ಕಲ್ಪ ಮೀಡಿಯಾ ಹೌಸ್ | ಸೊರಬ |
ಟ್ರಾನ್ಸ್’ಫಾರ್ಮರ್ ಬಳಿ ಹುಲ್ಲು ಮೇಯಲು ಹೋದ ಸೀಮೆ ಹಸುವೊಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಘಟನೆ ಪಟ್ಟಣದ ಮರೂರು ರಸ್ತೆಯಲ್ಲಿ ನಡೆದಿದೆ.
ಚಾಮರಾಜಪೇಟೆಯ ನಾಗರಾಜಗೌಳಿ ಎಂಬುವವರಿಗೆ ಸೇರಿದ ಹಸುವಾಗಿದ್ದು, ಮೇಯಲು ಹೋದ ಹಸು ಮನೆಗೆ ಹಿಂದಿರುಗಿರಲಿಲ್ಲ. ಎಲ್ಲಡೆ ಹಿಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಮರುದಿನ ಬೆಳಗ್ಗೆ ವಿದ್ಯುತ್ ತಗುಲಿ ಮೃತ ಪಟ್ಟಿರುವುದು ಕಂಡುಬAದಿದೆ.
ಕಳೆದ ಮೂರು ದಿನದ ಹಿಂದೆಯಷ್ಟೆ ಮೊದಲ ಕರುವಿಗೆ ಜನ್ಮ ನೀಡಿದ ಹಸು ನಿತ್ಯ ಸುಮಾರು 15 ಲೀಟರ್ ಹಾಲು ನೀಡುತ್ತಿತ್ತು. ಸುಮಾರು ಒಂದು ಲಕ್ಷ ರೂ., ಮೌಲ್ಯದ ಹಸು ಎನ್ನಲಾಗಿದೆ.
Also read: ಶಿವಮೊಗ್ಗ ಟು ಬೆಂಗಳೂರು: ಝೀರೋ ಟ್ರಾಫಿಕ್’ನಲ್ಲಿ ಮೂರು ದಿನದ ಹಸುಗೂಸು ಶಿಫ್ಟ್
ಮೆಸ್ಕಾಂ ಇಲಾಖೆಯ ಬೇಜವಾಬ್ದಾರಿಯಿಂದ ಹಸು ಮೃತಪಟ್ಟಿದೆ. ಹೈನುಗಾರಿಕೆಯಿಂದಲೇ ಜೀವನ ಸಾಗಿಸುತ್ತಿದ್ದ ನಾಗರಾಜ್ ಗೌಳಿ ಅವರಿಗೆ ಮೆಸ್ಕಾಂ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಪುರಸಭೆ ವ್ಯಾಪ್ತಿಯಲ್ಲಿನ ಟ್ರಾನ್ಸ್’ಫಾರ್ಮರ್’ಗಳ ಸುತ್ತ ಬೇಲಿ ನಿರ್ಮಿಸಬೇಕು ಎಂದು ಬಜರಂಗದಳದ ರವಿ ಗುಡಿಗಾರ್ ಒತ್ತಾಯಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post