ಕಲ್ಪ ಮೀಡಿಯಾ ಹೌಸ್ | ಸೊರಬ |
ಸಾಂಘಿಕ ಮನೋಭಾವದ ಕಾರ್ಯಗಳಿಂದ ಯಶಸ್ಸು ಸಾಧಿಸಬಹುದು. ಸರ್ಕಾರಿ ಕಾರ್ಯಕ್ರಮಗಳು ಹೀಗೆ ಸಾರ್ವಜನಿಕವಾಗಿ ಪಾಲ್ಗೊಂಡರೆ ಯಾವುದೆ ಅನುಷ್ಠಾನಗಳು ಅರ್ಥಪೂರ್ಣ ಎನಿಸುತ್ತದೆ ಎಂದು ಉದ್ರಿ ಗ್ರಾಪಂ ಅಧ್ಯಕ್ಷೆ ಮನಸ್ವಿನಿ ಸುರೇಶ್ ಹೇಳಿದರು.
ತಾಲ್ಲೂಕು ಉದ್ರಿ ಸಪ್ರೌಶಾಲೆ ಆವರಣದಲ್ಲಿ ವೃಕ್ಷಾರೋಪಣ ನೆರವೇರಿಸಿ ಅವರು ಮಾತನಾಡಿ, ಡಾಕ್ಟರ್ ಮಹೇಶ್ ಎಂ. ಕೆ. ವೈದ್ಯಾಧಿಕಾರಿಗಳು ಉದ್ರಿ ಇವರು ಪ್ರಾಸ್ತವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಮುಂದಾಗಿದ್ದು, ಸ್ತಳೀಯ ಆಡಳಿತ, ಸಾರ್ವಜನಿಕರು ಸಹಕರಿಸುತ್ತಿದ್ದಾರೆ ಎಂದರು.

ಇಲ್ಲಿನ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಹೇಶ್ ಸಾರಥ್ಯದಲ್ಲಿ ನೂರಕ್ಕೂ ಅಧಿಕ ಅಮೂಲ್ಯ ಗಿಡಗಳನ್ನು ನೆಡಲಾಯಿತು. ಪ್ರೌಢಶಾಲಾ ಮಕ್ಕಳು ಉದ್ರಿ ಗ್ರಾಮದಲ್ಲಿ ಪರಿಸರ ಜಾಗೃತಿ ಕುರಿತ ಜಾಥಾ ನಡೆಸಿದರು.

ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post