No Result
View All Result
Silent Skin Damage in Winter: Children at Higher Risk Than Adults, Doctors Warn
English Articles

Silent Skin Damage in Winter: Children at Higher Risk Than Adults, Doctors Warn

by ಕಲ್ಪ ನ್ಯೂಸ್
January 23, 2026
0

Kalpa Media House  |  Bengaluru, Whitefield | Although winter is considered a comfortable season, doctors warn that cold weather can...

Read moreDetails
Sleep Deprivation and Your Brain: Why Poor Sleep Is a Neurological Risk

Sleep Deprivation and Your Brain: Why Poor Sleep Is a Neurological Risk

January 21, 2026
When faith awakens, legends rise! Watch Kantara: A Legend – Chapter 1 on Zee Kannada on Jan 24th

When faith awakens, legends rise! Watch Kantara: A Legend – Chapter 1 on Zee Kannada on Jan 24th

January 21, 2026
ಕರಾವಳಿಯ ಕಂಠಸಿರಿ ಆರ್.ಜೆ. ನಯನಾ | ಮಾತಿನಲ್ಲೇ ಮೋಡಿ ಮಾಡುವ ಸ್ಫೂರ್ತಿಯ ಚಿಲುಮೆ!

RJ Nayana: The Golden Voice of Coastal Karnataka and a Beacon of Inspiration!

January 20, 2026
Cervical Cancer | Early Detection and Prevention Can Save Lives

Cervical Cancer | Early Detection and Prevention Can Save Lives

January 16, 2026
  • Advertise With Us
  • Grievances
  • About Us
  • Contact Us
Monday, January 26, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

9 ದಿನ ರಾಜ್ಯ ಶಟ್’ಡೌನ್: ಆದೇಶ ಉಲ್ಲಂಘಿಸಿ ಓಡಾಡಿದರೆ ಐಪಿಸಿ ಅಡಿಯಲ್ಲಿ ಕ್ರಿಮಿನಲ್ ಕೇಸ್ ಎದುರಿಸುತ್ತೀರಿ ಎಚ್ಚರ

ಇಂತಹ ಪರಿಸ್ಥಿತಿಗಾಗಿ ಭಾರತೀಯ ದಂಡ ಸಂಹಿತೆಯಲ್ಲಿದೆ ಕಠಿಣ ಕಲಂ: ಹಿರಿಯ ನ್ಯಾಯವಾದಿ ಸುಧೀಂದ್ರ ಅವರ ಮಾಹಿತಿ ಲೇಖನ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 23, 2020
in Special Articles
0
9 ದಿನ ರಾಜ್ಯ ಶಟ್’ಡೌನ್: ಆದೇಶ ಉಲ್ಲಂಘಿಸಿ ಓಡಾಡಿದರೆ ಐಪಿಸಿ ಅಡಿಯಲ್ಲಿ ಕ್ರಿಮಿನಲ್ ಕೇಸ್ ಎದುರಿಸುತ್ತೀರಿ ಎಚ್ಚರ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ರಾಜ್ಯ ಸರ್ಕಾರ ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಕೈಗೊಂಡಿರುವ ಕ್ರಮಗಳ ಪೈಕಿ ಶಂಕಿತ ಕೊರೋನಾ ವೈರಸ್ ಸೋಂಕಿತ ವ್ಯಕ್ತಿಗಳ ಕೈಗೆ ಮುದ್ರೆಯನ್ನು ಒತ್ತಿದೆ. ಅವರಿಗೆ 14 ದಿನಗಳ ಕಾಲ ಮನೆಯಲ್ಲಿಯೇ ಯಾರ ಸಂಪರ್ಕದಲ್ಲಿಯೂ ಇರದಂತೆ ಪ್ರತ್ಯೇಕವಾಗಿರಬೇಕೆಂದು ಹೇಳಿದರೂಸಹ ಅನೇಕರು ಈ ನಿಯಮವನ್ನು ಉಲ್ಲಂಘಿಸಿ ರಸ್ತೆ, ಹೋಟೆಲ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಊರಿಂದೂರಿಗೆ ಸಂಚರಿಸುತ್ತಾ ಸ್ವೇಚ್ಛಾಚಾರ ಪ್ರವೃತ್ತಿ ನಡೆಸುತ್ತಿರುವುದರಿಂದ ಕೊರೋನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡಲು ಕಾರಣವಾಗಿದೆ.

