ಇಸ್ರೋ ISRO ವಿಜ್ಞಾನಿಗಳ ಮಹತ್ವದ ಸಾಧನೆ ಇಡೀ ಜಗತ್ತೇ ಮೆಚ್ಚುವಂತದ್ದು, ವಿಜ್ಞಾನಿಗಳ ಸಾಧನೆಯಿಂದ ವಿಶ್ವ ಭಾರತದ ಕಡೆ ನಿಬ್ಬೆರಗಾಗಿ ನೋಡುವಂತೆ ಮಾಡಿದೆ ಎಂದು ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಎನ್. ರಮೇಶ್ ಹೇಳಿದರು.
Also read: ರಾಷ್ಟ್ರೀಯ ಶಿಕ್ಷಣ ನೀತಿ ರದ್ಧತಿಗೆ ಮುಂದಾಗಿರುವುದು ಖಂಡನೀಯ: ಎಬಿವಿಪಿ ಪ್ರತಿಭಟನೆ
ಪ್ರಾಂಶುಪಾಲೆ ಸುನೀತಾದೇವಿ ಮಾತನಾಡಿ, ಭಾರತ ಬಹುದೊಡ್ಡ ಸಾಧನೆ ಮಾಡಿದೆ. ನಾವು ಯಾರಿಗೂ ಕಮ್ಮಿ ಎಲ್ಲ ಎಂಬುದನ್ನು ತೋರಿಸಿದೆ. ಈ ಚಂದ್ರಯಾನ ಮುಂದಿನ ಪೀಳಿಗೆಗೆ ಅನ್ವೇಷಣೆಯ ದಾರಿಯನ್ನು ಹುಟ್ಟುಹಾಕುತ್ತದೆ. ಮಕ್ಕಳು ಕೂಡ ವಿಜ್ಞಾನದ ಕಡೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲ ಪ್ರದೀಪ್ ಮತ್ತು ಶಾಲಾ ಉಪಾಧ್ಯಾಯ ಹಾಗೂ ಸಿಬ್ಬಂದಿಗಳು ಮತ್ತು ಮಕ್ಕಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post