ನಡೆಸುತ್ತಿದ್ದು, ಶೀಘ್ರದಲ್ಲೇ ಈ ಮಾರ್ಗದ ಸಂಚಾರ ಮರು ಆರಂಭವಾಗುವ ನಿರೀಕ್ಷೆಯಿದೆ.
Restoration in progress
VC^ Ajay Singh pic.twitter.com/7WorWyCoZI— South Western Railway (@SWRRLY) November 12, 2021
ಅಪಘಾತ ಸಂಭವಿಸಿದ ತತಕ್ಷಣವೇ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ, ಲಘು ಉಪಹಾರ, ಚಹಾ ವ್ಯವಸ್ಥೆ ಮಾಡಿ, ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಕ್ರಮ ಕೈಗೊಂಡ ನೈಋತ್ವ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕಲ್ಪ ಮೀಡಿಯಾ ಹೌಸ್ ಹೃತ್ಪೂರ್ವಕವಾಗಿ ಶ್ಲಾಘಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post