ಎರಡನೆಯದಾಗಿ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಎಲ್ಲಾ ವ್ಯಾಪಾರ ವಹಿವಾಟನ್ನು ಬಸ್, ರೈಲು, ಇತರೆ ವಾಹನಗಳ ಸಂಚಾರ ಎಲ್ಲವನ್ನೂ ಮಾರ್ಚ್ 31ರವರೆಗೆ ಸ್ಥಗಿತಗೊಳಿಸಿ ರಾಜ್ಯವನ್ನು ಲಾಕ್’ಡೌನ್ ಮಾಡಿ ಆದೇಶ ಹೊರಿಸಲು ನಿರ್ಧರಿಸಿ ಸಾರ್ವಜನಿಕರು ಮನೆಬಿಟ್ಟು ಹೊರಗೆ ಬಾರದಂತೆ ನಿರ್ಬಂಧ ವಿಧಿಸಲು ನಿರ್ಧರಿಸಿದೆ. ಒಂದೊಮ್ಮೆ ಸರ್ಕಾರದ ಈ ಆದೇಶವನ್ನು ಯಾವುದೇ ವ್ಯಕ್ತಿಗಳು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಇಂಡಿಯನ್ ಪಿನಲ್ ಕೋಡ್ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ಹೂಡುವ ಸಿದ್ಧತೆ ನಡೆಸಿದೆ.

ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಜವಾಬ್ದಾರಿಯುತ ನಾಗರಿಕರಾಗಿ ಪ್ರತಿಯೊಬ್ಬ ಪ್ರಜೆಯೂ ಸ್ಪಂದಿಸಿ ನಡೆದುಕೊಳ್ಳಬೇಕಾದದ್ದು ಎಲ್ಲರ ಆದ್ಯ ಕರ್ತವ್ಯ. ಈಗಾಗಲೇ ಕೆಲವರು ಮಾಡಿದ ತಪ್ಪಿಗೆ ಅಸಂಖ್ಯಾತ ಅಮಾಯಕರು ಈ ರೋಗದಿಂದ ಬಳಲುವಂತಾಗಿ ಕೆಲವು ಮುಗ್ಧಜೀವಗಳು ಬಲಿಯಾಗಿವೆ.

ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ ಮಾರಕ ರೋಗ ಕೊರೋನಾ ವಿರುದ್ಧ ಹಗಲಿರುಳೆನ್ನದೆ ಪರಿಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇದರ ಪರಿವೆಯಿಲ್ಲದೆ ಕೆಲವರು ಸರ್ಕಾರದ ಅದೇಶವನ್ನು ಉಲ್ಲಂಘಿಸಿ ಸಾರ್ವಜನಿಕವಾಗಿ ಎಲ್ಲೆಂದರಲ್ಲಿ ಓಡಾಡುವ ದಾರ್ಷ್ಟ್ಯವನ್ನು ಪ್ರದಶಿಸುತ್ತಿರುವುದರಿಂದ ಕೊರೋನಾ ರೋಗ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಗೆ ಹಿನ್ನೆಡೆಯುಂಟಾಗುವ ಸಾಧ್ಯತೆಯಿರುವುದರಿಂದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಓಡಾಡುವ ವ್ಯಕ್ತಿಗಳ ವಿರುದ್ದವಾಗಿ ಸರ್ಕಾರ ಐಪಿಸಿ ಸೆಕ್ಷನ್ 188, 269, 270 ಮತ್ತು 271ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ.

ಒಂದೊಮ್ಮೆ ಯಾವುದೇ ವ್ಯಕ್ತಿಗಳು ರಾಜ್ಯ ಲಾಕ್ ಡೌನ್ ಆದ ಸಂದರ್ಭದಲ್ಲಿ ಮನೆಯಿಂದ ಹೊರಬಂದು ಸಾರ್ವಜನಿಕವಾಗಿ ಸ್ವೇಚ್ಛಾಚಾರದಿಂದ ಸಂಚರಿಸಿದರೆ ಅಂತಹವರ ಮೇಲೆ ಈ ಕೆಳಕಂಡ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿದರೆ ಅಂತಹ ವ್ಯಕ್ತಿಗಳು ದಂಡ ಅಥವಾ ಸೆರೆವಾಸ ಅಥವಾ ಎರಡನ್ನೂ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಂತಹ ಕಲಂಗಳ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ.

