ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ಯುವಜನತೆಗೆ ಆರೋಗ್ಯ, ಪ್ರಥಮ ಚಿಕಿತ್ಸೆ, ಅಪರಾಧ ತಡೆ, ರಕ್ತದಾನ ಮತ್ತು ಏಡ್ಸ್ ಜಾಗೃತಿಯಂತಹ ಸೂಕ್ಷ್ಮ ವಿಚಾರಗಳ ಕುರಿತ ಮಾಹಿತಿ ಅತ್ಯಂತ ಅವಶ್ಯಕ ಎಂದು ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ಡಾ. ಸಂಧ್ಯಾ ಕಾವೇರಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ Kuvempu University ರಾಷ್ಟೀಯ ಸೇವಾ ಯೋಜನೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಇಂದು ವಿಶ್ವವಿದ್ಯಾಲಯದ ನಗರ ಕಛೇರಿ, ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯ ಮಟ್ಟದ ಏಡ್ಸ್ ಜಾಗೃತಿ, ರಕ್ತದಾನದ ಮಹತ್ವ, ಪ್ರಥಮ ಚಿಕಿತ್ಸೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಡಾ ನಾಗರಾಜ ಪರಿಸರ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಪ್ರಶಂಶಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಡಾ ನಾಗರಾಜ ಪರಿಸರ ಮಾತನಾಡಿ, ಈ ಕಾರ್ಯಾಗಾರಕ್ಕೆ ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುತ್ತಿದೆ. ತಾವೆಲ್ಲರೂ ಇದರ ಸದುಪಯೋಗ ಪಡೆದುಕೊಂಡು ಸಮಾಜಕ್ಕೆ ಇದರ ಉತ್ತಮ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಮಂಗಳಾ ಎನ್. ಎಮ್. (ಜಿಲ್ಲಾ ಮೇಲ್ವಿಚಾರಕರು, ಡ್ಯಾಪ್ಕೋ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೆಗ್ಗಾನ್ ಆಸ್ಪತ್ರೆ) ಇವರು ಏಡ್ಸ್ ಜಾಗೃತಿ ಕುರಿತು ಪ್ರಾತ್ಯಾಕ್ಷಿಕೆ ನೀಡುವ ಮೂಲಕ ಹೆಚ್ ಐ ವಿ (ಏಡ್ಸ್) ಧನಾತ್ಮಕತೆಯಲ್ಲಿ ಭಾರತ ಪ್ರಪಂಚದಲ್ಲಿ 3ನೇ ಸ್ಥಾನದಲ್ಲಿದೆ. ಏಡ್ಸ್ ತಡೆಗಟ್ಟುವ ಕ್ರಮಗಳನ್ನು ಪ್ರಶ್ನೋತ್ತರಗಳ ಮೂಲಕ ವಿವರಿಸಿ ತಿಳಿಸಿದರು.
Also read: ಕರಾಟೆ ಸ್ವರ್ಧೆ: ಕ್ರೈಸ್ಟ್ಕಿಂಗ್ ಸಂಸ್ಥೆಯ ಸಾವನ್ ವರ್ಮ, ಆಯುಶ್ರೀ ಜಿಲ್ಲಾಮಟ್ಟಕ್ಕೆ ಆಯ್ಕೆ
ಡಾ. ವಿ. ಎಲ್. ಎಸ್. ಕುಮಾರ್, ಅಂತರಾಷ್ಟೀಯ ತರಬೇತುದಾರರು ಹಾಗು ಕಾರ್ಯದರ್ಶಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಶಿವಮೊಗ್ಗ ಇವರು ರಕ್ತದಾನದ ಮಹತ್ವ ಹಾಗೂ ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಾಕ್ಷಿಕೆ ನೀಡುವ ಮೂಲಕ ಅತ್ಯುನ್ನತ ಮಾಹಿತಿ ನೀಡಿದರು. ಈಗಿನ ವಿದ್ಯಾರ್ಥಿಗಳಲ್ಲಿ ಮೊಬೈಲ್ ಸೆಲ್ಫಿ ಹುಚ್ಚಿನಿಂದಾಗುವ ಅಪಾಯಗಳ ಕುರಿತು ಹಾಗೂ ಪ್ರಥಮ ಚಿಕಿತ್ಸೆ ಗೊತ್ತಿದ್ದರೆ ಅಪಘಾತ ಸಂದರ್ಭದಲ್ಲಿ ನಾವು ಮಾಡಬೇಕಾದ ಸುರಕ್ಷತಾ ಕ್ರಮಗಳ ಕುರಿತು ವಿವರಿಸಿ ತಿಳಿಸಿದರು.
ಎನ್ಎಸ್ಎಸ್ ಸ್ವಯಂ ಸೇವಕಿಯರು ಎನ್ಎಸ್ಎಸ್ ಗೀತೆ ಹಾಡಿದರು. ರಾಸೇಯೋ ಅಧಿಕಾರಿಗಳಾದ ಮಲ್ಲಿಕಾರ್ಜುನ್ ನಿರೂಪಿಸಿ, ಡಾ. ಪ್ರಕಾಶ್ ವಂದಿಸಿದರು.
ಶಿವಮೊಗ್ಗ ನಗರದ ಸ್ಥಳೀಯ ಕಾಲೇಜುಗಳ ಒಟ್ಟು 150 ಸ್ವಯಂ ಸೇವಕ/ಸೇವಕಿಯರು ಅಧಿಕಾರಿಗಳು ಭಾಗವಹಿಸಿ ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post