ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸಂಸಾರದಲ್ಲಿನ ವಿಷವನ್ನು ನಿವಾರಿಸಿ ಜ್ಞಾನವೆಂಬ ಅಮೃತ ಉಣಿಸುವುದೇ ಭಾಗವತ ಶ್ರವಣ ಎಂದು ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಅಭಿಪ್ರಾಯಪಟ್ಟರು.
ನಗರದ ಅಗ್ರಹಾರದ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಉತ್ತರಾದಿ ಮಠದಲ್ಲಿ ಅಧಿಕ ಶ್ರಾವಣ ಅಂಗವಾಗಿ ಏರ್ಪಡಿಸಿರುವ ಉಪನ್ಯಾಸ ಮಾಲಿಕೆಯಲ್ಲಿ ಅವರು ಗುರುವಾರ ಪ್ರವಚನ ನೀಡಿದರು.
ಇತ್ತೀಚಿನ ದಶಕದಲ್ಲಿ ವೈರಾಗ್ಯ ಎಂಬುದು ಕಡಿಮೆಯಾಗುತ್ತಿದೆ. ಎ¯್ಲೆಡೆ ಉಪಭೋಗ ಸಂಸ್ಕೃತಿಯೇ ಹೆಚ್ಚಾಗಿದೆ. ಜೀವನ ಎಂದರೆ ಎಲ್ಲವನ್ನೂ ಅನುಭವಿಸಲೇಬೇಕು ಎಂಬ ಸವಾಲನ್ನು ಸ್ವಯಂ ಸ್ವೀಕರಿಸಿದವರೇಹೆಚ್ಚು. ಆದರೆ ಜೀವನದಲ್ಲಿ ತ್ಯಾಗ, ಭಕ್ತಿ ಇದ್ದರೆ ಮಾತ್ರ ಸ್ವಾರಸ್ಯ ಇರುತ್ತದೆ. ಭಾಗವತ ಎಂಬುದು ದೇವರ ಸಾಕ್ಷಾತ್ಕಾರಕ್ಕೆ ಬಹು ದೊಡ್ಡ ಸಾಧನವಾಗಿದೆ ಎಂದು ಭಾಗವತ ಹೇಳಿದೆ ಎಂದರು.
ಪುರಾಣ, ಪ್ರವಚನ ಕೇಳುವವರಿಗೆ ಭಕ್ತಿ ಎಷ್ಟು ಮುಖ್ಯವೋ, ಅದನ್ನು ಹೇಳುವವರಿಗೂ ಶ್ರೇಷ್ಠತೆ ಇರಬೇಕು. ಆಗ ಮಾತ್ರ ಜ್ಞಾನ ಕಾರ್ಯ ಸಾರ್ಥಕವಾಗುತ್ತದೆ ಎಂದವರು ನುಡಿದರು.
ಶ್ರೀಮದ್ ಭಾಗವತ ಎಂದರೆ ಅದು ವಿಶ್ವದ ಸತ್ಸಂಗ. ಇಂದು ಜಗತ್ತಿನಲ್ಲಿ ಎಲ್ಲವೂ ದೊರಕುತ್ತದೆ. ಆದರೆ ಸತ್ಸಂಗ ಬಹಳ ದುರ್ಲಭವಾಗಿದೆ. ಸತ್ಸಂಗ ಗಳಿಸಲಿಕ್ಕಾಗಿ ನಾವೆಲ್ಲಾ ಭಾಗವತದ ಮೊರೆ ಹೋಗೋಣ ಎಂದರು.
Also read: ಕಲಾಪದಿಂದ 10 ಬಿಜೆಪಿ ಶಾಸಕರ ಅಮಾನತು: ಎಸ್. ದತ್ತಾತ್ರಿ ಖಂಡನೆ
ಭಾಗವತ ಶ್ರವಣ ಇದ್ದಲ್ಲಿ ಯಾವ ಋಣಾತ್ಮಕ ಶಕ್ತಿಗಳೂ, ವಿಧ್ವಂಸಕ ಚಟುವಟಿಕೆಗಳೂ ನಿಷ್ಕ್ರೀಯವಾಗುತ್ತವೆ. ಸಂಸಾರದಲ್ಲಿ ಅತಿ ಹೆಚ್ಚು ಇರುವ ವಿಷವನ್ನು ನಿವಾರಿಸಿ ಜ್ಞಾನವೆಂಬ ಅಮೃತ ಉಣಿಸುವುದೇ ಭಾಗವತ ಶ್ರವಣದ ಮುಖ್ಯ ಉದ್ದೇಶ ಎಂದು ಅನಿರುದ್ಧಾಚಾರ್ಯ ಹೇಳಿದರು.
ಭಾಗವತ ಅರ್ಥವಾಗಬೇಕು ಎಂದರೆ ಮಾತ್ಸರ್ಯ ಇರಬಾರದು. ದೀನತ್ವ, ವಿಶ್ವಾಸ ಮತ್ತು ಭಾವುಕತೆ ಇದ್ದವರಿಗೆ ಮಾತ್ರ ವೇದದ ಸಾರವಾದ ಭಾಗವತ ತಿಳಿಯುತ್ತದೆ. ಹಾಗಾಗಿ ಭಾವುಕರೇ ಭಾಗವತಕ್ಕೆ ಅಧಿಕಾರಿಗಳಾಗಿದ್ದಾರೆ ಎಂದರು.
ಉಪನ್ಯಾಸದ ನಂತರ ಭಾಗವತ ಗ್ರಂಥ, ಧನ್ವಂತರಿ ದೇವರು, ಶ್ರೀ ಸತ್ಯ ಸಂಕಲ್ಪ ತೀರ್ಥರು, ಶ್ರೀ ಸತ್ಯ ಸಂತುಷ್ಟ ತೀರ್ಥರ ವೃಂದಾವನಕ್ಕೆ ಮಂಗಳಾರತಿ, ಅಧಿಕ ಮಾಸದ ಅಂಗವಾಗಿ ವಿಶೇಷ ಪೂಜಾದಿಗಳು ನೆರವೇರಿದವು. ನೂರಾರು ಭಕ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post