ಕಲ್ಪ ಮೀಡಿಯಾ ಹೌಸ್ | ಕುಂದಗೋಳ |
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಸಿದ್ದುಕೃಷ್ಣ ಕ್ರಿಯೇಷನ್ಸ್ ಸಂಶಿ ರವರ ಬಸವಂತಪ್ಪ ಚ. ಹರಕುಣಿ ಅರ್ಪಿಸುವ ಕುಂದಗೋಳ ಕಲ್ಯಾಣಪುರ ಮಠದ ಲಿಂಗೈಕ್ಯ ಕರ್ತೃ ಶ್ರೀ ಬಸವಣ್ಣಜ್ಜನವರ ಜೀವನಾಧಾರಿತ ಕನ್ನಡ ಭಕ್ತಿಪ್ರಧಾನ ಕಿರುಚಿತ್ರ “ತ್ರಿವಿಧ ದಾಸೋಹಿ ಶ್ರೀಬಸವಣ್ಣಜ್ಜ” ಚಿತ್ರವನ್ನು ಅಭಿನವ ಶ್ರೀ ಬಸವಣ್ಣಜ್ಜನವರು ಲ್ಯಾಪಿಯಲ್ಲಿ ಬಟನ್ ಒತ್ತುವದರ ಮೂಲಕ ಬಿಡುಗಡೆ ಮಾಡಿದರು,
ಅವರು ಕುಂದಗೋಳ ಕಲ್ಯಾಣಪುರ ಮಠಕ್ಕೆ 50 ವರ್ಷ ತುಂಬಿದ ಸುಸಂದರ್ಭದಲ್ಲಿ ಮಠದ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಾಗೂ ಅಭಿನವ ಶ್ರೀಬಸವಣ್ಣಜ್ಜನವರ ಚರಪಟ್ಟಾಧಿಕಾರ ನಿಮಿತ್ಯ ಒಂದು ತಿಂಗಳು ನಡೆದ ಜಾತ್ರಾ ಮಹೋತ್ಸವದ ಬಸವ ಪುರಾಣದ ಬೃಹತ್ ವೇದಿಕೆಯಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನಗಳ ಮಧ್ಯೆ ವೇದಿಕೆಯಲ್ಲಿ ಬಿಡುಗಡೆ ನಂತರ ತಂಡಕ್ಕೆ ಶುಭಕೋರಿ ಮಾತನಾಡಿದರು.

ಶ್ರೀ ಶಿವಪ್ರಸಾದ್ ದೇವರು ಯರನಾಳ ಮಾತನಾಡಿ ಚಿತ್ರ ತಯಾರಿಸಲು ತಂಡ ಸಾಕಷ್ಟು ಶ್ರಮ ವಹಿಸಿದೆ ಎಲ್ಲರೂ ಈ ಚಿತ್ರವನ್ನು “ಸಿದ್ದುಕೃಷ್ಣ ಕ್ರಿಯೇಷನ್ಸ್” ಯ್ಯೂಟ್ಯುಬ್ ಚಾನೆಲ್ ನಲ್ಲಿ ನೋಡಿ ಚಿತ್ರ ತಂಡವನ್ನು ಪ್ರೋತ್ಸಾಹಿಸಿ ಎಂದರು.

ಕಾರ್ಯಕ್ರಮದಲ್ಲಿ ಚಿತ್ರತಂಡದ ಗೋವಿಂದ್ ಮಾಂಡ್ರೆ, ಸಿದ್ದುಕೃ?, ಪ್ರೇಮಾ ಹಿರೇಮಠ್, ಡಬ್ ಸ್ಮ್ಯಾಶ್ ಕಿಂಗ್ ಮಹೇಶ್ ಗೌಡ ಪಾಟೀಲ್, ಸಹನಾ ನವಲೆ, ಗೋಪಾಲ ಪತ್ತಾರ, ವಿದ್ಯಾಧರ ಸುಂಕದ, ವೀರನಗೌಡ ಹೊಸಮನಿ, ವಿರೇಶ್ ಪ್ರಳಯಕಲ್ಮಠ, ಸಿದ್ಧಲಿಂಗೇಶ, ಮಾ.ಸಾತ್ವಿಕ್ ಢೇಕಣೆ, ಮಾ.ಶಕ್ತಿಪ್ರಸಾದ, ಬೇಬಿ ದೀಕ್ಷಾ ಮುಂತಾದ ಕಲಾವಿದರು ತಂತ್ರಜ್ಞರು ಹಾಜರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post