ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಬೈಂದೂರು |
ಬೈಂದೂರು-ರಾಣೆಬೆನ್ನೂರನ್ನು Shivamogga-Byndooru ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 766(ಸಿ)ಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇದಕ್ಕಾಗಿ 1012.75 ಕೋಟಿ ರೂ.ಗಳ ಅನುದಾನಕ್ಕೆ ಮಂಜೂರಾತಿ ನೀಡಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ಕರಾವಳಿ ಪ್ರದೇಶ ಬೈಂದೂರಿನಿಂದ ಬಯಲುಸೀಮೆಯ ರಾಣೆಬೆನ್ನೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ಅಗಲೀಕರಣ ಮಾಡಿ ಅಭಿವೃದ್ಧಿಪಡಿಸಲು ಕೇಂದ್ರ ಭೂಸಾರಿಗೆ ಮಂತ್ರಾಲಯವನ್ನು ಕೋರಲಾಗಿತ್ತು. ಇದಕ್ಕೆ ಸಚಿವಾಲಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಳೆದ ವರ್ಷ ಈ ಹೆದ್ದಾರಿಯ 7 ಕಿರು ಸೇತುವೆಗಳ ಹಾಗೂ 27.70 ಕಿಮೀ ದ್ವಿಪಥ ರಸ್ತೆ ನಿರ್ಮಾಣದ ಒಟ್ಟು 238.70 ಕೋಟಿ ರೂ.ಗಳ ಡಿಪಿಆರ್’ಗೆ ಮಂಜೂರಾತಿ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

Also read: ತಿಪಟೂರಿನ ಮಹೇಶ್’ಗೆ ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್’ಡಿ

ಯಾವೆಲ್ಲಾ ನಗರಗಳನ್ನು ಸಂಪರ್ಕಿಸಲಿವೆ?
ಬೈಂದೂರು-ಕೊಲ್ಲೂರು-ನಗರ-ಹೊಸನಗರ-ಆನಂದಪುರ-ಶಿಕಾರಿಪುರ- ಮಾಸೂರು- ರಟ್ಟೆಹಳ್ಳಿ-ರಾಣೆಬೆನ್ನೂರು.











Discussion about this post