ಕಲ್ಪ ಮೀಡಿಯಾ ಹೌಸ್ | ಸೊರಬ |
ಮಕ್ಕಳ ಕಲಿಕಾ ಹಬ್ಬಕ್ಕೆ ತಾಲ್ಲೂಕಿನಾದ್ಯಂತ ಮಕ್ಕಳು, ಪೋಷಕರು, ಶಿಕ್ಷಕರಾದಿಯಾಗಿ ಉತ್ಸಾಹ ತೋರಿಸಿದ್ದು, ಗ್ರಾಮಾಂತರ ಪ್ರದೇಶಗಳ ಮೂಲ ಸೊಗಡನ್ನು ನೆನಪಿಸಿದ್ದಾರೆ. ಮೂಲ ಸಂಸ್ಕೃತಿಯ ಅಭಿಮಾನವನ್ನು ಈ ಮೂಲಕ ಜಾಗೃತಿಗೊಳಿಸಿದ್ದು ಸಂತಸದ ಸಂಗತಿ ಎಂದು ಕ್ಷೇತ್ರ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್ ಪ್ರಶಂಸಿದರು.
ಚಂದ್ರಗುತ್ತಿ ಹೋಬಳಿ ಕಡಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹೊಸಬಾಳೆ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.

Also read: ದೇಶವೆಂದರೆ ಕೇವಲ ಅಭಿವೃದ್ಧಿಯಲ್ಲ, ಅದೊಂದು ಭಾವನೆ: ಆಯನೂರು ಮಂಜುನಾಥ್ ಅಭಿಮತ
ಕ್ಲಸ್ಟರ್ ನ 120 ಮಕ್ಕಳಿಗೆ ಹಾಡಿನ ಮೂಲಕ, ಊರು ಸುತ್ತೋಣದಲ್ಲಿ ಜೀವವೈವಿಧ್ಯ ದ, ಕುಲಕಸುಬುಗಳ ಪರಿಚಯ, ಸರಳ ಪ್ರಯೋಗಗಳು, ಮಾದರಿ ತಯಾರಿ ಮೂಲಕ ಕಲಿಕಾ ತರಬೇತಿ ನೀಡಲಾಯಿತು.

ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಗುರುರಾಜ್ ಪ್ರಾಸ್ತಾವಿಕ ಮಾತನಾಡಿದರು. ಎನ್.ಬಿ.ಶಶಿಕಲಾ ನಿರೂಪಿಸಿದರು.
(ವರದಿ: ಮಧುರಾಮ್, ಸೊರಬ)











Discussion about this post