1)ಐಪಿಸಿ ಕಲಂ 188 ಲೋಕ ನೌಕರನು ವಿದ್ಯುಕ್ತವಾಗಿ ಪ್ರಸ್ಥಾಪಿಸಿದ ಆದೇಶದ ಉಲ್ಲಂಘನೆ (Disobedience to order duly promulgated by public servant) ಸರ್ಕಾರ ಯಾವುದೇ ಕೃತ್ಯವನ್ನು ನಿರ್ದಿಷ್ಠವಾಗಿ ಮಾಡಬಾರದೆಂದು ಉಧ್ಘೋಷಿಸಿದ್ದರೂ ಸಹ ಅದನ್ನು ಉಲ್ಲಂಘಿಸಿ ಯಾವುದೇ ವ್ಯಕ್ತಿ ನಡೆದುಕೊಂಡರೆ ಆತನ ಅಂತಹ ಕೃತ್ಯದಿಂದ ಯವುದೇ ಮನುಷ್ಯನ ಪ್ರಾಣ, ಆರೋಗ್ಯ ಅಥವಾ ಸುರಕ್ಷತೆಗೆ ಅಪಾಯ ಉಂಟಾದರೆ ಅದು ಈಕಲಂ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಪ್ರಸ್ತುತ ಕೊರೋನಾ ರೋಗದ ವೈರಸ್ ಹರಡದಂತೆ ತಡೆಯಲು ಸರ್ಕಾರ ಸಾರ್ವಜನಿಕವಾದ ರಸ್ತೆಯಲ್ಲಿ ನಾಗರಿಕರ ಸಂಚಾರ ನಿರ್ಬಂಧಿಸಿದಾಗ ಅದನ್ನು ಉಲ್ಲಂಘಿಸಿ ಸಂಚರಿಸಿದರೆ ಅದರಿಂದ ಸೋಂಕು ಹರಡುವಂತಾದರೆ ಆಂತಹ ವ್ಯಕ್ತಿಗಳ ಕೃತ್ಯ ಈ ಕಲಂ ಅಡಿಯಲ್ಲಿ ಅಪರಾಧವಗಿದ್ದು ಅಂತಹವರಿಗೆ 6 ತಿಂಗಳ ಸೆರೆವಾಸ ಶಿಕ್ಷೆ ಅಥವಾ 2 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ.

2)ಐಪಿಸಿ ಕಲಂ 269 ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಕನ್ನು ಹರಡುವ ಸಂಭವವಿರುವ ನಿರ್ಲಕ್ಷ್ಯ ಕೃತ್ಯ (Negligent Act Likely to spread infection of Disease dangerous to health).

ಯಾವುದೇ ವ್ಯಕ್ತಿಯು ಪ್ರಾಣಕ್ಕೆ ಅಪಾಯಕಾರಿಯಾದ ಯಾವುದೇ ರೋಗದ ಸೋಂಕನ್ನು ಹರಡುವ ಸಂಭವವಿರುವ ಮತ್ತು ಹಾಗೆಂದು ತಿಳಿದಿರುವ ಅಥವಾ ಆ ರೀತಿ ನಂಬಲು ಕಾರಣವಿರುವ ಯಾವದೇ ಕೃತ್ಯವನ್ನು ಕಾನೂನಿಗೆ ವಿರುದ್ಧವಾಗಿ ಅಥವ ನಿರ್ಲಕ್ಷ್ಯದಿಂದ ಮಾಡಿದರೆ ಅಂತಹ ವ್ಯಕ್ತಿಯ ಕೃತ್ಯವು ಶಿಕ್ಷಾರ್ಹ ಅಪರಾಧವಾಗಿದ್ದು ಆತನಿಗೆ 6ತಿಂಗಳ ಸೆರೆವಾಸದ ಶಿಕ್ಷೆ ಅಥವ ದಂಡ ಅಥವ ಎರಡನ್ನೂ ವಿಧಿಸಲಾಗುತ್ತದೆ.

3)ಐಪಿಸಿಕಲಂ 270 ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಕನ್ನು ಹರಡುವ ಸಂಭವ ವಿರುವ ದ್ವೇಷಪೂರ್ವಕ ಕೃತ್ಯ (Malignant act Likely to spread infection of disease dangerous to Life).

