ಕಲ್ಪ ಮೀಡಿಯಾ ಹೌಸ್ | ಗಾಜೀಪುರ |
ನಮ್ಮ ದೇಶದ ಪ್ರಧಾನಿ ಯಾರು ಎಂಬ ಪ್ರಶ್ನೆಗೆ ಉತ್ತರ ಏನು ಎಂಬುದು ವರನಿಗೆ ತಿಳಿದಿಲ್ಲ ಎಂಬ ಕಾರಣದಿಂದಾಗ ವಧು ಮದುವೆಯನ್ನೇ ರದ್ದು ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜೀಪುರದಲ್ಲಿ ನಡೆದಿದೆ.
ಇಲ್ಲಿನ ಸೈದಾಪುರದಲ್ಲಿ ಘಟನೆ ನಡೆದಿದ್ದು, ರಾಮ ಅವತಾರ ಎಂಬುವವರ ಪುತ್ರ ಶಿವಶಂಕರ್ ಹಾಗೂ ಕರಂದ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂತ್ ಪಟ್ಟಿ ಗ್ರಾಮದ ಲಖೇಡು ರಾಮ್ ಅವರ ಪುತ್ರಿ ರಂಜನಾ ಅವರೊಂದಿಗೆ ಇತ್ತೀಚಿಗೆ ವಿವಾಹವಿತ್ತು.
ಮದುವೆಯ ನಂತರ ವಧುವಿನ ಮನೆಯಲ್ಲಿ ಜೂನ್ 12 ರಂದು ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಸಮಾರಂಭದಲ್ಲಿ ಶಿವಶಂಕರ್ ಅವರಿಗೆ ಪತ್ನಿ ರಂಜನಾ ಮತ್ತು ಆಕೆಯ ಸೋದರ ಮಾವ ಸ್ಪೆಷಲ್ ಕ್ಲಾಸ್ ತೆಗೆದುಕೊಂಡು ಕೆಲವು ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿದ್ದಾರೆ.
ಅದರ ಭಾಗವಾಗಿ ಪತ್ನಿ ರಂಜನಾ ದೇಶದ ಪ್ರಧಾನಿಯ ಹೆಸರು ಹೇಳುವಂತೆ ಶಿವಶಂಕರ್ಗೆ ಕೇಳಿದ್ದಾರೆ . ಆದರೆ ಶಿವಶಂಕರ್ ಅವರು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಹೇಳಲು ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ, ವಧುವಿನ ಸಂಬAಧಿಕರು ಅವನನ್ನು ಅಪಹಾಸ್ಯ ಮಾಡಿದ್ದಾರೆ. ಮತ್ತು ಅವನನ್ನು ದಡ್ಡ ಎಂದು ಪರಿಗಣಿಸಿದ್ದಾರೆ.
ನಮ್ಮ ದೇಶದ ಪ್ರಧಾನಿಯವರ ಹೆಸರೇ ತಿಳಿದಿಲ್ಲದೇ ಇರುವುದು ಅವಮಾನಕರ ಸಂಗತಿ ಎಂದು ಪರಿಗಣಿಸಿದ ವಧು, ತತಕ್ಷಣವೇ ಮದುವೆಯನ್ನು ರದ್ದು ಮಾಡಿದ್ದಾಳೆ. ಮಾತ್ರವಲ್ಲ, ವರನ ಕಿರಿಯ ಸಹೋದರ ಅನಂತ್ ಎನ್ನುವವನನ್ನು ಸ್ಥಳದಲ್ಲೇ ವಿವಾಹವಾಗಿದ್ದಾಳೆ.
Also read: ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 15 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post