ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಪವಿತ್ರ ಭೂಮಿಯಲ್ಲಿ ನಿನ್ನೆ ಪ್ರತಿಷ್ಠಾಪನೆಗೊಂಡ ಶ್ರೀ ರಾಮಚಂದ್ರ Ayodhya Shri Ramachandra ಪ್ರಭುವಿಗೆ ವಜ್ರದ ವ್ಯಾಪಾರಿಯೊಬ್ಬರು ಬರೋಬ್ಬರಿ ಆರು ಕೆಜಿ ತೂಕದ ಕಿರೀಟವನ್ನು ಕಾಣಿಕೆಯಾಗಿ ನೀಡಿದ್ದಾರೆ.
ಗುಜರಾತ್ ರಾಜ್ಯದ ಸೂರತ್’ನ ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿಯ Green Lab Diamond Company of Surat ಮಾಲೀಕ ಮುಖೇಶ್ ಪಟೇಲ್ ಅವರು 6 ಕಿಲೋಗ್ರಾಂ ತೂಕದ ಕಿರೀಟವನ್ನು ಭಗವಾನ್ ರಾಮನಿಗೆ ಅರ್ಪಿಸಿದ್ದಾರೆ.
ಈ ಚಿನ್ನದ ಕಿರೀಟದ ಬೆಲೆ ಬರೋಬ್ಬರಿ 11 ಕೋಟಿ ರೂಪಾಯಿಗಳಾಗಿದ್ದು, ಅತ್ಯಂತ ಸುಂದರವಾಗಿರುವ ಇದು ಮರ್ಯಾದಾ ಪುರುಷೋತ್ತಮ ಶಿರವನ್ನು ಅಲಂಕರಿಸಲಿದೆ.
Also read: ಆಂಜನೇಯ ಜನ್ಮಭೂಮಿ ಅಭಿವೃದ್ಧಿ ಪಡಿಸುವುದು ನಮ್ಮ ಮುಂದಿನ ಗುರಿ: ಬಸವರಾಜ ಬೊಮ್ಮಾಯಿ
ಈ ಕಿರೀಟವನ್ನು ಚಿನ್ನ, ವಜ್ರ ಹಾಗೂ ಅತ್ಯಮೂಲ್ಯವಾದ ರತ್ನದ ಕಲ್ಲುಗಳಿಂದ ಅಲಂಕರಿಸಿ ತಯಾರಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















