ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕೇಂದ್ರ ಗೃಹ ಸಚಿವ ಅಮಿತ್ ಶಾ Amith Shah ನೇತೃತ್ವದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಎನ್’ಸಿಬಿ ವತಿಯಿಂದ ಬರೋಬ್ಬರಿ 10 ಲಕ್ಷ ಕೆಜಿ ಮಾದಕದ್ರವ್ಯವನ್ನು ನಾಶಪಡಿಸಲಾಗಿದೆ.
ಮಾದಕದ್ರವ್ಯ ಸಾಗಾಣಿಕೆ ಮತ್ತು ರಾಷ್ಟ್ರೀಯ ಭದ್ರತೆಗೆ ಕುರಿತಂತೆ ನಡೆದ ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ವಿವಿಧ ಭಾಗಗಳ, ಎಲ್ಲಾ ರಾಜ್ಯಗಳ ಮಾದಕವಸ್ತು ವಿರೋಧಿ ಕಾರ್ಯಪಡೆಯ ಸಮನ್ವಯದೊಂದಿಗೆ ಎನ್’ಸಿಬಿ 1.44 ಲಕ್ಷ ಕೆಜಿಗೂ ಹೆಚ್ಚಿನ ಡ್ರಗ್ಸ್ ನಾಶಪಡಿಸಿದೆ. ಇದು ಇದುವರೆಗೆ ಒಂದೇ ದಿನದಲ್ಲಿ ನಾಶಪಡಿಸಿದ ಅತಿ ಹೆಚ್ಚು ಮಾದಕದ್ರವ್ಯ ಎಂಬ ದಾಖಲೆ ಬರೆದಿದೆ. ಕಳೆದ ವರ್ಷದಿಂದ ಇಲ್ಲಿಯವರೆಗೆ 10 ಲಕ್ಷ ಕೆಜಿಗೂ ಅಧಿಕ, ಸುಮಾರು 12,000 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯವನ್ನು ನಾಶಪಡಿಸಿದೆ ಎಂದು ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೊಸ ಗುರುತನ್ನು ಪ್ರಭೆ ನೀಡುತ್ತಿರುವ ವೇಳೆಯಲ್ಲಿಯೇ ಮಾದಕವಸ್ತು ವ್ಯಾಪಾರವು ರಾಷ್ಟ್ರೀಯ ಭದ್ರತೆಯ ಸಮಸ್ಯೆಯಾಗಿದ್ದು, ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯ ತುಂಬಾ ಅಗತ್ಯ ಎಂದು ಸ್ಪಷ್ಟವಾಗಿ ನಂಬುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರ ಮಾದಕ ದ್ರವ್ಯ ಮುಕ್ತ ಭಾರತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಗೃಹ ಸಚಿವಾಲಯವು ಮಾದಕ ದ್ರವ್ಯ ದಂಧೆಗೆ ಕಡಿವಾಣ ಹಾಕಲು ಶೂನ್ಯ ಸಹಿಷ್ಣು ನೀತಿಯನ್ನು ಅಳವಡಿಸಿಕೊಂಡಿದೆ.
ಇದರ ಪರಿಣಾಮವಾಗಿ, 2013 ರಿಂದ ಮಾದಕವಸ್ತು ವಶಪಡಿಸಿಕೊಳ್ಳುವಿಕೆಯು ದುಪ್ಪಟ್ಟಾಗಿದೆ. ಕಳೆದ 9 ವರ್ಷಗಳಲ್ಲಿ ಎನ್’ಸಿಬಿ ವಶಪಡಿಸಿಕೊಂಡ ಮಾದಕವಸ್ತುಗಳ ಸಂಖ್ಯೆ ಸುಮಾರು ಶೇ.100 ರಷ್ಟು ಹೆಚ್ಚಿದ್ದರೆ, ಮಾದಕವಸ್ತು ಕಳ್ಳಸಾಗಣೆದಾರರ ವಿರುದ್ಧ ಶೇ.181 ಹೆಚ್ಚು ಪ್ರಕರಣಗಳು ದಾಖಲಾಗಿವೆ ಮತ್ತು ಕಳ್ಳಸಾಗಣೆದಾರರ ಬಂಧನಗಳು ಶೇ.296ರಷ್ಟು ಹೆಚ್ಚಾಗಿದೆ. ಮಾದಕವಸ್ತು ವ್ಯಾಪಾರವನ್ನು ಬೇರುಸಹಿತ ಕಿತ್ತೊಗೆಯುವ ಸಲುವಾಗಿ, ಶಾ ಅವರ ಮಾರ್ಗದರ್ಶನದಲ್ಲಿ, ಗೃಹ ಸಚಿವಾಲಯವು ಒಂದೆಡೆ ರಾಷ್ಟ್ರೀಯ ನಾರ್ಕೋ ಕೋಆರ್ಡಿನೇಷನ್ ಪೋರ್ಟಲ್ (ಎನ್ಸಿಒಆರ್’ಡಿ) ಅನ್ನು ಸ್ಥಾಪಿಸಿದ್ದರೆ ಮತ್ತು ಮತ್ತೊಂದೆಡೆ ಪ್ರತಿ ರಾಜ್ಯ. ಪೊಲೀಸ್ ಇಲಾಖೆಯಲ್ಲಿ ಮಾದಕವಸ್ತು ವಿರೋಧಿ ಕಾರ್ಯಪಡೆಯನ್ನು ರಚಿಸಿದೆ.
