ದೇಶದ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ 3 ಮಹತ್ವದ ಹಂತ – ತಲುಪಿದ್ದು ಇಂದು ಸಂಜೆ 6 ಘಂಟೆ 4 ನಿಮಿಷಕ್ಕೆ, ವಿಕ್ರಮ್ ಲ್ಯಾಂಡರ್ನ್ನು ಚಂದ್ರನಂಗಳದಲ್ಲಿ ಇಳಿಸಿ ಮೈಲುಗಲ್ಲನ್ನು ಸ್ಥಾಪಿಸಲಿರುವ ನಮ್ಮ ಹಮ್ಮೆಯ ಇಸ್ರೋ. ISRO 1969 ರಲ್ಲಿ ಡಾ. ವಿಕ್ರಂ ಸಾರಾಭಾಯಿ ನೇತೃತ್ವದಲ್ಲಿ ಸಮಾನ ಮನಸ್ಕರೊಂದಿಗೆ ಪ್ರಾರಂಭವಾದ ಸಂಸ್ಥೆ ಇಲ್ಲಿಯವರೆಗೆ ಸಾಕಷ್ಟು ದಾಖಲೆಗಳನ್ನು ಸೃಷ್ಟಿಸಿ ಅಂತರಿಕ್ಷದಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿದೆ. ಜುಲೈ 14ರಂದು ಡಾ. ಸೋಮನಾಥ್ ಅಧ್ಯಕ್ಷತೆಯಲ್ಲಿ ನಿರ್ಮಾಣವಾದ ಚಂದ್ರಯಾನ – 3 ಭೂಮಿಯಿಂದ ಹೊರಟಿದೆ ಎಂದು ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್, ಉಪ ಪ್ರಾಂಶುಪಾಲರಾದ ಪ್ರವೀಣ್ ಎಸ್. ಎಸ್. ಹಾಗೂ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
Also read: ಬಹುದಿನಗಳ ಬೇಡಿಕೆ ಈಡೇರಿಕೆ | ಕುಂಸಿ-ಅರಸಾಳುವಿನಲ್ಲಿ ರೈಲು ನಿಲುಗಡೆ: ಸಂಸದ ರಾಘವೇಂದ್ರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post