ಯಾವುದೇ ವ್ಯಕ್ತಿಯು ಪ್ರಾಣಕ್ಕೆ ಅಪಾಯಕಾರಿಯಾದ ಯಾವುದೇ ರೋಗದ ಸೋಂಕನ್ನು ಹರಡುವ ಸಂಭವವಿರುವ ಮತ್ತು ಹಾಗೆಂದು ತಿಳಿದಿರುವ ಅಥವಾ ಆ ರೀತಿ ನಂಬಲು ಕಾರಣವಿರುವ ಯಾವುದೇ ಕೃತ್ಯವನ್ನು ದ್ವೇಷ ಪೂರ್ವಕವಾಗಿ ಮಾಡಿದರೆ ಅಂತಹ ವ್ಯಕ್ತಿಯು ಶಿಕ್ಷಾರ್ಹ ಅಪರಾಧಿಯಾಗಿದ್ದು ಅಂತಹ ವ್ಯಕ್ತಿಗೆ 2 ವರ್ಷ ಕಾಲ ಜೈಲುವಾಸ ಅಥವಾ ಜುಲ್ಮಾನ ಅಥವಾ ಎರಡನ್ನೂ ವಿಧಿಸಬಹುದಾಗಿರುತ್ತದೆ.

4)ಐಪಿಸಿ ಕಲಂ270 ರೋಗನಿರೋಧಕ ನಿರ್ಬಂಧ ನಿಯಮವನ್ನು ಉಲ್ಲಂಘಿಸುವುದು. (Disobideience to Quarntain rlue).
ಯಾವುದೇ ನೌಕೆಯನ್ನು ರೋಗ ನಿರೋಧಕ ನಿರ್ಬಂಧದ ಸ್ಥಿತಿಯಲ್ಲಿ ಇರಿಸಲು ಅಥವಾ ತೀರ ಪ್ರದೇಶದೊಂದಿಗೆ ಅಥವಾ ಇತರ ನೌಕೆಗಳೊಂದಿಗೆ ರೋಗ ನಿರೋಧಕ ರೋಗ ನಿರ್ಭಂಧದ ಸ್ಥಿಯಲ್ಲಿರುವ ನೌಕೆಗಳ ಸಂಪರ್ಕವನ್ನು ವಿನಿಮಯಗೊಳಿಲು ಅಥವಾ ಒಂದು ಸೋಂಕು ರೋಗವು ಇರುವ ಸ್ಥಳಗಳಿಗೂ ಇತರ ಸ್ಥಳಗಳಿಗೂ ನಡಡುವೆ ಸಂಪರ್ಕವನ್ನು ತುಂಡರಿಸಲು ಸರ್ಕಾರವು ರಚಿಸಿ ಉದ್ಘೋಷಿಸಿರುವ ಯಾವುದೇ ನಿಯಮವನ್ನು ಯಾವನೇ ವ್ಯಕ್ತಿಯು ತಿಳಿದೂ ಸಹ ಉಲ್ಲಂಘಿಸಿದರೆ ಅಂತಹ ವ್ಯಕ್ತಿಗೆ 6 ತಿಂಗಳ ಜೈಲು ಶಿಕ್ಷೆ ಅಥವಾ ಜುಲ್ಮಾನಾ ಅಥವಾ ಎರಡನ್ನೂ ವಿಧಿಸಲಾಗುತ್ತದೆ.

ಪ್ರಸ್ತುತ ಕೊರೋನಾ ರೋಗದ ವೈರಸ್ ಎಲ್ಲೆಡೆ ಹರಡದಂತೆ ಸರ್ಕಾರ ಕೈಗೊಂಡಿರುವ ನಿರ್ಧಾರಗಳಿಗೆ ನಾಗರಿಕರು ಸಹಕರಿಸಿ ಆ ಆದೇಶದಂತೆ ನಡೆದುಕೊಳ್ಳಬೇಕು. ಒಂದೊಮ್ಮೆ ಈ ನಿಯಮ ಯಾರೇ ಉಲ್ಲಂಘಿಸಿದರೂ ಸಹ ಅವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಐಪಿಸಿಯಲ್ಲಿ ಈ ಮೇಲೆ ಹೇಳಿದ ಕಲಂ ಅಡಿಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಜವಾಬ್ದಾರಿಯುತ ನಾಗರಿಕರಾಗಿ ನಾವೆಲ್ಲರೂ ಸರ್ಕಾರದ ನಿರ್ಧಾರದೊಂದಿಗೆ ಕೈಜೋಡಿಸಿ ಕೊರೋನಾ ವಿರುದ್ಧದ ಈ ಹೋರಾಟದಲ್ಲಿ ಭಾಗಿಯಾಗೋಣ.