Also read: ಶಾಕಿಂಗ್! ಉಗ್ರರ ತರಬೇತಿ ತಾಣವಾಗಿತ್ತು ಕೋಳಿ ಫಾರಂ: ಆಸ್ತಿ ಜಪ್ತಿ ಮಾಡಿದ ಎನ್’ಐಎ
ಭಾರತದ ರಾಜಕೀಯದಲ್ಲಿ ಮರುವ್ಯಾಖ್ಯಾನ ಬರೆಯುತ್ತಿರುವ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಗುಪ್ತಚರ ಸಂಸ್ಥೆಗಳು ಎಲ್ಲಾ ಹಣಕಾಸಿನ ದಾಖಲೆಗಳನ್ನು ಪ್ರತ್ಯೇಕವಾಗಿ ವಿಶ್ಲೇಷಿಸಿದ ನಂತರ ಹಣಕಾಸು ಸಂಬಂಧಪಟ್ಟ ತನಿಖೆಗಳು ಮತ್ತು ಕಳ್ಳಸಾಗಣೆದಾರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಹೆಚ್ಚಾಗಿದೆ.
2022 ರಲ್ಲಿ, ಎನ್’ಸಿಬಿಯಂತಹ 27 ಪ್ರಕರಣಗಳಲ್ಲಿ ಹಣಕಾಸು ತನಿಖೆ ನಡೆಸಿ, ಅದರಲ್ಲಿ 15,98,37,784 ರೂ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿತು. ಡಿಇಎ, ಎಎಫ್ಪಿ, ಎನ್ಸಿಎ, ಆರ್’ಸಿಎಂಪಿ ಮುಂತಾದ ಅಂತಾರಾಷ್ಟ್ರೀಯ ಏಜೆನ್ಸಿಗಳ ಸಮನ್ವಯದಲ್ಲಿ ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾ ನಿಯಂತ್ರಣಕ್ಕೆ ಕ್ಷಿಪ್ರ ಕೆಲಸ ಮಾಡಲಾಗುತ್ತಿದೆ. ಅಲ್ಲದೆ, 44 ದೇಶಗಳೊಂದಿಗೆ ಈ ವಿಷಯದ ಬಗ್ಗೆ ದ್ವಿಪಕ್ಷೀಯ ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ದೇಶದ 372 ಜಿಲ್ಲೆಗಳಲ್ಲಿ ಮಾದಕದ್ರವ್ಯ ನಾಶ ಮುಕ್ತಿ ಅಭಿಯಾನದಡಿ 8000ಕ್ಕೂ ಹೆಚ್ಚು ಯುವ ಸ್ವಯಂಸೇವಕರ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಇದುವರೆಗೆ 3 ಕೋಟಿಗೂ ಹೆಚ್ಚು ಯುವಕರು ಹಾಗೂ 2 ಕೋಟಿಗೂ ಹೆಚ್ಚು ಮಹಿಳೆಯರನ್ನು ತಲುಪಲಾಗಿದೆ.
ಮಾದಕ ವ್ಯಸನವು ವ್ಯಕ್ತಿ, ಸಮಾಜ, ರಾಷ್ಟ್ರ ಮತ್ತು ಇಡೀ ಜಗತ್ತಿಗೆ ಹಾನಿಕಾರಕ ಎಂಬುದು ಶಾರವರ ಬಲವಾದ ಅಭಿಪ್ರಾಯ. ಇದನ್ನು ಬೇಗ ನಿಯಂತ್ರಿಸದಿದ್ದರೆ ಹೆಚ್ಚು ಹಾನಿಯುಂಟಾಗುತ್ತದೆ. ಇದರ ವ್ಯಸನವು ಯುವಕರನ್ನು ಸಮಾಜಕ್ಕೆ ಹೊರೆಯನ್ನಾಗಿ ಮಾಡುತ್ತದೆ ಮತ್ತು ಅದರ ವ್ಯವಹಾರದಿಂದ ಬರುವ ಆದಾಯವು ಭಯೋತ್ಪಾದನೆಯಂತಹ ಸಮಸ್ಯೆಗಳನ್ನು ಬಲಪಡಿಸುತ್ತದೆ. ಸ್ವಾತಂತ್ರೋತ್ಸವದ ಈ ಅಮೃತ ಕಾಲದಲ್ಲಿ ಮೋದಿ-ಶಾ ಜೋಡಿಯ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡು, ತ್ರಿಕೋನ ತಂತ್ರದಡಿಯಲ್ಲಿ `ನಶ ಮುಕ್ತ ಭಾರತ’ ಎಂಬ ಕರೆಯು ನಿಜವಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post