ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉಡುಪಿ ಶ್ರೀಕೃಷ್ಣ ಮಠಕ್ಕೆ #KrishnaMutt ನಾಲ್ಕನೆಯ ಬಾರಿಗೆ ಪರ್ಯಾಯ ಪೀಠಾಧೀಶರಾದ ಪುತ್ತಿಗೆ ಮಠದ #PuttigeMutt ಉಭಯ ಶ್ರೀಗಳಿಗೆ ಡಿ.30ರಂದು ನಾಗರಿಕ ಗೌರವ ಹಮ್ಮಿಕೊಳ್ಳಲಾಗಿದೆ.
ಉಡುಪಿ #Udupi ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಶ್ರೀ ಸುಶೀಂದ್ರತೀರ್ಥ ಶ್ರೀಪಾದ ಯತಿದ್ವಯರನ್ನು ಶಿವಮೊಗ್ಗ ಜನತೆಯ ಪರವಾಗಿ ಡಿ.30ರ ಶನಿವಾರ ಸಂಜೆ 6.30ಕ್ಕೆ ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಾಗರಿಕ ಗೌರವ ಸಮರ್ಪಣೆ ಮಾಡಲಾಗುತ್ತದೆ.
ಮುಖ್ಯ ಅತಿಥಿಗಳಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್, ಮಧ್ವ ಸಂಘದ ಜಿಲ್ಲಾಧ್ಯಕ್ಷ ಕುಷ್ಠಗಿ ವಾಸುದೇವಮೂರ್ತಿ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ ಭಾಗವತ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹಾಗೂ ದುರ್ಗಿಗುಡಿ ರಾಯರ ಮಠದ ಸಮಿತಿಯ ಸುರೇಶ್ ಪಾಲ್ಗೊಳ್ಳಲಿದ್ದು, ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷ ತೆ ವಹಿಸುವರು.
ಈ ಸಂದರ್ಭದಲ್ಲಿ ಖ್ಯಾತ ವಿದ್ವಾಂಸ ಪಂಡಿತ ಶ್ರೀ ಕೃಷ್ಣಾಚಾರ್ ರಾಯಚೂರ್ ಅವರಿಂದ ಅಭಿನಂದನಾ ಭಾಷಣ ಜರುಗಲಿದೆ. ಅಂದು ಸಂಜೆ 6 ಗಂಟೆಗೆ ನಗರದ ಟಿ.ಸೀನಪ್ಪಶೆಟ್ಟಿ ಸರ್ಕಲ್ (ಗೋಪಿ ವೃತ್ತ)ದಿಂದ ಉಭಯ ಶ್ರೀಗಳವರನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಿ, ರಾಯರ ಮಠಕ್ಕೆ ಕರೆತರಲಾಗುತ್ತದೆ. ಶಿವಮೊಗ್ಗೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕ್ರಮದ ಆಯೋಜಕರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post