ಲೇಖನ: ಕೆ.ಎಸ್.ಸುಧೀಂದ್ರ, ನ್ಯಾಯವಾದಿಗಳು, ಭದ್ರಾವತಿ

Get in Touch With Us info@kalpa.news Whatsapp: 9481252093

Tags: AdvocateCoronaUpdatesInIndiacoronavirus updatesCovid_19indiaCriminal CaseIndian Penal CodeIPC SectionKannadaNewsWebsiteLatestNewsKannadaಐಪಿಸಿಕೊರೋನಾ ವೈರಸ್ಭಾರತೀಯ ದಂಡ ಸಂಹಿತೆ
Share197Tweet123Send
Previous Post

ಕೊರೋನಾ ಎಫೆಕ್ಟ್‌: 9 ದಿನ ರಾಜ್ಯ ಲಾಕ್’ಡೌನ್, ಅನಾವಶ್ಯಕ ಮನೆಯಿಂದ ಹೊರಬಂದರೆ ಜೈಲು, ಸೆಕ್ಷನ್ ಮುಂದುವರಿಕೆ

Next Post

ಕೊರೋನಾ ಹಿನ್ನೆಲೆ: ಶಿವಮೊಗ್ಗ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಕಂಟ್ರೋಲ್ ರೂಂ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕೊರೋನಾ ಹಿನ್ನೆಲೆ: ಶಿವಮೊಗ್ಗ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಕಂಟ್ರೋಲ್ ರೂಂ

ಕೊರೋನಾ ಹಿನ್ನೆಲೆ: ಶಿವಮೊಗ್ಗ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಕಂಟ್ರೋಲ್ ರೂಂ

Leave a Reply Cancel reply

Your email address will not be published. Required fields are marked *

  • Trending
  • Latest
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

January 21, 2026
ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

January 20, 2026
ಶಿಮುಲ್ ಅಧ್ಯಕ್ಷಗಾದಿ ಚುನಾವಣೆ ಅಸಿಂಧು: ಎಸಿ ಸೇರಿ ಇಬ್ಬರಿಗೆ ಕೋರ್ಟ್ ದಂಡ

ಶಿವಮೊಗ್ಗ | ಕುಂಸಿಯ 25 ವರ್ಷದ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ | ಕಾರಣವೇನು?

January 22, 2026
ಶ್ರೀ ಮದ್ವನವಮಿ | ಜ27ರಂದು ವಿ. ಅಶೋಕಾಚಾರ್ಯ ಜೋಶಿ ಇವರಿಂದ ಉಪನ್ಯಾಸ

ಶ್ರೀ ಮದ್ವನವಮಿ | ಜ27ರಂದು ವಿ. ಅಶೋಕಾಚಾರ್ಯ ಜೋಶಿ ಇವರಿಂದ ಉಪನ್ಯಾಸ

January 26, 2026
ದೇಶ್ ಸಿಂಧೂರ್ ಸಂಭ್ರಮ | ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ದೇಶ್ ಸಿಂಧೂರ್ ಸಂಭ್ರಮ | ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

January 26, 2026
ಜ.28 – ಫೆ.1ರವರೆಗೆ 61ನೇ ನಾದಜ್ಯೋತಿ ಸಂಗೀತ ಸಂಭ್ರಮ

ಜ.28 – ಫೆ.1ರವರೆಗೆ 61ನೇ ನಾದಜ್ಯೋತಿ ಸಂಗೀತ ಸಂಭ್ರಮ

January 26, 2026
ಗಣರಾಜ್ಯೋತ್ಸವ: ಸಂವಿಧಾನದ ಸಂಭ್ರಮ ಮತ್ತು ಪ್ರಜಾಪ್ರಭುತ್ವದ ಹಬ್ಬ

ಗಣರಾಜ್ಯೋತ್ಸವ: ಸಂವಿಧಾನದ ಸಂಭ್ರಮ ಮತ್ತು ಪ್ರಜಾಪ್ರಭುತ್ವದ ಹಬ್ಬ

January 26, 2026
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವತಿಯಿಂದ 77 ನೇ ಗಣರಾಜ್ಯೋತ್ಸವ ಆಚರಣೆ

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವತಿಯಿಂದ 77 ನೇ ಗಣರಾಜ್ಯೋತ್ಸವ ಆಚರಣೆ

January 26, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL