ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೌಡ ಸಾರಸ್ವತ ಸಮಾಜದ ಕಿರಿಯ ವಯಸ್ಸಿನ ಸ್ವಯಂಸೇವಕ ನಾಗೇಶ್ ಅನಂತ್ ಕಾಮತ್ (21) ಅನಾರೋಗ್ಯದಿಂದಾಗಿ ಮಣಿಪಾಲದಲ್ಲಿ ಇಂದು ಮೃತಪಟ್ಟಿದ್ದಾರೆ.
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ಭಾಸ್ಕರ್ ಜಿ. ಕಾಮತ್ ಅವರ ತಮ್ಮ ಅನಂತ್ ಕಾಮತ್ ಅವರ ಏಕೈಕ ಪುತ್ರ ನಾಗೇಶ್ ಸಮಾಜದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಮಂದಿರದ ಎಲ್ಲಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿ ಸಮಾಜದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಇವರ ನಿಧನಕ್ಕೆ ಗೌಡ ಸಾರಸ್ವತ ಸಮಾಜ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅಗಲಿದ ಯುವಕನ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಶ್ರೀ ವೆಂಕಟರಮಣ ಸ್ವಾಮಿ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದೆ.
Also read: ಗುರುವಿನಲ್ಲಿ ಶ್ರೀಹರಿಯನ್ನು ಕಾಣು: ಗುರುಪೂರ್ಣಿಮೆಯ ಮಹತ್ವವೇನು ಇಲ್ಲಿದೆ ನೋಡಿ
ನಾಳೆ ಬೆಳಿಗ್ಗೆ ರೋಟರಿ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post